ಬೆಂಗಳೂರು –
ಸದಾ ಒಂದಿಲ್ಲೊಂದು ಹೊಸದೊಂದು ಯೋಜನೆ ಕಾರ್ಯಗಳ ಮೂಲಕ ರಾಜ್ಯದ ಸರ್ಕಾರಿ ನೌಕರರ ಕಾರ್ಯದಲ್ಲಿ ತೊಡಗಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಈಗ ರಾಜ್ಯದ ಸರ್ಕಾರಿ ನೌಕರರ ಮಕ್ಕಳಿಗಾಗಿ ಹೊಸದೊಂದು ಯೋಜನೆ ಗಳನ್ನು ಆರಂಭ ಮಾಡಲು ಮುಂದಾಗಿದ್ದಾರೆ
ಹೌದು ಸರ್ಕಾರಿ ನೌಕರರ ಮಕ್ಕಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರನ್ನಾಗಿ ಮಾಡುವ ನಿಟ್ಟಿನಲ್ಲಿ ಹಾಜರಾಗುವ ಸರಕಾರಿ ನೌಕರರ ಮಕ್ಕಳಿಗೆ ಸಂಘದ ಕೇಂದ್ರ ಕಚೇರಿ ಆವರಣದಲ್ಲೇ ಉಚಿತ ತರಬೇತಿ ವ್ಯವಸ್ಥೆಯನ್ನು ಮಾಡಲಾಗು ತ್ತಿದ್ದು ಈ ಒಂದು ಕಾರ್ಯ ಬರುವ ದಿನಗಳಲ್ಲಿ ಶೈಕ್ಷಣಿಕ ವರ್ಷದಿಂದ ಆರಂಭ ಮಾಡಲು ಷಡಾಕ್ಷರಿ ಅವರು ಮುಂದಾಗಿದ್ದಾರೆ.
ಈ ಕುರಿತಂತೆ ಈಗಾಗಲೇ ಸಭೆಯನ್ನು ಮಾಡಿ ಚರ್ಚೆಯನ್ನು ಮಾಡಲಾಗಿದ್ದು ಶೀಘ್ರದಲ್ಲೇ ಆರಂಭಿಸುವುದಾಗಿ ಹೇಳಿದ್ದಾರೆ.ಇನ್ನೂ ಇದರೊಂದಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿ ಗಳಿಗೆ ವಾರಂತ್ಯದಲ್ಲಿ ನೀಟ್ ಪರೀಕ್ಷೆಗೆ ತರಬೇತಿ ಕಲ್ಪಿಸಲು ನಿರ್ಧರಿಸಲಾಗಿದ್ದು ಇದನ್ನು ಈಗಾಗಲೇ ಪೈನಲ್ ಮಾಡಲಾಗಿದ್ದು ಶೀಘ್ರದಲ್ಲೇ ಈ ಕುರಿತಂತೆ ಪ್ಲಾನ್ ಮಾಡಿ ಉದ್ಘಾಟನೆ ಮಾಡೊ ದಾಗಿ ಷಡಾಕ್ಷರಿ ಅವರು ಹೇಳಿದರು ಇದಕ್ಕಾಗಿ ವಾರ್ಷಿಕವಾಗಿ 50 ಲಕ್ಷ ರೂ ಭರಿಸಲು ಚಿಂತಿಸ ಲಾಗಿದೆ ಎಂದು ಹೇಳಿದರು.
ಇದರೊಂದಿಗೆ ಕೇವಲ ಸರ್ಕಾರಿ ನೌಕರರು ಅಷ್ಟೇ ಅಲ್ಲದೇ ಅವರ ಮಕ್ಕಳಿಗೂ ಕೂಡಾ ಆದ್ಯತೆ ಯನ್ನು ನೀಡಿ ಯೋಜನೆ ಆರಂಭ ಮಾಡುತ್ತಿ ರುವುದು ಮೆಚ್ಚುವಂತಹ ಕಾರ್ಯವಾಗಿದೆ.
ಸುದ್ದಿ ಸಂತೆ ನ್ಯೂಸ್…..