ಉಡುಪಿ –
ಯಾರಿಗೂ ಇಲ್ಲದ ಯಾವ ಇಲಾಖೆಗೂ ಇಲ್ಲದ ವರ್ಗಾವ ಣೆಯ ಅವೈಜ್ಞಾನಿಕವಾದ ಈ ಒಂದು ವರ್ಗಾವಣೆಯ ನೀತಿ ನಿಯಮಗಳಿಂದಾಗಿ ನಾಡಿನ ಶಿಕ್ಷಕರು ಬೇಸತ್ತಿದ್ದಾರೆ.ಹೌದು ತಾವು ಒಂದು ಕಡೆ ಹೆಂಡತಿ ಒಂದು ಕಡೆಗೆ ತಂದೆ ತಾಯಿ ಮತ್ತೊಂದು ಕಡೆಗೆ ಮಕ್ಕಳು ಇನ್ನೊಂದು ಕಡೆಗೆ ಹೀಗೆ ನಾಲ್ಕು ದಿಕ್ಕುಗಳಲ್ಲಿ ನೆಮ್ಮದಿ ಇಲ್ಲದೇ ಕರ್ತವ್ಯ ಮಾಡುತ್ತಿ ರುವ ಶಿಕ್ಷಕರ ನೋವು ಅನುಭವಿಸುತ್ತಿರುವ ಅವರಿಗೆ ಗೊತ್ತು ಈ ಒಂದು ಮಾತಿಗೆ ಸಧ್ಯ ಉಡುಪಿಯಲ್ಲಿ ಹಿರಿಯ ಶಿಕ್ಷಕಿಯೊಬ್ಬರು ಅನುಭವಿಸುತ್ತಿರುವ ನರಕಯಾತನೆಯ ಕಷ್ಟವೇ ಸಾಕ್ಷಿ.
ಹೌದು ಹೆಸರು ಬೇಬಿ ಎಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳಿಹೊಳೆ ಸಧ್ಯ ಈ ಒಂದು ಶಾಲೆಯಲ್ಲಿ ಕರ್ತವ್ಯ ವನ್ನು ಮಾಡುತ್ತಿದ್ದಾರೆ.ಒಂದು ಕಡಗೆ ವಯಸ್ಸು 55 ಇನ್ನೊಂದು ಕಡೆಗೆ ಈ ಒಂದು ವಯಸ್ಸಿನಲ್ಲಿ 77 ಕಿಲೋ ಮೀಟರ್ ಪ್ರಯಾಣಿಸಿ ನಾಲ್ಕೈದು ಕಿಲೋ ಮೀಟರ್ ನಡೆದು ಹೋಗಿ ಶಾಲೆಯಲ್ಲಿ ಹೇಗೆ ಪಾಠವನ್ನು ಮಾಡೋ ದು ಆರೋಗ್ಯದಲ್ಲಿ ಸಾಕಷ್ಟು ತೊಂದರೆಗಳಿದ್ದು ಇದೊಂದು ನಕ್ಸಲೈಟ್ ಪ್ರದೇಶವಾಗಿದ್ದು ಹೀಗಾಗಿ ಜೀವವನ್ನು ಕೈಯಲ್ಲಿ ಟ್ಟುಕೊಂಡು ಕರ್ತವ್ಯವನ್ನು ಮಾಡುವಂತ ಪರಸ್ಥಿತಿ ಈ ಒಂದು ಮಹಿಳಾ ಶಿಕ್ಷಕಿಗೆ ಬಂದಿದ್ದು
ಈ ಕುರಿತಂತೆ ಯಾರಿಗೂ ಹೇಳಿದರು ಮನವಿ ಮಾಡಿಕೊಂ ಡರು ಯಾವುದೇ ಪ್ರಯೋಜನವಾಗುತ್ತಿಲ್ಲ.ಹೀಗಾಗಿ ನರಕಯಾತನೆಯ ನಡುವೆ ಈ ಹಿರಿಯ ಶಿಕ್ಷಕಿ ಪ್ರತಿದಿನ ಜೀವವನ್ನು ಕೈಯಲ್ಲಿಟ್ಟುಕೊಂಡು ಏನೇಲ್ಲಾ ಕಷ್ಟವನ್ನು ಪಟ್ಟು ಶಾಲೆಗೆ ಹೋಗುತ್ತಿದ್ದಾರೆ. ಅದರಲ್ಲೂ ಮಳೆಗಾಲದ ಲ್ಲಂತೂ ಹೇಳಲಾರದ ಪರಸ್ಥಿತಿ.ಈ ಮಹಿಳಾ ಶಿಕ್ಷಕಿಯ ನೋವಿನ ಕುರಿತಂತೆ ಇನ್ನಾದರೂ ಶಿಕ್ಷಕರ ಸಂಘಟನೆಯ ವರು ಸ್ಪಂದಿಸಿ ನೇರವಾಗುತ್ತಾರೆನಾ ಎಂಬುದನ್ನು ಕಾದು ನೋಡಬೇಕು.