This is the title of the web page
This is the title of the web page

Live Stream

September 2023
T F S S M T W
 123456
78910111213
14151617181920
21222324252627
282930  

| Latest Version 8.0.1 |

State News

7ನೇ ವೇತನ ಜಾರಿಗೆ ರಾಜ್ಯ ಸರ್ಕಾರಕ್ಕೆ 7 ದಿನಗಳ ಗಡುವು ನೀಡಿದ ರಾಜ್ಯದ ಸರ್ಕಾರಿ ನೌಕರರು – NPS ಬೇಡಿಕೆ ಹೊಸ ವೇತನ ಪರಿಷ್ಕರಣೆ ಮಾಡದಿದ್ದರೆ ಮಾರ್ಚ್ 1 ರಿಂದ ಹೋರಾಟ ಘೋಷಣೆ…..


ಬೆಂಗಳೂರು

ಕೊನೆಗೂ ರಾಜ್ಯ ಸರ್ಕಾರದ ವಿರುದ್ಧ ರಾಜ್ಯದ ಸರ್ಕಾರಿ ನೌಕರರು ಖಡತ್ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.ಹೌದು 7ನೇ ವೇತನ ಆಯೋಗ ಮತ್ತು ಹಳೆಯ ಪಿಂಚಣಿ ವ್ಯವಸ್ಥೆ ವಿಚಾರ ದಲ್ಲಿ ರಾಜ್ಯ ಸರ್ಕಾರ ಮೃದು ಧೋರಣೆ ತೋರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ನೌಕರರು ತುರ್ತು ಸಭೆಯನ್ನು ಕರೆದಿದ್ದರು.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ ಗಳನ್ನು ತಗೆದು ಕೊಂಡಿದ್ದಾರೆ.ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ವೃಂದ ಸಂಘಗಳ ಪದಾಧಿಕಾರಿಗಳ ಈ ಒಂದು ತುರ್ತು ಸಭೆಯಲ್ಲಿ  ತೆಗೆದುಕೊಂಡ ಪ್ರಮುಖ ನಿರ್ಣಯ ಗಳು ಇವೆ.

ಷಡಕ್ಷರಿ ರವರ ನೇತೃತ್ವದಲ್ಲಿ ತೆಗೆದುಕೊಂಡ ತೀರ್ಮಾನದಂತೆ.ಸರ್ಕಾರಕ್ಕೆ 7 ದಿನಗಳ ಕಾಲಾ ವಕಾಶವನ್ನು ನೀಡಲಾಗಿದೆ.ದಿನಾಂಕ 1/3/ 2023 ರಿಂದ ಎಲ್ಲಾ ಸರ್ಕಾರಿ ನೌಕರರು ಮತ್ತು ಸರ್ಕಾರಿ ಸ್ವಾಮಕ್ಕೆ ಒಳಪಡುವ ಎಲ್ಲಾ ನೌಕರರು

ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟ ಅವಧಿಯ ಹೋರಾಟವನ್ನು ಕೈಗೊಳ್ಳುವಂತೆ ತೀರ್ಮಾನಿಸಲಾಯಿತು.

 

 

ಪ್ರಮುಖ ಬೇಡಿಕೆಗಳೇನೆಂದರೆ 7 ನೇ ವೇತನ ಆಯೋಗವನ್ನು ಜಾರಿ ಮಾಡುವುದು ರಾಜಸ್ಥಾನ ಮಾದರಿಯಂತೆ ಎನ್‌.ಪಿ.ಎಸ್ ಅನ್ನು ರದ್ದುಪ ಡಿಸಿ ಒ. ಪಿ .ಎಸ್ ಯನ್ನು ಮರು ಸ್ಥಾಪಿಸುವುದು.

ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಯೋಜನೆಯನ್ನು ಜಾರಿಗೆ ತರುವುದು.ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ವೃಂದ ಸಂಘಗಳ ಪದಾಧಿಕಾರಿಗಳ ತುರ್ತು ಸಭೆಯಲ್ಲಿ ಷಡಕ್ಷರಿ ರವರ ನೇತೃತ್ವದಲ್ಲಿ ತೆಗೆದುಕೊಂಡ ತೀರ್ಮಾನದಂತೆ.

ಸರ್ಕಾರಕ್ಕೆ 7 ದಿನಗಳ ಕಾಲಾವಕಾಶವನ್ನು ನೀಡಿದ್ದು.ದಿನಾಂಕ 1/3/ 2023 ರಿಂದ ಎಲ್ಲಾ ಸರ್ಕಾರಿ ನೌಕರರು ಮತ್ತು ಸರ್ಕಾರಿ ಸ್ವಾಮಕ್ಕೆ ಒಳಪಡುವ ಎಲ್ಲಾ ನೌಕರರು.ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಎಚ್ಚರಿಕೆ ನೀಡುವುದು ಇದರೊಂದಿಗೆ ಅನಿರ್ದಿಷ್ಟ ಅವಧಿಯ ಹೋರಾಟ ವನ್ನು ಕೈಗೊಳ್ಳುವಂತೆ ತೀರ್ಮಾನಿಸಲಾಯಿತು.

ಸುದ್ದಿ ಸಂತೆ ನ್ಯೂಸ್  ಬೆಂಗಳೂರು……


Google News Join The Telegram Join The WhatsApp

 

 

Suddi Sante Desk

Leave a Reply