ಪ್ರಾರ್ಥನಾ ಮಂದಿರವಾಗಿ ಬದಲಾದ ಸರ್ಕಾರಿ ಉರ್ದು ಶಾಲೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ ಸ್ಥಳೀಯರು…..

Suddi Sante Desk

ಮಂಡ್ಯ –

ಇದೊಂದು ಸರ್ಕಾರಿ ಉರ್ದು ಶಾಲೆ ಆದರೆ ಅದು ಆಗಿದ್ದು ಪ್ರಾರ್ಥನಾ ಮಂದಿರವಾಗಿ.ಹೌದು ಶಾಲೆಯ ಬದಲಿಗೆ ಈ ಒಂದು ಸರ್ಕಾರಿ ಉರ್ದು ಶಾಲೆ ಪ್ರಾರ್ಥನಾ ಮಂದಿರವಾಗಿ ನಿರ್ಮಾಣವಾಗಿದೆ.

ಮಕ್ಕಳ ಕೊರತೆಯಿಂದಾಗಿ ಮುಚ್ಚಿದ್ದ ಶಾಲೆಯಲ್ಲಿ ಅಕ್ರಮ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿ ದ್ದವು.ಸಂತೇಬಾಚಹಳ್ಳಿಯಲ್ಲಿ ಈ ಒಂದು ಘಟನೆ ಕಂಡು ಬಂದಿದೆ.

ಮಂಡ್ಯ ಜಿಲ್ಲೆ ಕೆಆರ್‌ಪೇಟೆ ತಾಲೂಕಿನ ಈ ಒಂದು ಗ್ರಾಮದಲ್ಲಿ ಇಂಥದೊಂದು ಘಟನೆ ಬೆಳಕಿಗೆ ಬಂದಿದೆ.ಸುದ್ದಿಯನ್ನು ತಿಳಿದು ಸ್ಥಳಕ್ಕೆ ಕೆಆರ್ ಪೇಟೆ ತಹಶಿಲ್ದಾರ್ ಶಿವಮೂರ್ತಿ,ಶಿಕ್ಷಣ ಇಲಾಖೆ ಅಧಿಕಾರಿ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು

ಶಾಲೆಯಲ್ಲಿ ಅತಿಕ್ರಮಣವನ್ನು ತೆರವುಗೊಳಿಸಿದರು ಅಧಿಕಾರಿಗಳು ಪೊಲೀಸರು.ಉರ್ದು ಶಾಲೆಯನ್ನ ನವೀಕರಣಗೊಳಿಸಿ ವಾಸ್ತವ್ಯವನ್ನು ಮಾಡಿದ್ದರು. ಶಾಲೆಯಲ್ಲಿ ಅಕ್ರಮ ವಾಸ್ತವ್ಯ ಹೂಡಿದ್ದರು ಹೊರ ರಾಜ್ಯದ ಮುಸ್ಲಿಂ ಧರ್ಮ ಗುರುಗಳು

ಶಾಲೆಯನ್ನ ಮನೆಯ ರೀತಿ ನವೀಕರಿಸಿದ್ದರು. ಅಧಿಕಾರಿಗಳು ಬರುವ ವಿಷಯ ತಿಳಿದು ಸ್ಥಳದಿಂದ ಎಸ್ಕೇಫ್ ಆಗಿದ್ದಾರೆ ಇವರೆಲ್ಲರೂ.ಬಾಂಗ್ಲಾದೇಶ ಹಾಗೂ ಬಿಹಾರಿಗಳ ವಾಸ ಎಂಬ ಆರೋಪ ಕೇಳಿ ಬಂದಿದೆ.

ಇದೀಗ ಶಾಲಾ ಕೊಠಡಿಯಲ್ಲಿದ್ದ ಸಾಮಾನುಗಳನ್ನು ತೆರವುಗೊಳಿಸಿದ್ದಾರೆ ಅಧಿಕಾರಿಗಳು ಪೊಲೀಸರು. ಪಿಡಿಓ ಮೋಹನ್ ರನ್ನು ತರಾಟೆ ತೆಗೆದುಕೊಂಡಿ ದ್ದಾರೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು. ಶಾಲೆಯನ್ನ ಬಾಬಯ್ಯ ದೇಗುಲ ಎಂದು ಇ-ಸ್ವತ್ತು ನೀಡಿರುವ ಹಿನ್ನೆಲೆಯಲ್ಲಿ ತರಾಟೆಗೆ ತೆಗೆದುಕೊಂಡ ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೇ ಶಾಲೆಯ ಜಾಗೆಯನ್ನು ಹೀಗೆ ದಾಖಲೆ ಗಳಲ್ಲಿ ಮಾಡಿ ಕೊಟ್ಟಿ ರುವ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.