ಭೀಕರ ಅಪಘಾತ ತಂದೆ ಮಗ ಸ್ಥಳದಲ್ಲೇ ಸಾವು – ಅಪ್ಪನ ದಿನದಂದೇ ಸಾವಿನಲ್ಲಿ ಒಂದಾದ ತಂದೆ ಮಗ…..

Suddi Sante Desk

ಭೀಕರ ಅಪಘಾತಕ್ಕೆ ಅಪ್ಪನ ದಿನದಂದೇ ತಂದೆ-ಮಗ ಸಾವಿಗೀಡಾಗಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ‌
ಹೌದು ತಂದೆ-ಮಗ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದು ಈ ಮೂಲಕ ಅಪ್ಪನ ದಿನದಂದೇ ಇಬ್ಬರು ಅಪ್ಪ-ಮಗ ಅಪಘಾತದಲ್ಲಿ ಸಾವಿಗೀಡಾದಂತಾಗಿದೆ.

ಹೌದು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಆಲೂರು ಈಶ್ವರಹಳ್ಳಿ ರಸ್ತೆಯ ಬಳಿ ಕಾರು-ಕ್ಯಾಂಟರ್ ಮಧ್ಯೆ ಸಂಭ ವಿಸಿದ್ದ ಭೀಕರ ಅಪಘಾತದಲ್ಲಿ ಅಪ್ಪ-ಮಗ ಇಬ್ಬರೂ ಸ್ಥಳ ದಲ್ಲೇ ಸಾವಿಗೀಡಾಗಿದ್ದು ಮೂವರು ಗಂಭೀರವಾಗಿ ಗಾಯ ಗೊಂಡಿದ್ದರು.ಇದೀಗ ಚಿಕ್ಕಮಗಳೂರು ಬಳಿ ಸಂಭವಿಸಿದ ಮತ್ತೊಂದು ಭೀಕರ ಅಪಘಾತದಲ್ಲಿ ತಂದೆ-ಮಗ ಸ್ಥಳ ದಲ್ಲೇ ಸಾವಿಗೀಡಾಗಿದ್ದಾರೆ.ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಇವರು ಕಾರಿನಲ್ಲಿ ಪ್ರಯಾಣಿಸುತ್ತಿ ದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.

ಮೂಡಿಗೆರೆ ತಾಲೂಕಿನ ಮುತ್ತಿಗೆಪುರದಲ್ಲಿ ಈ ಅಪಘಾತ ಸಂಭವಿಸಿದ್ದು, ಬೆಂಗಳೂರಿನ ರಾಜಾಜಿನಗರದ ನರಸಿಂಹ ರಾಜ್ (58)ಕಿರಣ್(23)ಸಾವಿಗೀಡಾಗಿದ್ದಾರೆ.ಇವರು ಧರ್ಮಸ್ಥಳದಿಂದ ಬೆಂಗಳೂರಿಗೆ ಮರಳುವಾಗ ಅಪಘಾತ ಸಂಭವಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.