ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರವು ಐವರು ಬಿಜೆಪಿ ಪಕ್ಷದ ಮುಖಂಡರನ್ನು ನಾಮ ನಿರ್ದೇಶನವನ್ನು ಮಾಡಿದೆ.ಸರ್ಕಾರದಿಂದ ನಾಮ ನಿರ್ದೇಶನ ಗೊಂಡ ಐವರು ಸದಸ್ಯರನ್ನು ಹುಬ್ಬಳ್ಳಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಪಾಲಿಕೆಯ ಮೇಯರ್ ಕಚೇರಿಯಲ್ಲಿ ನೂತನ ಐವರು ಸದಸ್ಯರನ್ನು ಪಕ್ಷದ ಪರವಾಗಿ ಮೇಯರ್ ಈರೇಶ ಅಂಚಟಗೇರಿ ಸನ್ಮಾನಿಸಿ ಗೌರವಿಸಿದರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಭಾರತೀಯ ಜನತಾ ಜನತಾ ಪಕ್ಷದ ಕಾರ್ಯಕರ್ತ ರಾದ ಈರಣ್ಣ ಹಪ್ಪಳಿ ,ದೀಪಕ ಮೆಹರವಾಡೆ, ಶ್ರೀಮತಿ ಭಾರತಿ ಟಪಾಲ,ಮೋಹನ ರಾಮದುರ್ಗ,ಪ್ರಶಾಂತ ಹಾವಣಗಿ ಈ ಐವರು ರಾಜ್ಯ ಸರ್ಕಾರದಿಂದ ನೂತನವಾಗಿ ನಾಮ ನಿರ್ದೇಶಿತವಾಗಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾಗಿ ಆಯ್ಕೆಗೊಂಡ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರು ಅವರ ಕಚೇರಿಗೆ ಆಹ್ವಾನಿಸಿ ನೂತನ ಮಹಾನಗರ ಪಾಲಿಕೆಯ ಸದಸ್ಯರನ್ನು ಆತ್ಮೀಯವಾಗಿ ಅಭಿನಂದಿಸಿ, ಸನ್ಮಾನಿಸಿ ಗೌರವಿ ಸಲಾಯಿತು.
ಈ ಒಂದು ಸಂದರ್ಭದಲ್ಲಿ ಪಾಲಿಕೆಯ ಸಭಾ ನಾಯಕರಾದ ತಿಪ್ಪಣ್ಣ ಮಜ್ಜಗಿ,ರಾಜಣ್ಣ ಕೊರವಿ ,ಶಿವು ಮೆಣಸಿನಕಾಯಿ ,ಬೀರಪ್ಪ ಖಂಡೇಕಾರ ಉಮೇಶ ಕೌಜಗೇರಿ ಸೇರಿದಂತೆ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.