ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಅಖಾಡಕ್ಕಿಳಿದ ಷಡಾಕ್ಷರಿ ಅವರು ನವಂಬರ್ 7 ಮಹತ್ವದ ಪ್ರತ್ಯೇಕ ಸಭೆ …..

Suddi Sante Desk

ಬೆಂಗಳೂರು –

ಶಿಕ್ಷಕರ ಸಮಸ್ಯೆಗಳ ಕುರಿತಂತೆ ಕೊನೆಗೂ ಹೇಳಿದಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಅಖಾಡಕ್ಕೆ ಇಳಿದಿದ್ದಾರೆ.ಹೌದು ಈ ಹಿಂದೆ ಹೇಳಿದಂತೆ ಅವರು ಪ್ರಾರಂಭದಲ್ಲಿ ರಾಜ್ಯದಲ್ಲಿನ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಚರ್ಚೆ ಮಾಡಲು ಮಹತ್ವದ ಸಭೆ ಕರೆದಿದ್ದಾರೆ.

ಹೌದು ನವಂಬರ್ 7 ರಂದು ಬೆಂಗಳೂರಿನಲ್ಲಿ ಇವರ ನೇತ್ರತ್ವದಲ್ಲಿ ಈ ಒಂದು ಪ್ರತ್ಯೇಕವಾದ ಸಭೆಯನ್ನು ಕರೆದಿದ್ದು ಹೀಗಾಗಿ ಸಮಸ್ಯೆಗಳಿಂದ ಕಂಗಾಲಾಗಿದ್ದ ನಾಡಿನ ಶಿಕ್ಷಕರು ಸಭೆಯ ಆಹ್ವಾನದಿಂದಾಗಿ ಸಂತೋಷಗೊಂಡಿ ದ್ದಾರೆ.ಹೌದು ಈವರೆಗೆ ರಾಜ್ಯದಲ್ಲಿನ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಪರಿಹಾರ ಆಗುತ್ತವೆ ನೆಮ್ಮದಿ ಸಿಗುತ್ತದೆ ಎಂದಕೊಂಡಿದ್ದ ಶಿಕ್ಷಕರಿಗೆ ಈವರೆಗೆ ಶಾಶ್ವತವಾದ ಪರಿಹಾರ ಅದರಲ್ಲೂ

ಪ್ರಮುಖವಾಗಿ ವರ್ಗಾವಣೆಯ ಸಮಸ್ಯೆ ದೊಡ್ಡ ಸಮಸ್ಯೆ ಯಾಗಿದ್ದು ಹೀಗಾಗಿ ಬೇಸತ್ತು ಆತಂಕದ ಲ್ಲಿದ್ದ ನಾಡಿನ ಶಿಕ್ಷಕರಿಗೆ ಈ ಹಿಂದೆ ಸಭೆಯೊಂದರಲ್ಲಿ ಷಡಾಕ್ಷರಿ ಅವರು ಭರವಸೆಯನ್ನು ನೀಡಿದ್ದರು ಸದ್ಯ ನವಂಬರ್ 7 ರಂದು ಬೆಂಗಳೂರಿನಲ್ಲಿ ಮಹತ್ವದ ಪ್ರತ್ಯೇಕವಾದ ಸಭೆ ಕರೆದಿದ್ದು ಇದರಿಂದ ನಾಡಿನ ಶಿಕ್ಷಕರು ಸಂತೋಷಗೊಂಡಿದ್ದು ಈ ಒಂದು ಸಭೆಯಲ್ಲಿ ಶಿಕ್ಷಕರು ಪಾಲ್ಗೊಳ್ಳಲಿದ್ದು ಯಾವ ತಿರ್ಮಾನವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದ್ದು

ಸಧ್ಯ ಶಿಕ್ಷಕರು ಕೂಡಾ ಬೆಂಗಳೂರಿನತ್ತ ಹೊಗಲು ಸಿದ್ದತೆ ಯನ್ನು ಮಾಡಿಕೊಳ್ಳುತ್ತಿದ್ದು ಹಬ್ಬ ಮುಗಿದ ಕೂಡಲೇ ಬೆಂಗಳೂರಿನತ್ತ ಪ್ರಯಾಣ ಬೆಳಸಲಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.