This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಮತ್ತೊಂದು ತಿರುವು ಪಡೆದು ಕೊಂಡ ರಾಸಲೀಲೆ ಶಿಕ್ಷಕನ ಪ್ರಕರಣ – ಶಿಕ್ಷಕನ ಜಾಣ ಉತ್ತರ ಹೇಗಿದೆ ಒಮ್ಮೆ ನೋಡಿ…..

WhatsApp Group Join Now
Telegram Group Join Now

ಸಿಂಧನೂರು

ಶಿಕ್ಷಕನ ರಾಸಲೀಲೆ ವಿಡಿಯೋ ವೈರಲ್‌ ಆದ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ವಿಚಾರಣೆ ವೇಳೆ ಆರೋಪಕ್ಕೆ ಗುರಿಯಾಗಿರುವ ಶಿಕ್ಷಕ ಜಾಣ ಉತ್ತರ ನೀಡಿ ಪಾರಾಗಲು ಯತ್ನಿಸಿರುವ ಅಂಶ ಬೆಳಕಿಗೆ ಬಂದಿದೆ. ಗೋರೆಬಾಳ ಕ್ಲಸ್ಟರ್‌ ವ್ಯಾಪ್ತಿಯ ಶಿಕ್ಷಣ ಸಂಯೋಜಕರು ಜು.1ರಂದು ನಡೆಸಿದ ವಿಚಾರಣೆ ವೇಳೆ ಶಿಕ್ಷಕ ಮೊಹಮ್ಮದ್‌ ಅಜರುದ್ದೀನ್‌ ತನ್ನನ್ನು ಮನ್ನಿಸುವಂತೆ ಕೇಳಿಕೊಂಡಿದ್ದಾನೆ.ವೈಯಕ್ತಿಕ ವಿಷಯವಾಗಿರುವುದರಿಂದ ಅದನ್ನು ಕೈ ಬಿಡಬೇಕು ಎಂಬ ಪರೋಕ್ಷ ವಾದ ಮಂಡಿಸಿ ದ್ದಾನೆ.ಅಲ್ಲದೇ ಲೈಂಗಿಕ ಕ್ರಿಯೆ ನಡೆಸಿರುವ ಮಹಿಳೆ ಕೂಡ ನನ್ನೊಂದಿಗೆ ಸಹಮತ ಹೊಂದಿದ್ದರು ಎಂದು ಸ್ವಯಂ ರಕ್ಷಣೆಯ ಉತ್ತರ ಕೊಟ್ಟಿದ್ದಾನೆ.ಅಚ್ಚರಿ ಎಂದರೆ ಈ ಹೇಳಿಕೆ ನೀಡಿದ ಮರು ದಿನವೇ ಸಂತ್ರಸ್ತ ಮಹಿಳೆ ಪೊಲೀಸ್‌ ಠಾಣೆಗೆ ತೆರಳಿ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾನೆಂಬ ದೂರು ಸಲ್ಲಿಕೆ ಮಾಡಿದ್ದರಿಂದ ಪ್ರಕರಣ ಗಂಭೀರ ತಿರುವು ಪಡೆದುಕೊಂಡಿದೆ.

ಮೂರು ವರ್ಷದ ಹಿಂದಿನ ವಿಡಿಯೋ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಈಗಿನದಲ್ಲ ಅದು ಮೂರು ವರ್ಷಗಳ ಹಿಂದೆ ಸ್ವತಃ ನಾನೇ ಮಾಡಿಕೊಂಡಿದ್ದೆ ಅದು ನನ್ನ ಮೊಬೈಲ್‌ನಲ್ಲಿಯೇ ಉಳಿಸಿಕೊಂಡಿತ್ತು.ವಿಡಿಯೋ ವನ್ನು ಕಾರಟಗಿಯ ನನ್ನ ಮನೆಯಲ್ಲಿ ಮಾಡಿಕೊಂಡಿದ್ದು ಅವರು ವಿವಾಹಿತ ಮಹಿಳೆ ಆದರೆ ಈ ವಿಷಯ ಅವರ ಕುಟುಂಬದವರಿಗೆ ಗೊತ್ತಿಲ್ಲ ಎಂದು ಶಿಕ್ಷಕ ಲಿಖಿತವಾಗಿ ಹೇಳಿಕೆ ನೀಡಿದ್ದಾನೆ.

ನನ್ನ ಮೊಬೈಲ್‌ ಕಳ್ಳತನವಾಗಿತ್ತು ಹದಿನೈದು ದಿನಗಳ ಹಿಂದೆ ನನ್ನ ಮೊಬೈಲ್‌ ಕಳವಾಗಿತ್ತು. ನನ್ನ ಮೊಬೈಲ್‌ನಲ್ಲಿ ಇರುವ ವಿಡಿಯೋವನ್ನು ಕೆಲವರು ದುರುದ್ದೇಷದಿಂದ ಹಣಕ್ಕಾಗಿ ಬೇಡಿಕೆಯಿಟ್ಟು ವೈರಲ್‌ ಮಾಡಿದ್ದಾರೆ.ತಿಂಗಳ ಹಿಂದೆ ಕಾರಟಗಿಯ ನಿವಾಸಿ ಮುಸ್ತಾಕ್‌ ಎನ್ನುವ ಹುಡುಗ ನನ್ನ ವಿಡಿಯೋ ವೈರಲ್‌ ಮಾಡಿದ್ದಾನೆ ಹಣಕ್ಕಾಗಿ ಬ್ಲ್ಯಾಕ್‌ ಮೇಲ್ ಮಾಡಿದ್ದಾರೆ ಎಂಬುದಾಗಿ ಶಿಕ್ಷಣ ಸಂಯೋಜಕರ ವರದಿಯಲ್ಲಿ ಉಲ್ಲೇಖೀಸಲಾಗಿದೆ. ‌

ದೂರು ನೀಡದಿರುವುದು ಏಕೆ ಶಿಕ್ಷಕ ವಿಚಾರಣೆಯ ಸಂದರ್ಭ ಒಂದಕ್ಕೊಂದು ತಾಳೆಯಾಗದ ರೀತಿ ಉತ್ತರಿಸಿ ರುವುದು ಸ್ಪಷ್ಟವಾಗಿದ್ದು ಪ್ರಕರಣದಿಂದ ಪಾರಾಗಲು ಪ್ರಯತ್ನಿಸಿರುವುದು ಬಯಲಾಗಿದೆ.ಕಳ್ಳತನವಾಗಿತ್ತು ಎಂಬ ಹೇಳಿಕೆ ನೀಡುವ ಜತೆಗೆ ವೈರಲ್‌ ಮಾಡಿದವರ ಹೆಸರನ್ನು ಹೇಳಿಕೆಯಲ್ಲಿ ಉಲ್ಲೇಖೀಸಿದ್ದು ಅಚ್ಚರಿಗೆ ಕಾರಣವಾಗಿದೆ. ಶಿಕ್ಷಣ ಸಂಯೋಜಕರ ವಿಚಾರಣಾ ವರದಿ ಹಾಗೂ ಶಿಕ್ಷಕನ ಹೇಳಿಕೆ ಪ್ರತಿ ಸುದ್ದಿ ಸಂತೆ ಗೆ ಲಭ್ಯವಾಗಿದ್ದು ಇಲಾಖೆಯನ್ನು ಯಾಮಾರಿಸುವ ರೀತಿಯಲ್ಲಿ ಅಧಿಕಾರಿಗಳು ನಡೆದುಕೊ ಳ್ಳುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.


Google News

 

 

WhatsApp Group Join Now
Telegram Group Join Now
Suddi Sante Desk