ಕಾಂಗ್ರೇಸ್ ಪಕ್ಷ ಸೇರ್ಪಡೆಗೆ ಇನ್ನೂ 42 ನಾಯಕರು ಅರ್ಜಿ ಹಾಕಿದ್ದಾರೆ ಹೊಸದೊಂದು ಬಾಂಬ್ ಸಿಡಿಸಿದಿ DKC – ಕನಕಪುರ ಬಂಡೆ ಸ್ಪೋಟಕ ಹೇಳಿಕೆ ಬೆನ್ನಲ್ಲೇ ಎರಡು ಪಕ್ಷಗಳಲ್ಲಿ ಶುರುವಾಗಿದೆ ಢವ ಢವ…..

Suddi Sante Desk
ಕಾಂಗ್ರೇಸ್ ಪಕ್ಷ ಸೇರ್ಪಡೆಗೆ ಇನ್ನೂ 42 ನಾಯಕರು ಅರ್ಜಿ ಹಾಕಿದ್ದಾರೆ ಹೊಸದೊಂದು ಬಾಂಬ್ ಸಿಡಿಸಿದಿ DKC – ಕನಕಪುರ ಬಂಡೆ ಸ್ಪೋಟಕ ಹೇಳಿಕೆ ಬೆನ್ನಲ್ಲೇ ಎರಡು ಪಕ್ಷಗಳಲ್ಲಿ ಶುರುವಾಗಿದೆ ಢವ ಢವ…..

ಬೆಂಗಳೂರು

ಕಾಂಗ್ರೇಸ್ ಪಕ್ಷ ಸೇರ್ಪಡೆಗೆ ಇನ್ನೂ 42 ನಾಯಕರು ಅರ್ಜಿ ಹಾಕಿದ್ದಾರೆ ಹೊಸದೊಂದು ಬಾಂಬ್ ಸಿಡಿಸಿದಿ DKC – ಕನಕಪುರ ಬಂಡೆ ಸ್ಪೋಟಕ ಹೇಳಿಕೆ ಬೆನ್ನಲ್ಲೇ ಎರಡು ಪಕ್ಷಗಳಲ್ಲಿ ಶುರುವಾಗಿದೆ ಢವ ಢವ.

ಕಾಂಗ್ರೇಸ್ ಪಕ್ಷವನ್ನು ಸೇರಿಕೊಳ್ಳಲು 42 ನಾಯಕರು ಅರ್ಜಿ ಹಾಕಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಸ್ಪೋಟಕ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮತ್ತೆ ಈ ಒಂದು ವಿಚಾರ ಕುರಿತಂತೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ 42 ನಾಯಕರು ಅರ್ಜಿ ಹಾಕಿದ್ದಾರೆ ಪಟ್ಟಿಯನ್ನು ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

42 ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾ ಗಲು ಅರ್ಜಿ ಸಲ್ಲಿಸಿದ್ದು ಸೇರ್ಪಡೆಗೊಳ್ಳುವ ನಂಬರ್ ಹೇಳಬಾರದು ಅಂದುಕೊಂಡಿದ್ದೆ ಹೇಳುವ ಪರಿಸ್ಥಿತಿ ಬಂದಿದೆ.ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿರೋಧಿಸಿ 42 ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ.ಆಪ್ ನಿಂದ ಸ್ಪರ್ಧಿಸಿದ್ದ 100ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರಿದ್ದಾರೆ.ಬಿಜೆಪಿ ಒಂದು ಟೀಮ್ ಸಿನಿಮಾ ರೀತಿ ನಮ್ಮ ಜತೆ ಮಾತುಕತೆ ಮಾಡುತ್ತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ದೊಡ್ಡ ದೊಡ್ಡ ನಾಯಕರು ಸಂಪರ್ಕದಲ್ಲಿದ್ದಾರೆ ಅದೇ ರೀತಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಂಪರ್ಕದಲ್ಲೂ ಅನೇಕ ನಾಯಕರು ಇದ್ದಾರೆ ಎಂದರು.

ಕಾಂಗ್ರೆಸ್ ಸೇರ್ಪಡೆಯಾಗಿ ಎಂದು ಯಾರಿಗೂ ಒತ್ತಡ ಹಾಕುತ್ತಿಲ್ಲ ಸ್ವಂತವಾಗಿ ವಾಲೆಂಟರಿಯಾಗಿ ಬಿಜೆಪಿ ನಾಯಕರು ನಮ್ಮನ್ನು ಸಂಪರ್ಕ ಮಾಡು ತ್ತಿದ್ದಾರೆ ಯಾರಿಗೂ ಯಾರೂ ಒತ್ತಡ ಹಾಕುತ್ತಿಲ್ಲ ರಾಜ್ಯದಲ್ಲಿ ದೇಶದಲ್ಲಿ ರಾಜಕೀಯ ಧ್ರುವೀಕರಣ ಶುರುವಾಗಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಹೇಳಿದರು,

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.