ಮುಧೋಳ –
ಒಂದು ಕಡೆ ಮಳೆಯಿಂದಾಗಿ ಶಾಲೆಗೆ ಬರುವ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ರಾಜ್ಯದಲ್ಲಿ ಎರಡು ದಿನಗಳ ಕಾಲ ರಜೆಯನ್ನು ಘೋಷಣೆ ಮಾಡಲಾಗಿದೆ. ಇನ್ನೂ ಇತ್ತ ಮತ್ತೊಂದು ಕಡೆಗೆ ಮಳೆಯ ನಡುವೆಯೇ ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಟೂರ್ನಮೆಂಟ್ ನಡೆಸುತ್ತಿದ್ದಾರೆ
ಹೌದು ಬಾಗಲಕೋಟೆ ಜಿಲ್ಲೆಯ ಮುಧೋಳ ದಲ್ಲಿ ಕರ್ನಾಟಕ ರಾಜ್ಯ ಹ್ಯಾಂಡ್ ಬಾಲ್ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ 20 ವರ್ಷದ ಒಳಗಿನವ ರಿಗಾಗಿ ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಟೂರ್ನಮೆಂಟ ಆರಂಭಗೊಂಡಿದೆ.ನಿನ್ನೆಯಿಂದ ಈ ಒಂದು ಪಂದ್ಯಾವಳಿ ಆರಂಭಗೊಂಡಿದ್ದು ಮಳೆಯನ್ನು ಲೆಕ್ಕಿಸದೆ ಆಡಿಸಲಾಗುತ್ತಿದೆ
ಈ ಒಂದು ರಾಜ್ಯ ಮಟ್ಟದ ಟೂರ್ನಮೆಂಟ್ ನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ 34 ಟೀಮ್ ಗಳು ಪಾಲ್ಗೊಂಡಿದ್ದು ಸರಿಯಾದ ವ್ಯವಸ್ಥೆಯನ್ನು ಮಾಡಿಲ್ಲವಂತೆ ಹಾಗೇ ಸಧ್ಯ ಸಿಕ್ಕಾಪಟ್ಟಿ ಮಳೆಯಾಗುತ್ತಿದ್ದರೂ ಕೂಡಾ ಇದರಲ್ಲಿಯೇ ಪಂದ್ಯಾವಳಿಯನ್ನು ಆಡಿಸಲಾಗುತ್ತಿದೆ
ಒಂದು ಕಡೆ ಸಧ್ಯ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗು ತ್ತಿದೆ ಹೀಗಾಗಿ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ ಇನ್ನೂ ಇಲ್ಲಿ ಮಳೆಯಾಗುತ್ತಿದ್ದರು ಕೂಡಾ ಇದರಲ್ಲಿಯೇ ಆಡಿಸುತ್ತಿದ್ದು ಮಕ್ಕಳಿಗೆ ಸಾಕಷ್ಟು ಪ್ರಮಾಣ ದಲ್ಲಿ ತೊಂದರೆ ಆಗುತ್ತಿದ್ದು ಹೇಳೊರಿಲ್ಲ ಕೇಳೊರಿಲ್ಲ ದಂತಾಗಿದ್ದು ಮಕ್ಕಳ ಗೋಳು ಕೇಳೊರಿಲ್ಲದಂತಾಗಿದೆ