ಬೆಂಗಳೂರು –
7ನೇ ವೇತನ ಆಯೋಗ ಜಾರಿಗೆ ಮತ್ತು ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯಿಸಿ ಮಾರ್ಚ್ 1 ರಂದು ಹೋರಾಟಕ್ಕೆ ಕರೆ ನೀಡಿದ್ದಾರೆ ರಾಜ್ಯದ ಸರ್ಕಾರಿ ನೌಕರರು. ಇದರ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಮಾರ್ಚ್ ತಿಂಗಳ ಒಳಗಾಗಿ ರಾಜ್ಯದ ಸರ್ಕಾರಿ ನೌಕರರ 7ನೇ ವೇತನ ಆಯೋಗದ ಮಧ್ಯಂತರ ವರದಿಯು ಕೈ ಸೇರಲಿದ್ದು ಆ ವರದಿಯನ್ನು ತ್ವರಿತವಾಗಿ ಜಾರಿಗೊಳಿಸಲು ಸರ್ಕಾರ ಬದ್ಧವಾ ಗಿದ್ದು ಈಗಾಗಲೇ ಬಜೆಟ್ ನಲ್ಲಿ ₹6000 ಕೋಟಿ ಯನ್ನು ಮೀಸಲಿರಿಸಿದ್ದು ಅಗತ್ಯ ಬಿದ್ದಲ್ಲಿ ಇನ್ನಷ್ಟು ಅನುದಾನವನ್ನು ಪೂರಕವಾಗಿ ಒದಗಿಸಲಾಗು ವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ
ಇನ್ನೂ ಇತ್ತ ಈ ಒಂದು ವಿಚಾರ ಕುರಿತು ಏನೇ ಹೇಳಿದರು ಕೂಡಾ ರಾಜ್ಯದ ಸರ್ಕಾರಿ ನೌಕರರು ಒಪ್ಪುತ್ತಿಲ್ಲ ಕೈಗೆ ಆದೇಶ ಬಂದರೆ ಹೋರಾಟದಿಂದ ಹಿಂದೆ ಸರಿಯಲಾಗುತ್ತದೆ ಇಲ್ಲವಾದರೆ ಹೋರಾಟ ಮಾಡಲಾಗುತ್ತದೆ ಎಂಬ ಸಂದೇಶ ವನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ.ಇದಕ್ಕೆ ರಾಜ್ಯದ ಸರ್ಕಾರಿ ನೌಕರರು ಒಪ್ಪುತ್ತಿಲ್ಲ ಹೀಗಾಗಿ ರಾಜ್ಯ ಸರ್ಕಾರಕ್ಕೆ ಈ ಒಂದು ಸರಕಾರಿ ನೌಕರರ ನಿರ್ಧಾರ ದೊಡ್ಡ ತಲೆನೋವಾಗಿದ್ದು ಹೀಗಾಗಿ ಮುಖ್ಯಮಂತ್ರಿ ಏನು ಮಾಡತಾರೆ ಎಂಬೊದನ್ನು ಕಾದು ನೋಡಬೇಕು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..