ಸಿದ್ದಾರೂಢ ಬೆಳ್ಳಿ ಅಂಬಾರಿಗೆ 15 ಕೆಜಿ ಬೆಳ್ಳಿ ದೇಣಿಗೆ – ಶಾಂತಾಶ್ರಮದ ನಿಜಾನಂದ ಸ್ವಾಮೀಜಿ ಭಕ್ತರಿಂದ 15 ಕೆ.ಜಿ ಬೆಳ್ಳಿ ದೇಣಿಗೆ…..

Suddi Sante Desk
ಸಿದ್ದಾರೂಢ ಬೆಳ್ಳಿ ಅಂಬಾರಿಗೆ 15 ಕೆಜಿ ಬೆಳ್ಳಿ ದೇಣಿಗೆ – ಶಾಂತಾಶ್ರಮದ ನಿಜಾನಂದ ಸ್ವಾಮೀಜಿ ಭಕ್ತರಿಂದ 15 ಕೆ.ಜಿ ಬೆಳ್ಳಿ ದೇಣಿಗೆ…..

ಹುಬ್ಬಳ್ಳಿ

ಹೌದು ಉತ್ತರ ಕರ್ನಾಟಕದ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಬೆಳ್ಳಿ ಅಂಬಾರಿಗಾಗಿ ಭಕ್ತ ರಿಂದ ಬೆಳ್ಳಿ ಹರಿದು ಬರುತ್ತಿದೆ ಈ ಒಂದು ನಿಟ್ಟಿನಲ್ಲಿ ನೆರವಾಗುತ್ತಿದ್ದಾರೆ

ಸಿದ್ಧಾರೂಢಸ್ವಾಮಿ ಮಠದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೆಳ್ಳಿ ಅಂಬಾರಿಗಾಗಿ ದೂರದ ರಾಯಚೂರು ಜಿಲ್ಲೆಯ ಮಟ್ಟಿಮಲ್ಲಿಕಾಪುರ ಶಾಂತಾಶ್ರಮದ ನಿಜಾನಂದ ಸ್ವಾಮೀಜಿ ಹಾಗೂ ಭಕ್ತರಿಂದ 15 ಕೆ.ಜಿ ಬೆಳ್ಳಿ ದೇಣಿಗೆಯಾಗಿ ನೀಡ ಲಾಯಿತು.

ಇದೇ ವೇಳೆ ಮಠದಲ್ಲಿ  ತುಲಾಭಾರ ಸೇವೆ ನೆರವೇರಿಸಲಾಯಿತು.ನಂತರ ಸಿದ್ಧಾರೂಢ ಸ್ವಾಮಿ ಮಠದ ಟ್ರಸ್ಟ್ ಕಮಿಯಿಂದ ನಿಜಾನಂದ ಸ್ವಾಮೀಜಿ ಅವರನ್ನು ಗೌರವಿಸಲಾಯಿತು.

ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಉದಯಕುಮಾರ ಡಿ., ಗೌರವ ಕಾರ್ಯದರ್ಶಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಬಾಳು ಮಗಜಿ ಕೊಂಡಿ,ಮ್ಯಾನೇಜರ್ ಈರಣ್ಣ ತುಪ್ಪದ, ಭಕ್ತರು ಇದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.