ಸ್ವಾತಂತ್ರ್ಯೋತ್ಸವದದಲ್ಲಿ 20 ಶಾಲಾ ಮಕ್ಕಳಿಗೆ ಅನ್ಯಾಯ ಏಕಾಏಕಿ ಮಕ್ಕಳಿಗೆ ಗದ್ಗರಿಸಿ ಕಳುಹಿಸಿದ ಅಧಿಕಾರಿಗಳು…..

Suddi Sante Desk

ಮಂಡ್ಯ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮಂಡ್ಯ ವಿಶ್ವೇಶ್ವರಯ್ಯ ಮೈದಾನದಲ್ಲಿ ಆಯೋಜನೆಗೊಂ ಡಿದ್ದ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತ ಎಡವಟ್ಟು ಮಾಡಿದೆ.20 ಶಾಲೆಗಳ ಪಥಸಂಚಲನಾ ಕಾರ್ಯಕ್ರಮ ವನ್ನೇ ದಿಢೀರ್ ರದ್ದು ಮಾಡಲಾಗಿದೆ.

75ನೇ ಸ್ವತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಮಂಡ್ಯದ ವಿಶ್ವೇಶ್ವರಯ್ಯ ಮೈದಾನದಲ್ಲಿ ಸಚಿವ ಆರ್.ಅಶೋಕ್ ಅವರಿಂದ ಧ್ವಜಾರೋಹಣ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ,ಪಥಸಂಚಲನ ಸೇರಿ ದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು.ಆದರೆ ಸಚಿವರಿಗೆ ತುರ್ತಾಗಿ ಬೆಂಗಳೂರಿಗೆ ತೆರಳಬೇಕು ಎಂಬ ಕಾರಣಕ್ಕೆ 40 ನಿಮಿಷಕ್ಕೆ ಕಾರ್ಯಕ್ರಮ ಸೀಮಿತಗೊಳಿಸಿ 20 ಶಾಲೆಗಳ ಪಥಸಂಚಲನಾ ಕಾರ್ಯಕ್ರಮವನ್ನೇ ಎಸ್.ಪಿ ರದ್ದುಗೊಳಿಸಿದ್ದಾರೆ.

ಪಥಸಂಚಲನಕ್ಕಾಗಿ ಒಂದು ವಾರದಿಂದ ಸಿದ್ಧತೆ ನಡೆಸಿ ರೆಡಿಯಾಗಿ ಬಂದಿದ್ದ ಶಾಲಾ ಮಕ್ಕಳು ನಿರಾಶರಾಗಿದ್ದು ಕಳೆದ ಒಂದು ವಾರದಿಂದ ನಾವು ಪಥಸಂಚಲನಕ್ಕೆ ತಯಾರಿ ನಡೆಸಿದ್ದೇವೆ.ಈಗ ಪೊಲೀಸರು ಪಥಸಂಚಲನಕ್ಕೆ ತಡೆ ನೀಡಿದ್ದಾರೆ.ಇದರಿಂದ ಬೇಸರವಾಗಿದೆ ಎಂದು ಅಸ ಮಾಧಾನ ವ್ಯಕ್ತಪಡಿಸಿದ್ದಾರೆ.ಮಕ್ಕಳು ಬೇಸರ ವ್ಯಕ್ತಪಡಿಸಿ ದರೂ ಒಪ್ಪದ ಎಸ್ ಪಿ ಸಾಹೇಬರು ಶಾಲಾ ಮಕ್ಕಳನ್ನು ಗದರಿಸಿ ಕಳುಹಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.