ಪ್ರಧಾನ ಗುರುಗಳ ಮೇಲೆ ಶಿಸ್ತು ಕ್ರಮಕ್ಕೆ ಸೂಚನೆ – ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕೆ ಸೂಚನೆ ನೀಡಿದ BEO…..

Suddi Sante Desk

ಕಲಬುರಗಿ –

ಸರ್ಕಾರಿ ಶಾಲೆಯ ಪ್ರಧಾನ ಗುರುಗಳೊಬ್ಬರು ಶಾಲಾ ಆವರಣದಲ್ಲಿ ಕರ್ತವ್ಯದ ಮೇಲೆ ಇದ್ದಾಗ ಕುಡಿದು ಬಂದು ಗಲಾಟೆ ಮಾಡೊದು ಹಾಗೇ ಶಾಲೆಯಲ್ಲಿ ಇದ್ದಾಗ ಕೆಟ್ಟ ದಾಗಿ ನಡೆದುಕೊಂಡ ಕುರಿತು ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಹೌದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೋರವಾರ ದ ಅಶೋಕ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗ ಳಾದ ರಾಜೇಂದ್ರ ಅವರ ಮೇಲೆ ಶಿಸ್ತು ಕ್ರಮಕ್ಕೆ ಸೂಚನೆ ನೀಡಲಾಗಿದೆ.

ಹೌದು ಕಳೆದ ಕೆಲ ದಿನಗಳಿಂದ ಇವರ ಈ ಒಂದು ವರ್ತನೆ ಯಿಂದಾಗಿ ಗ್ರಾಮಸ್ಥರು ಶಾಲೆಯ ಮಕ್ಕಳು ಶಿಕ್ಷಕರು ಬೇಸತ್ತಿದ್ದು ಈ ಒಂದು ಕುರಿತು ಗ್ರಾಮಸ್ಥರು ಇಲಾಖೆಯ ಅಧಿಕಾರಿಗಳಿಗೆ ದೂರನ್ನು ನೀಡಿದ್ದರು ಇದನ್ನು ಗಂಭೀರ ವಾಗಿ ತಗೆದುಕೊಂಡಿರುವ ಇಲಾಖೆಯ ಅಧಿಕಾರಿಗಳು ಸಧ್ಯ ಇವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಲು ಸೂಚನೆ ಯನ್ನು ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.