ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವು – ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ದೊಡ್ಡ ದುರಂತ ಇನ್ನೂ ಎಚ್ಚೆತ್ತುಕೊಳ್ಳದ ಅಧಿಕಾರಿ ಗಳು…..

Suddi Sante Desk

ಚಾಮರಾಜನಗರ –

ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳ ಸಾವಿಗೀಡಾದ ಘಟನೆ ಚಾಮರಾಜ ನಗರ ದಲ್ಲಿ ನಡೆದಿದೆ‌.ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗೆ ತನಕ ಚಾಮರಾಜ ನಗರ ದ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ರೋಗಿಗಳ ಸರಣಿ ಸಾವಿಗೀಡಾಗಿದ್ದಾರೆ‌.ಸಮರ್ಪಕ ಆಕ್ಸಿಜನ್ ಸಿಲಿಂಡ ರ್ ಇಲ್ಲದೆ ರೋಗಿಗಳು ಧಾರಣ ಸಾವಿಗೀಡಾಗಿದ್ದಾರೆ

ಮೈಸೂರಿನಿಂದ ಪೂರೈಕೆಯಾಗುತ್ತಿದ್ದ ಆಕ್ಸಿಜನ್ ಸಿಲಿಂಡರ್ ಸ್ಥಗಿತ ಹಿನ್ನಲೆಯಲ್ಲಿ ಆಕ್ಸಿಜನ್ ಕೊರತೆ ಯಿಂದ ಈ ಒಂದು ಘಟನೆ ಸಂಭವಿಸಿದ್ದು ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದ 24 ಜನ ರೋಗಿಗಳು ನಿಧನ ರಾಗಿದ್ದಾರೆ.ಇದನ್ನು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಹೇಳಿದ್ದಾರೆ‌‌‌‌.

ಇನ್ನೂ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂ ರಿ ರವರ ಒಂದು ಪ್ರತಿಷ್ಠೆಗೆ ಬಲಿಯಾದರ 24 ಮಂದಿ ಎನ್ನುವ ಮಾತುಗಳು ಈಗ ಕೇಳಿ ಬರತಾ ಇವೆ. ಅಲ್ಲ ದೇ ಚಾಮರಾಜನಗರ ಜಿಲ್ಲೆಗೆ ಆಕ್ಸಿಜನ್ ಸಿಲಿಂಡರ್‌ ರ್ ಪೂರೈಕೆ ಮಾಡದಂತೆ ಮೌಖಿಕ ಆದೇಶ ನೀಡಿದ್ದ ರಂತೆ ಮೈಸೂರು ಜಿಲ್ಲಾಧಿಕಾರಿ ಇದರೊಂದಿಗೆ ಆಕ್ಸಿ ಜನ್ ಉತ್ಪಾದಿಸುವ ಏಜೆನ್ಸಿಗೆ ದಮ್ಕಿ ಹಾಕಿದ್ದರಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ ಅವ ರು.ಹೀಗಾಗಿ ಪೂರೈಕೆ ಬಂದ್ ಆಗಿತ್ತು.

ಭಾನು ವಾರ ಸಂಜೆಯಿಂದಲೇ ಉಲ್ಬಣವಾಗಿತ್ತಾ ಆಕ್ಸಿಜನ್ ಹೀಗಾಗಿ ಇಷ್ಟೊಂದು ದೊಡ್ಡ ಪ್ರಮಾಣ ದಲ್ಲಿ ದುರಂ ತ ವೊಂದು ಸಂಭವಿಸಿದೆ.ಇದನ್ನು ಅರಿತ ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹರವರ ಸೂಚನೆ ಯಂತೆ ತಡರಾತ್ರಿ ಬಂತು 60 ಜಂಬೋ ಸಿಲಿಂಡರ್ ಆಕ್ಸಿಜನ್ ಗಳನ್ನು ಕಳಿಸಲಾಗಿ ದೆ.ಒಟ್ಟಾರೆ ಏನೇ ಆಗಲಿ ರಾಜ್ಯದಲ್ಲಿ ದೊಡ್ಡ ಪ್ರಮಾ ಣದಲ್ಲಿ ದುರಂತ ವೊಂದು ಸಂಭವಿಸಿದ್ದು ವಿಷಾದದ ಸಂಗತಿಯಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.