ಕಾಳಗ –
ಮುಖ್ಯಶಿಕ್ಷಕ ರೊಬ್ಬರು ಮಧ್ಯ ಸೇವಿಸಿ ಶಾಲೆಯಲ್ಲಿ ಮಲಗಿದ ಘಟನೆ ತಾಲ್ಲೂಕಿನ ಸಾಸರಗಾಂವ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು ಪ್ರಭಾರ ಮುಖ್ಯಶಿಕ್ಷಕ ಶಂಕರ ರಾಠೋಡ ಮದ್ಯಸೇವಿಸಿ ಶಾಲೆಗೆ ಬರುತ್ತಾರೆ. ಮಧ್ಯಾಹ್ನವೇ ಶಾಲೆಗೆ ಬೀಗ ಹಾಕಿ ಹೊರಹೋಗುತ್ತಾರೆ’ ಎಂದು ಮುಖಂಡ ರಾಮಶೆಟ್ಟಿ ರಾಠೋಡ, ಸೂರ್ಯಕಾಂತ ಪೂಜಾರಿ, ಹಣಮಂತ ಮಾಳಗಿ, ಮಹಿಮೂದಪಟೇಲ್ ಸಾಸರಗಾಂವ, ಸುಂದರ ಸಾಗರ, ಶಿವರಾಮ್ ರಾಠೋಡ, ಪುರಸಿಂಗ್ ರಾಠೋಡ ಮತ್ತಿತರ ಪೋಷಕರು ದೂರಿದ್ದಾರೆ.
ಶಾಲೆಯು 1ರಿಂದ 5ನೇ ತರಗತಿವರೆಗಿದ್ದು ಒಟ್ಟು 37ಮಕ್ಕಳಿದ್ದಾರೆ. ಒಬ್ಬರು ಪ್ರಭಾರ ಮುಖ್ಯಶಿಕ್ಷಕ, ಇನ್ನೊಬ್ಬರು ಅತಿಥಿ ಶಿಕ್ಷಕಿ ಇದ್ದಾರೆ.’ಮುಖ್ಯಶಿಕ್ಷಕರು ಹೊರಗಡೆ ಮದ್ಯಸೇವಿಸಿ ಬರುವುದಲ್ಲದೆ ಜೊತೆಗೆ ತಂದು ಶಾಲೆಯೊಳಗೂ ಕುಡಿಯುತ್ತಾರೆ. ಮಧ್ಯಾಹ್ನವೇ ಮಕ್ಕಳನ್ನು ಮನೆಗೆ ಬಿಟ್ಟು ಶಾಲೆಗೆ ಬೀಗ ಹಾಕಿ ಹೋಗುತ್ತಾರೆ’ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಕುರಿತು ಎರಡು ಮೂರು ಬಾರಿ ತಿಳಿಹೇಳಿದರೂ ಅವರು ಅದನ್ನೇ ಮುಂದುವರೆಸಿದ್ದಾರೆ. ಈ ಕುರಿತು ಚಿಂಚೋಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೂ ತರಲಾಗಿದೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇಂತಹ ಶಿಕ್ಷಕರಿಂದ ನಮ್ಮ ಮಕ್ಕಳು ಏನು ಕಲಿಯಲು ಸಾಧ್ಯವಿದೆ? ಎಂದು ಪೋಷಕರು ಪ್ರಶ್ನಿಸಿದ್ದಾರೆ.
‘ಸುದ್ದಿ ಸಂತೆ ನ್ಯೂಸ್ ಕಾಳಗ…..