ಬೆಂಗಳೂರು –
ಈಗಾಗಲೇ 6ನೇ ವೇತನ ಆಯೋಗ ಅವಧಿ ಮುಕ್ತಾಯವಾಗಿದ್ದು ಹೀಗಾಗಿ ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ನೀಡುವ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಅವರು 7ನೇ ವೇತನ ಆಯೋಗಕ್ಕೆ ಸುಧಾಕರ್ ರಾವ್ ಅವರನ್ನು ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಘೋಷಣೆ ಮಾಡಿದ್ದಾರೆ ದಾವಣಗೆರೆ ಯಲ್ಲಿ ಈ ಒಂದು ಹೆಸರನ್ನು ಘೋಷಣೆ ಮಾಡಿ ಒಂದು ವಾರ ಮೇಲಾಯಿತು
ನಂತರ ಈ ಒಂದು ಸಂತೋಷದ ಸುದ್ದಿಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.ಇಷ್ಟೇಲ್ಲಾ ಚಟುವಟಿಕೆಗಳು ನಡೆದ ಮೇಲೂ ಸಧ್ಯ ಈವರೆಗೆ ಈ ಕುರಿತಂತೆ ರಾಜ್ಯ ಸರ್ಕರದಿಂದ ಯಾವುದೇ ಅಧಿಕೃತವಾದ ಆದೇಶ ಬರುತ್ತಿಲ್ಲ ಹೀಗಾಗಿ ಈ ಒಂದು ವಿಚಾರದಲ್ಲಿ ರಾಜ್ಯದ ಸರ್ಕಾರಿ ನೌಕರರು ಆತಂಕಗೊಂಡಿದ್ದು ಇವೆಲ್ಲದರ ನಡುವೆ ಇವತ್ತು ಅಧಿಕಾರಿಗಳೊಂದಿಗೆ ಮೊದಲು ಸಭೆಯನ್ನು ನಂತರ ಸಚಿವ ಸಂಪುಟದ ಸಭೆಯನ್ನು ಕರೆಯ ಲಾಗಿದ್ದು ಹೀಗಾಗಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರೇ ಮೊದಲು ಈಗಲೇ ಮುಖ್ಯಮಂತ್ರಿ ಅವರಿಗೆ ಸಂಪರ್ಕ ಮಾಡಿ ಈ ಕುರಿತಂತೆ ಇವತ್ತಾದರೂ ಸಭೆಯಲ್ಲಿ ಚರ್ಚೆಯನ್ನು ಮಾಡಿ ಇದಕ್ಕೆ ಪೈನಲ್ ಟಚ್ ನೀಡುವಂತೆ ಒತ್ತಾಯವನ್ನು ಮಾಡಿ ನೆನಪು ಮಾಡಿ.
ಈಗಾಗಲೇ ಸಮಸ್ತ ಸರ್ಕಾರಿ ನೌಕರರ ಪರವಾಗಿ ಹಗಲಿರುಳು ಕೆಲಸ ಕಾರ್ಯವನ್ನು ಮಾಡುತ್ತಿ ರುವ ನಿಮ್ಮ ಬಗ್ಗೆ ರಾಜ್ಯದ ಸರ್ಕಾರಿ ನೌಕರರು ತುಂಬಾ ಆತ್ಮವಿಶ್ವಾಸವನ್ನು ಇಟ್ಟುಕೊಂಡಿ ದ್ದಾರೆ.ಆ ಒಂದು ನಿಟ್ಟಿನಲ್ಲಿ ಈ ಒಂದು ಕೆಲಸ ಕಾರ್ಯ ಆಗಲಿ ಎಂಬೊದು ಸಮಸ್ತ ರಾಜ್ಯದ ಸರ್ಕಾರಿ ನೌಕರರ ಸಂಘದ ಧ್ವನಿಯಾಗಿರುವ ಸುದ್ದಿ ಸಂತೆಯ ಆಶಯವಾಗಿದೆ.
ಸುದ್ದಿ ಸಂತೆ ನ್ಯೂಸ್