This is the title of the web page
This is the title of the web page

Live Stream

[ytplayer id=’1198′]

February 2025
T F S S M T W
 12345
6789101112
13141516171819
20212223242526
2728  

| Latest Version 8.0.1 |

State News

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೇಮಕ – ಯಾದಗಿರಿ,ಬೆಂಗಳೂರು ದಕ್ಷಿಣ,ಜಿಲ್ಲಾ ಘಟಕಗಳಿಗೆ ನೇಮಕ…..

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೇಮಕ – ಯಾದಗಿರಿ,ಬೆಂಗಳೂರು ದಕ್ಷಿಣ,ಜಿಲ್ಲಾ ಘಟಕಗಳಿಗೆ ನೇಮಕ…..
WhatsApp Group Join Now
Telegram Group Join Now

ಧಾರವಾಡ

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೇಮಕ – ಯಾದಗಿರಿ,ಬೆಂಗಳೂರು ದಕ್ಷಿಣ,ಜಿಲ್ಲಾ ಘಟಕಗಳಿಗೆ ನೇಮಕ…..

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕಗಳಿಗೆ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.ಹೌದು ರಾಜ್ಯದಲ್ಲಿ ಗ್ರಾಮೀಣ ಮಟ್ಟದಲ್ಲಿ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಶಿಕ್ಷಕರ ಧ್ವನಿ ಯಾಗಿ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಈ ಒಂದು ನಿಟ್ಟಿನಲ್ಲಿ ಯಾದಗಿರಿ ಗ್ರಾಮೀಣ ಜಿಲ್ಲಾಧ್ಯಕ್ಷರಾಗಿ ಶ್ರೀಮತಿ ಚಂದ್ರಕಲಾ ಗೂಗಲ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಶರಣಪ್ಪ ದೊಡಮನಿ ಯವರನ್ನು ನೇಮಕ ಮಾಡಲಾಗಿದೆ.

ಇನ್ನೂ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾಗಿ ತಾವರೆಕೆರೆ ಪಿಎಂಶ್ರೀ ಶಾಲೆಯ ಶಿಕ್ಷಕ ಎನ್ ನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಮೇಟಿಪಾಳ್ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಟಿ ವೀಣಾರವರು ನೇಮಕ ಮಾಡಲಾಗಿದ್ದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹಾಪೋಷಕ ರಾದ ಎಲ್ ಐ ಲಕ್ಕಮ್ಮನವರ ಅವರ ಸಮ್ಮುಖದಲ್ಲಿ ಬೆಳಗಾವಿ ಜಿಲ್ಲೆಯ ಜಿಲ್ಲಾ ಘಟಕವನ್ನು ಮಹಾಪೋಷಕ ರಾದ ಎಂ ಐ ಮುನವಳ್ಳಿ ಅವರ ಮಾರ್ಗದರ್ಶನದಲ್ಲಿ ಇಂದು ರಚನೆ ಮಾಡಲಾಯಿತು.

ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ನೊಂದಾಯಿತ ರಾಜ್ಯ ಘಟಕ ಹುಬ್ಬಳ್ಳಿ ಇದರ ಬೆಂಗಳೂರು ಜಿಲ್ಲಾ ಘಟಕವನ್ನು ರಾಜ್ಯ ಮಹಾಪೋಷಕರು ಎಲ್ ಐ ಲಕ್ಕಮ್ಮನವರ ಮಾರ್ಗ ದರ್ಶನದಲ್ಲಿ, ಇತ್ತೀಚೆಗೆ ರಚನೆ ಮಾಡಲಾಯಿತು,  ರಾಜ್ಯಾದ್ಯಕ್ಷರಾದ ಶರಣಪ್ಪಗೌಡ ಆರ್ ಕೆ , ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಹಾಲೇಶ ನವುಲೆ, ರಾಜ್ಯ ಖಜಾಂಚಿ ನೆಲಮಂಗಲ ಮಲ್ಲಿಕಾರ್ಜುನಯ್ಯ ಈ ಒಂದು ಜಿಲ್ಲಾ ಘಟಕಕ್ಕೆ ಅನುಮೋದನೆ ನೀಡಿದರು

