ವರ್ಗಾವಣೆಗೊಂಡ ಗುರುವಿಗೆ ಕಣ್ಣೀರಾಕಿ ಕಳಿಸಿಕೊಟ್ಟ ವಿದ್ಯಾರ್ಥಿ ಗಳು – ಬಿಕ್ಕಿ ಬಿಕ್ಕಿ ಅಳುತ್ತಾ ಬೀಳ್ಕೊಟ್ಟ ಮಕ್ಕಳು…..

Suddi Sante Desk

ವಿಜಯಪುರ –

ವರ್ಗಾವಣೆಗೊಂಡ ಶಿಕ್ಷಕರೊಬ್ಬರನ್ನು ಬೀಳ್ಕೊಡುವಾಗ ಕಣ್ಣೀರಾಕುತ್ತಾ ಕಳಿಸಿಕೊಡದೇ ಮುತ್ತಿಗೆ ಹಾಕಿ ತಡೆ ಹಿಡಿದ ಚಿತ್ರಣವೊಂದು ವಿಜಯಪುರ ದಲ್ಲಿ ಕಂಡು ಬಂದಿದೆ‌. ಹೌದು ಶಾಲೆಯಿಂದ ಹೊರಡುವ ವೇಳೆ ಶಿಕ್ಷಕ ಬಿ. ಕೆ. ರಾಮತೀರ್ಥ ಅವರನ್ನು ಸುತ್ತುವರೆದು ಕಣ್ಣೀರು ಹಾಕಿದ್ದಾರೆ ಮಕ್ಕಳ ಪ್ರೀತಿ ಕಂಡು ಶಿಕ್ಷಕ ಮೂಕ ವಿಸ್ಮಿತರಾಗಿದ್ದಾರೆ. ನಂತರ ವಿದ್ಯಾರ್ಥಿಗಳಿಗೆ ಸಮಾಧಾನ ಮಾಡಿ ಶಿಕ್ಷಕ ಬಿ. ಕೆ. ರಾಮತೀರ್ಥ ತೆರಳಿದ್ದಾರೆ.ಇದೆಲ್ಲಾ ವರ್ಗಾವಣೆಯಾದ ಗುರುವಿಗೆ ಕಣ್ಣೀರು ಹಾಕಿದ ವಿದ್ಯಾರ್ಥಿಗಳು ಇಂತಹ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕುಬಕಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಶಿಕ್ಷಕ ಬಿ.ಕೆ. ರಾಮತೀರ್ಥ ಕುಬಕಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ವರ್ಗಾವಣೆಯಾಗಿದ್ದರು ಶಾಲೆಯಿಂದ ಹೊರಡುವ ವೇಳೆ ಶಿಕ್ಷಕ ಬಿ. ಕೆ. ರಾಮತೀರ್ಥ ಅವರನ್ನು ಸುತ್ತುವರೆದು ಕಣ್ಣೀರು ಹಾಕಿದ್ದಾರೆ ಮಕ್ಕಳ ಪ್ರೀತಿ ಕಂಡು ಶಿಕ್ಷಕ ಮೂಕ ವಿಸ್ಮಿತರಾಗಿದ್ದಾರೆ ನಂತರ ವಿದ್ಯಾರ್ಥಿಗಳಿಗೆ ಸಮಾಧಾನ ಮಾಡಿ ಶಿಕ್ಷಕ ಬಿ. ಕೆ. ರಾಮ ತೀರ್ಥ ತೆರಳಿದ್ದಾರೆ ಗುರುವಿಗೆ ಇದಕ್ಕಿಂತ ಬೇರೆ ಪ್ರಶಸ್ತಿ ಗೌರವ ಇನ್ನೇನು ಬೇಕು ಅಲ್ವಾ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.