ಬೆಂಗಳೂರು –
ಆತ್ಮೀಯ ಪಿಂಚಣಿ ವಂಚಿತ ನೌಕರ ಬಂಧುಗಳೇ ಶಾಸಕರ ಭವನದಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ಯಶಸ್ವಿಯಾಗಿ ನಡೆಯಿತು ಇನ್ನೂ ಈ ಒಂದು ಸಭೆಯಲ್ಲಿ ದಿನಾಂಕ:25-11-2022ರ ಶುಕ್ರವಾರ ನಡೆಯುವ ಹೋರಾಟದ 50ನೇ ದಿನಕ್ಕೆ ರೂಪು ರೇಷೆಗಳ ಬಗ್ಗೆ ಸಂಪೂರ್ಣವಾಗಿ ಚರ್ಚಿಸಲಾ ಯಿತು.
1) 50ನೇ ದಿನಕ್ಕೆ ಕನಿಷ್ಠ 10 ಸಾವಿರ ಪಿಂಚಣಿ ವಂಚಿತ ನೌಕರರನ್ನು ಸೇರಿಸುವ ಒಂದು ಗುರಿಯನ್ನು ಹಮ್ಮಿಕೊಳ್ಳಲಾಗಿದೆ 2)ನಾವು ರಕ್ತ ಕೊಡುತ್ತೇವೆ ದಯವಿಟ್ಟು ನಮಗೆ ಪಿಂಚಣಿ ಕೊಡಿ ಎಂಬ ಘೋಷ ವಾಕ್ಯ ದೊಂದಿಗೆ 500 ನೌಕರರು ಸಾಮೂಹಿಕವಾಗಿ ರಕ್ತದಾನ ಮಾಡಲಿದ್ದಾರೆ
3)ಮಾಧ್ಯಮಗಳನ್ನು ಹೆಚ್ಚು ಬಳಸಿಕೊಂಡು ಹೋರಾಟದ ತೀವ್ರತೆಯನ್ನು ಹೆಚ್ಚಿಸುವ ನಿಟ್ಟಿ ನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ನಿರ್ಣಯಿಸಲಾಯಿತು 4) 14 ಜನ MLC ಗಳನ್ನು ಹೋರಾಟದ ವೇದಿಕೆಗೆ ತಂದು ಮುಖ್ಯಮಂತ್ರಿಗಳ ಮತ್ತು ಹಣಕಾಸು ಇಲಾಖೆಗಳ ಅಧಿಕಾರಿಗಳ ಮೇಲೆ ತೀವ್ರವಾದ ಒತ್ತಡವನ್ನು ತರಲು MLC ಗಳು ಧರಣಿ ಸ್ಥಳದಲ್ಲಿ ನಮ್ಮೊಡನೆ ಧರಣಿ ಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.*
5)ಇದು 50ನೇ ದಿನದ ಒಂದು ಮೈಲುಗಲ್ಲಿನ ಹೋರಾಟವಾಗಿರುವುದರಿಂದ ಅಂದು ವಿವಿಧ ರಾಜಕೀಯ ಮುಖಂಡರುಗಳು,ಸಾಮಾಜಿಕ ಹೋರಾಟಗಾರರು,ನಿವೃತ್ತ ನ್ಯಾಯಾಧೀಶ ರುಗಳು,ಸೆಲೆಬ್ರಿಟಿಗಳು ಮತ್ತು ವಿವಿಧ ಸಂಘಟ ನೆಗಳ ಮುಖಂಡರುಗಳು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ
ಸರ್ಕಾರ ಏನಾದರೂ ನಮ್ಮ ಸಮಸ್ಯೆಗೆ ಸ್ಪಂದಿಸಿ ಪಿಂಚಣಿ ನೀಡುವ ಬಗ್ಗೆ ನಮ್ಮ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಭೆ ನಡೆಸಿ ತಾರ್ಕಿಕ ಅಂತ್ಯ ಕಂಡರೆ ಒಳಿತು ಇಲ್ಲವಾದರೆ ಶಾಲಾ ಕಾಲೇಜುಗಳನ್ನು ಬಂದ್ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಇನ್ನು ಕೆಲವು ವಿಷಯಗಳ ಬಗ್ಗೆ ಚರ್ಚಿಸಿ ದೃಢ ನಿರ್ಧಾರ ತೆಗೆದುಕೊಳ್ಳಲಾಯಿತು.
ಬಂಧುಗಳೇ ಇಂದಿನಿಂದ ನಿಮ್ಮ ನಮ್ಮೆಲ್ಲರ ಚಿತ್ತ ನವಂಬರ್ 25 ರತ್ತ ಇರಲಿ. ಧನ್ಯವಾದಗಳೊಂದಿಗೆ ಟೀಮ್ ಪಿಂಚಣಿ ವಂಚಿತ ನೌಕರರ ಸಂಘ
ಸುದ್ದಿ ಸಂತೆ ನ್ಯೂಸ್…..