ಮದುವೆಗೆ ಬಟ್ಟೆ ತರಲು ಹೋಗಿ ಆಸ್ಪತ್ರೆ ಸೇರಿದ BEO ಕಚೇರಿ ಸಿಬ್ಬಂದಿ – ಆರೋಗ್ಯ ವಿಚಾರಣೆ ಮಾಡಿದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಮತ್ತು ಟೀಮ್…..

Suddi Sante Desk

ಬೆಂಗಳೂರು –

ಮದುವೆ ಗೆಂದು ಬಟ್ಟೆ ತಗೆದುಕೊಂಡು ರೈಲ್ವೆ ಹತ್ತುವ ಸಮಯದಲ್ಲಿ ಕಾಲು ಜಾರಿ ಬಿದ್ದು ಬಿಇಓ ಕಚೇರಿಯ ಸಿಬ್ಬಂದಿ ಯೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ‌.ಹೌದು ಕೊಪ್ಪಳ ಬಿಇಓ ಕಚೇರಿಯ ಸಿಬ್ಬಂದಿ ಶಾಮ್ ಕುಲಕರ್ಣಿ ಅವರಿಗೆ ಮಾರ್ಚ್ ತಿಂಗಳಲ್ಲಿ ಮದುವೆ ನಿಶ್ಚಯವಾಗಿದ್ದು ಹೀಗಾಗಿ ಬಟ್ಟೆಗಳ ನ್ನು ತರಲು ಬೆಂಗಳೂರಿನಲ್ಲಿರುವ ಸಹೋದರಿ ಬಳಿ ಹೋಗಿ ಶಾಪಿಂಗ್ ಮಾಡಿಕೊಂಡು ಹೊರಟಿದ್ದ ರೇಲ್ವೆ ಯನ್ನು ಹತ್ತುವ ಸಮಯದಲ್ಲಿ ಕಾಲು ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ

ಹೊರಟಿದ್ದ ರೇಲ್ವೆ ಯಿಂದ ಕಾಲು ಜಾರಿ ಬಿದ್ದಿದ್ದಾರೆ ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.ಸಧ್ಯ ಒಂದು ಕಾಲಿನ ಆಪರೇಷನ್ ಮಾಡಲಾಗಿದ್ದು ಗುಣಮುಖ ರಾಗಿತ್ತಿದ್ದಾರೆ.ಸಧ್ಯ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು KSPSTA ಸಂಘದ ರಾಜ್ಯಾಧ್ಯಕ್ಷರಾ ಗಿರುವ ಶಂಭುಲಿಂಗನಗೌಡ ಪಾಟೀಲ್ ಮತ್ತು ಹಲವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಣೆ ಮಾಡಿದರು

ಶಿಕ್ಷಣ ಇಲಾಖೆಯ ಸಿಬ್ಬಂದಿ ಆರೋಗ್ಯ ವಿಚಾರಣೆ ಮಾಡಿ ಕುಶಲೋಪರಿ ವಿಚಾರಣೆ ಮಾಡಿ ಶೀಘ್ರದಲ್ಲೇ ಗುಣಮುಖ ರಾಗಲೆಂದು ಹಾರೈಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.