ಶಿಕ್ಷಕರ ಕನಸಿನ ಕೂಸು ಗುರು ಭವನಕ್ಕೆ ಭೂಮಿ ಪೂಜೆ ಕಾರ್ಯಕ್ರಮ – ಅರ್ಧಕ್ಕೆ ನಿಂತುಕೊಂಡಿದ್ದ ಭವನಕ್ಕೆ ಪೂರ್ಣ ಗೊಳಿಸಲು ಸಂಘಟನೆ ಯೊಂದಿಗೆ ಪಟ ತೊಟ್ಟಿದ್ದಾರೆ ಶಾಸಕರು…..

Suddi Sante Desk

ವಿಜಯಪುರ –

ಅರ್ಧಕ್ಕೆ ನಿಂತುಕೊಂಡಿದ್ದ ವಿಜಯಪುರ ದಲ್ಲಿನ ಗುರುಭವನ ನಿರ್ಮಾಣಕ್ಕೆ ಪುನರ್ ಚಾಲನೆ ನೀಡಲಾ ಗುತ್ತಿದೆ ಹೌದು ಡಿಸೆಂಬರ್ 31 ರಂದು ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದೆ

ಹೌದು ವಿಜಯಪುರ ಕೇಂದ್ರ ಭಾಗದಲ್ಲಿರುವ 2003 ರಲ್ಲಿ ಪ್ರಾರಂಭವಾಗಿ ಅರ್ಧಕ್ಕೆ ನಿಂತಿರುವ ಗುರುಭವನ ಪೂರ್ಣ ಗೊಳಿಸಲು ನಗರವಲಯದ ಶಾಸಕರಾದ ಬಸನಗೌಡ ಆರ್ ಪಾಟೀಲರು ಮುತುವರ್ಜಿವಹಿಸಿ ಸರ್ಕಾರದಿಂದ ಹಣ ತರಿಸುವಲ್ಲಿ ಯಶಸ್ವಿಯಾಗಿರುವುರು.ಅದರ ಪ್ರತಿಫ ಲವಾಗಿ ದಿನಾಂಕ 30-12-2021 ರ ಗುರುವಾರದಂದು 10:00 ಗಂಟೆಗೆ ಭೂಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಂ ಡಿದ್ದು ಶಿಕ್ಷಕರಲ್ಲಿ ಸಂತಸ ಮೂಡಿದೆ

ಗುರುಭವನದಲ್ಲಿ ವಿನ್ಯಾಸದ ಕೆಳಮಹಡಿ ಮತ್ತು ಒಂದನೇ ಮಹಡಿಯ ನೋಟ ಸುಂದರವಾಗಿದ್ದು ಬೇಗನೆ ಶಿಕ್ಷಕರ ಹಾಗೂ ಇಲಾಖೆಯ ಶೈಕ್ಷಣಿಕ ಚಟುವಟಿಕೆಗಳ ಬಳಕೆಗೆ ಬರಲೆಂದು ಸಮಸ್ತ ಗುರುವಂದದ ಬಯಕೆಯಾಗಿದೆ. ಶಿಕ್ಷಕರಿ ಗಾಗಿರುವ ಭವನ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಮಾನ್ಯ ಶಾಸಕರಿಗೂ,ಗುರುಭವನ ಸಮಿತಿಗೂ, ವಿಜಯ ಪುರ ಶಿಕ್ಷಕ ಸಂಘಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.