This is the title of the web page
This is the title of the web page

Live Stream

[ytplayer id=’1198′]

September 2024
T F S S M T W
 1234
567891011
12131415161718
19202122232425
2627282930  

| Latest Version 8.0.1 |

ಹಾವೇರಿ

ಬೈಕ್ ನಲ್ಲಿ ಬಂದು ಸುಲಿಗೆ ಮಾಡುತ್ತಿದ್ದ ಮೂವರ ಬಂಧ‌‌ನ – ಹುಬ್ಬಳ್ಳಿಯ ಗಬ್ಬೂರಿನಲ್ಲಿ ಮೂವರನ್ನು ಬಂಧಿಸಿದ ತಡಸ ಪೊಲೀಸರು…..

ಬೈಕ್ ನಲ್ಲಿ ಬಂದು ಸುಲಿಗೆ ಮಾಡುತ್ತಿದ್ದ ಮೂವರ ಬಂಧ‌‌ನ – ಹುಬ್ಬಳ್ಳಿಯ ಗಬ್ಬೂರಿನಲ್ಲಿ ಮೂವರನ್ನು ಬಂಧಿಸಿದ ತಡಸ ಪೊಲೀಸರು…..
WhatsApp Group Join Now
Telegram Group Join Now

ತಡಸ

ಸುಲಿಗೆ ಮಾಡುತ್ತಿದ್ದ ಮೂವರನ್ನು ತಡಸ ಪೊಲೀಸರು ಬಂಧನ ಮಾಡಿದ್ದಾರೆ ಹೌದು ಸುಲಿಗೆ ಮಾಡಿರುವ ಆರೋಪದ ಮೇಲೆ ತಡಸ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಶ್ರೀನಿವಾಸ ತಿರುಪತಿ ವೀರಾಪುರ(26)ವಿವೇಕ ಚಂದ್ರಶೇಖರ ಬಳ್ಳಾರಿ(24), ನೀಲಕಂಠ ಪರಶು ರಾಮ ಗುಡಿಹಾಳ(35 ) ಬಂಧಿತ ಆರೋಪಿಗಳಾ ಗಿದ್ದಾರೆ.

ಬಂಧಿತರಿಂದ ಸುಲಿಗೆ ಮಾಡಿದ್ದ ಮೂರು ಮೊಬೈಲ್‌ಗಳು ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್‌ ಮತ್ತು ಒಂದು ಚಾಕುವನ್ನು ವಶಪಡಿಸಿಕೊಳ್ಳ ಲಾಗಿದೆ.ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಗ್ರಾಮವೊಂದರ ನಿವಾಸಿ ಮುತ್ತಪ್ಪ ಲಾರಿಯೊಂದರ ಕ್ಲೀನರ್ ಆಗಿದ್ದನು

ಮೇ 20ರಂದು ಬೆಳಗಿನ ಜಾವ 2 ಗಂಟೆಯಲ್ಲಿ, ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ಹೋಗುವ, ರಾಷ್ಟ್ರೀಯ ಹೆದ್ದಾರಿ 48ರಲ್ಲಿರುವ, ಅಂಬುಜಾ ಫ್ಯಾಕ್ಟರಿ ಹತ್ತಿರ, ಲಾರಿಯನ್ನು ನಿಲ್ಲಿಸಿ ಶೌಚಾಲ ಯ ಗೆ ಹೋಗಿದ್ದರು. ಆ ಸಮಯದಲ್ಲಿ ಬೈಕ್‌ನಲ್ಲಿ ಬಂದ ಮೂವರು ಅಪರಿಚಿತರು, ಚಾಕು ತೋರಿಸಿ ಬೆದರಿಸಿ ಮೊಬೈಲ್‌ನ್ನು ಕಿತ್ತುಕೊಂಡು ಹೋಗಿದ್ದರು

ಅದೇ ದಿನ ಅದೇ ರಸ್ತೆಯಲ್ಲಿ ರಾತ್ರಿ 3 ಗಂಟೆಗೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಪದವಿ ಕಾಲೇಜಿನ ಪ್ರಾಂಶುಪಾಲರು ಕುಟುಂಬ ಸಮೇತ ರಾಗಿ ರಾಣಿಬೆನ್ನೂರಿಗೆ ಹೋಗುತ್ತಿದ್ದವರು ಆಗರವಾಲ್ ವೇರ್‌ಹೌಸ್ ಹತ್ತಿರ ಮೂತ್ರ ವಿಸರ್ಜನೆಗೆ ಕಾರು ನಿಲ್ಲಿಸಿದ್ದಾರೆ.

ಬೈಕ್‌ನಲ್ಲಿ ಬಂದ ಮೂವರು ಅಪರಿಚಿತರು, ಚಾಕು ತೋರಿಸಿ, ಬೆದರಿಸಿ, ಎರಡು ಮೊಬೈಲ್‌ ಗಳು ಮತ್ತು ಕರಿಮಣಿ ತಾಳಿಯನ್ನು ಕಿತ್ತುಕೊಂಡು ಹೋಗಿದ್ದರು.ಈ ಬಗ್ಗೆ ತಡಸ ಠಾಣೆಯಲ್ಲಿ ದೂರು ದಾಖಲಾಗಿದ್ದ ಪ್ರಕರಣದಲ್ಲಿನ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು.

ಆ ತಂಡ ಮೇ 23ರಂದು ಬೆಳಗಿನ ಜಾವ 4 ಗಂಟೆಯಲ್ಲಿ, ಹುಬ್ಬಳ್ಳಿ-ಗಬ್ಬೂರ ಬೈಪಾಸ್ ಹತ್ತಿರ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸುದ್ದಿ ಸಂತೆ ನ್ಯೂಸ್ ತಡಸ…..


Google News

 

 

WhatsApp Group Join Now
Telegram Group Join Now
Suddi Sante Desk