ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ – ಸ್ಥಳದಲ್ಲೇ ಪೊಲೀಸರು ಹುಡುಕಾಟ…..

Suddi Sante Desk

ಶಹಬಾದ್ –

ಶಿಕ್ಷಕಿಯೊಬ್ಬರು ನದಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಹಬಾದ್ ತಾಲ್ಲೂಕಿನಲ್ಲಿ ನಡೆದಿದೆ. ಹೌದು ತಾಲ್ಲೂಕಿನ ಶಂಕರವಾಡಿ ಗ್ರಾಮದ ಕಾಗಿನಾ ನದಿಯಲ್ಲಿ ಈ ಒಂದು ಘಟನೆ ನಡೆದಿದೆ. ಕಡೇಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ಶಾಂತಾ ಅವರೇ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ ಆಗಿದ್ದಾರೆ

ಶ್ರೀಮತಿ ಶಾಂತಾ ಕುಮಾರಿಯವರೇ ನದಿಗೆ ಹಾರಿದ್ದು ಇವರು ಶಿಕ್ಷಕಿಯಾಗಿದ್ದಾರೆ.ಭಂಕೂರು ನಿವಾಸಿಯಾಗಿದ್ದಾರೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕುರಿತು ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.ಇನ್ನೂ ಇದರೊಂದಿಗೆ ಈ ಒಂದು ಶಿಕ್ಷಕಿ ಯೊಬ್ಬರ ಸಾವಿಗೆ ಶಹಬಾದ್ ತಾಲ್ಲೂಕಿನ ಶಿಕ್ಷಕ ಸಮುದಾ ಯ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

ಇನ್ನೂ ದುರಂತ ಸಾವು ಮನಸ್ಸಿಗೆ ತುಂಬಾ ಆಘಾತ ಮಾಡಿದೆ.ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಬೇಕಾದ ಶಿಕ್ಷಕರೇ ತಮ್ಮ ಅಮೂಲ್ಯವಾದ ಜೀವವನ್ನು ಬಲಿ ಕೊಟ್ಟರೆ ಹೇಗೆ ಜೀವನ ದಲ್ಲಿ ಬರುವ ಎಲ್ಲಾ ಸಮಸ್ಯೆಗಳಿಗೆ ಮತ್ತು ಸವಾಲುಗಳಿಗೆ ಶಾಂತ ರೀತಿಯಿಂದ ಆಲೋಚಿಸಿದಾಗ ಪರಿಹಾರ ಸಿಗುತ್ತದೆ ಇವರ ದುರಂತ ಸಾವು ನಮ್ಮ ಎಲ್ಲಾ ಶಿಕ್ಷಕರಿಗೆ ಬದುಕಿನ ಪಾಠವಾಗಲಿ ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾಡಿನ ಶಿಕ್ಷಕರು ಭಾವಪೂರ್ಣ ನಮನ ದೊಂದಿಗೆ ಸಂತಾಪವನ್ನು ಸೂಚಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.