ಸಂಘದ ಬೆಳವಣಿಗೆಗೆ ತಮ್ಮ ಬಿಡುವಿನ ವೇಳೆಯಲ್ಲಿ, ಮಕ್ಕಳು ಮತ್ತು ಸರ್ಕಾರಿ ಶಾಲೆಗಳ ಸರ್ವಾಂಗೀಣ ಪ್ರಗತಿಗಾಗಿ, ಮತ್ತು ಹಳ್ಳಿಗಳಲ್ಲಿ ಕೆಲಸ ನಿರ್ವಹಿಸುತ್ತಿ ರುವ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವಂತೆ, ಮಹಾಪೋಷಕರು ಗೋವಿಂದ ಜುಜಾರೆ ಡಿ ಎಸ್ ಭಜಂತ್ರಿ, ಡಿಟಿ ಬಂಡಿವಡ್ಡರ, ಆರ್ ನಾರಾಯಣ ಸ್ವಾಮಿ ಚಿಂತಾಮಣಿ, ಕಾರ್ಯಾಧ್ಯಕ್ಷರಾದ ಸಿದ್ದಣ್ಣ ಉಕ್ಕಲಿ ಎಸ್ ಎಫ್ ಪಾಟೀಲ ಪ್ರಮೀಳಾ ಪೂಜಾರ ಎಂ ಮಹಮ್ಮದ್ ರಫಿ,

ಗೌರವಾದ್ಯಕ್ಷರಾದ ಮಲ್ಲಿಕಾರ್ಜುನ ಉಪ್ಪಿನ ಸಲಹೆ ಮಾರ್ಗದರ್ಶನ ನೀಡಿದರು, ಇದೇ ಸಂದರ್ಭದಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಎನ್ ನಾರಾಯಣ ರಾಜ್ಯದ ಸಮಸ್ತ PST ಶಿಕ್ಷಕರಿಗೆ*ಬಡ್ತಿ ಮಾಡ್ಸುತ್ತಾರೋ
ವಿಲೀನ ಮಾಡಿಸುತ್ತಾರೊ. HM ಪ್ರಮೋಷನ್ ಕೊಡುಸ್ತಾರೋ.ಹೈಸ್ಕೂಲ್ ಪ್ರಮೋಷನ್ ಕೊಡಿಸು ತ್ತಾರೋ PST.. GPT..ವರ್ಗಾವಣೆ ಸಮಸ್ಯೆ ಬಗೆಹರಿ ಸುತ್ತಾರೆ ಯಾವುದಾದರೂ ಒಂದು ಉತ್ತರವನ್ನು ಕೊಡಲೇಬೇಕು

ಇಲ್ಲದಿದ್ದರೆ ಏನು ಮಾಡಿಸಲು ನಮಗೆ ಸಾಧ್ಯವಿಲ್ಲ ಎಂದು ಶಾಲೆಗಳಿಗೋಗಿ ಪಾಠ ಮಾಡ್ತಾರೋ…

PST ಶಿಕ್ಷಕರ ಸಮಸ್ಯೆಗೆ ಅಂತಿಮವಾದ ಡೆಡ್ ಲೈನ್ ಯಾವಾಗ ನೇರ ಹೊಣೆಗಾರರು ಯಾರು ಎಂದರು. ಈ ನಿಟ್ಟಿನಲ್ಲಿ ಗ್ರಾಮೀಣ ಶಿಕ್ಷಕರ ಸಂಘ ಸರಕಾರ ಮತ್ತು ಇಲಾಖೆಯ ಗಮನ ಸೆಳೆಯಲಿದೆ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ ವೀಣಾ ಮಾತನಾಡಿ, ಗ್ರಾಮೀಣ ಶಿಕ್ಷಕರ ಸಂಘದಿಂದ ಮಕ್ಕಳ ಏಳಿಗೆಗಾಗಿ, ಮತ್ತು ಶಾಲೆಗಳ ಪ್ರಗತಿಗಾಗಿ ವಿಶಿಷ್ಟ ವಿನೂತನ ಕಾರ್ಯಕ್ರಮ ಸಂಘಟಿಸುವುದರ ಜೊತೆಗೆ ಸಮಾಜೋಪಯೋಗಿ ಕಾರ್ಯಕ್ರಮ ರೂಪಿಸಲಾ ಗುವುದು ಎಂದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk