ಸರ್ಕಾರಿ ಕಾಲೇಜ್ ನ 16 ಅಕೌಂಟ್ ನಲ್ಲಿನ 3 ಕೋಟಿ ಮಾಯ – ಕೋಟಿ ಕೋಟಿ ರೂಪಾಯಿ ಹೋಗಿದ್ದೆಲ್ಲಿಗೆ ತಿಳಿಯದ ಹಣದ ಮಂಗ ಮಾಯ

Suddi Sante Desk

ವಿಜಯನಗರ –

ನೀತಿಪಾಠ ಹೇಳಬೇಕಾದ ಜ್ಞಾನ ದೇಗುಲದಲ್ಲಿಯೇ ದೊಡ್ಡ ವರಿಂದ ನಡೆದಿದೆಯಾ ಅಕ್ರಮ ಎಂಬ ಅನುಮಾನ ವೊಂದು ಬೆಳಕಿಗೆ ಬಂದಿದೆ.ಹೌದು ಸರ್ಕಾರಿ ‌ಕಾಲೇಜಿನ 16 ಬ್ಯಾಂಕ್ ಅಕೌಂಟ್ ನಿಂದ‌ 3 ಕೋಟಿ ರೂಪಾಯಿ ಮಂಗ ಮಾಯಾವಾಗಿರೋ ಆರೋಪ ವಿಜಯನಗರ ಜಿಲ್ಲೆಯಲ್ಲಿ ಕಂಡು ಬಂದಿದೆ

ಪ್ರಿನ್ಸಿಪಲ್ ಮತ್ತು ಆಡಳಿತ ಮಂಡಳಿಗೆ ಗೊತ್ತಿದ್ದೇ ನಡೆದಿ ದೆಯಾ ಅಥವಾ ಅವರಿಗೆ ಗೊತ್ತಿಲ್ಲದೆ ನಡೆದಿದೆಯಾ ಅಕ್ರಮ ಎಂಬ ಮಾತುಗಳು ಕೇಳಿ ಬಂದಿದ್ದು ದೊಡ್ಡ ಪ್ರಮಾಣದಲ್ಲಿ ಗೋಲ್ ಮಾಲ್ ನಡೆದಿದೆ.ಹೊಸಪೇಟೆಯ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಕೋಟಿಗಟ್ಟಲೆ ಗೋಲ್ ಮಾಲ್ ನಡೆದಿದ್ದು ಬೆಳಕಿಗೆ ಬಂದಿದೆ

ಕಾಲೇಜು ಆಡಳಿತ ಮಂಡಳಿಯ ಆಂತರಿಕ ಕಚ್ಚಾಟದಿಂದ ಹೊರ ಬಂದಿದೆ ಅಕ್ರಮದ ವಾಸನೆ.ವಿವಿಧ ಬ್ಯಾಂಕ್ ನ 16 ಖಾತೆಯಿಂದ 3 ಕೋಟಿಗೂ ಹೆಚ್ಚು ಹಣ ಹಂತ ಹಂತವಾಗಿ ಡ್ರಾ ಮಾಡಿಕೊಳ್ಳಲಾಗಿದೆ.ಕಾಲೇಜಿನ ದೈನಂದಿನ ಖರ್ಚು ಅರೆಕಾಲಿಕ ಸಿಬ್ಬಂದಿ ವೇತನ ನೀಡಲೂ ಸಾಧ್ಯವಾಗದ ಪರಿಸ್ಥಿತಿ ಸಧ್ಯ ನಿರ್ಮಾಣವಾಗಿದೆ.ಹಳೇ ಪ್ರಾಂಶುಪಾಲ ಕನಕೇಶ್ವರ ಮೂರ್ತಿ ಏಪ್ರಿಲ್ 30 ನಿವೃತ್ತಿಯಾಗಿದ್ದಾರೆ ಮೇ 1ರಂದು ನಟರಾಜ್ ಪಾಟೀಲ್ ರಿಂದ ಅಧಿಕಾರ ಸ್ವೀಕಾರ ಮಾಡಿದ್ದು ಈಗ ಬೆಳಕಿಗೆ ಬಂದಿದೆ.ಈ ಮಧ್ಯೆ ನಡೆದ ಘಟನಾವಳಿಗಳಲ್ಲಿ ಹಣದ ಗೋಲ್ ಮಾಲ್ ಕುರಿತು ಬಹಿರಂಗವಾಗಿದೆ.ಎಲ್ಲಾ ಹಣ ಖರ್ಚು ಮಾಡಿಲ್ಲ ಕಾಲೇಜು ಅಭಿವೃದ್ಧಿಗೆ ಖರ್ಚು ಮಾಡಿದ್ದೇವೆ ಎನ್ನುತ್ತಿರೋ ಹಿಂದಿನ ಪ್ರಿನ್ಸಿಪಲ್‌.ಈ ಕುರಿತು ಮಾಹಿತಿಯಿಲ್ಲ ಆಡಳಿತ ಮಂಡ ಳಿಯ ಗಮನಕ್ಕೆ ತಂದಿದ್ದೇನೆ ಎನ್ನುತ್ತಿರೋ ಹೊಸ ಪ್ರಿನ್ಸಿಪಲ್ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.