ನವೆಂಬರ್ 30ರೊಳಗೆ ಬಿಸಿಯೂಟ ಯೋಜನೆಯ ಸಾಮಾಜಿಕ ಆಡಿಟ್ ಪೂರ್ಣಗೊಳಿಸಿ ರಾಜ್ಯಗಳಿಗೆ ಕೇಂದ್ರದ ಸೂಚನೆ

Suddi Sante Desk
ನವೆಂಬರ್ 30ರೊಳಗೆ ಬಿಸಿಯೂಟ ಯೋಜನೆಯ ಸಾಮಾಜಿಕ ಆಡಿಟ್ ಪೂರ್ಣಗೊಳಿಸಿ ರಾಜ್ಯಗಳಿಗೆ ಕೇಂದ್ರದ ಸೂಚನೆ
  • ಹೊಸದಿಲ್ಲಿ –
  • ನವೆಂಬರ್ 30 ರೊಳಗಾಗಿ ಪ್ರತಿ ಜಿಲ್ಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಸಾಮಾಜಿಕ ಆಡಿಟ್ ನಡೆಸಬೇಕೆಂದು ಕೇಂದ್ರ ಸರಕಾರ ಎಲ್ಲಾ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

 

ಹೌದು ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ 2013 ಅನ್ವಯ ಸಾಮಾಜಿಕ ಆಡಿಟ್ಕ ಡ್ಡಾಯವಾಗಿದ್ದ ರೂ ಹಲವು ರಾಜ್ಯಗಳು ನಿಗದಿತ ಅವಧಿಯೊಳಗೆ ಅದನ್ನು ಪೂರ್ಣಗೊಳಿಸದೇ ಇರುವುದರಿಂದ ಕೇಂದ್ರ ಇದೀಗ ಗಡುವು ವಿಧಿಸಿದೆ

 

ಸಾಮಾಜಿಕ ಆಡಿಟ್ ಕೆಲಸ ಆರಂಭಿಸಲಾಗಿದೆ ಎಂದು ಹಲವು ರಾಜ್ಯಗಳು ಈಗಾಗಲೇ ಹೇಳಿ ದ್ದರೂ ಅಂತಿಮ ವರದಿಗಳನ್ನು ಶಿಕ್ಷಣ ಸಚಿವಾ ಲಯದ ಅಧೀನದಲ್ಲಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಸಲ್ಲಿಸಿಲ್ಲ

 

2021-22 ರಿಂದೀಚೆಗೆ ಸಾಮಾಜಿಕ ಆಡಿಟ್ ನಡೆಸದೇ ಇರುವ ರಾಜ್ಯಗಳಲ್ಲಿ ತೆಲಂಗಾಣ, ಹರ್ಯಾಣ, ಛತ್ತೀಸಗಢ, ಪಂಜಾಬ್, ಉತ್ತರಾ ಖಂಡ, ಪಶ್ಚಿಮ ಬಂಗಾಳ,ಅರುಣಾಚಲ ಪ್ರದೇಶ ಸೇರಿವೆ. ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಪುದುಚ್ಚೇರಿ, ಲಡಾಖ್ ಮತ್ತು ಲಕ್ಷದ್ವೀಪ ಯಾವತ್ತೂ ಸಾಮಾಜಿಕ ಆಡಿಟ್ ನಡೆಸಿಲ್ಲ

ಆಡಿಟ್ ನಡೆಸಿದ ರಾಜ್ಯಗಳೂ ನಿಯಮಗಳನ್ನು ಪಾಲಿಸದ ಉದಾಹರಣೆಗಳಿವೆ. ಉದಾಹರಣೆಗೆ ಗುಜರಾತ್ ಕೇವಲ ಮೂರು ಜಿಲ್ಲೆಗಳ 60 ಶಾಲೆಗಳಲ್ಲಿ ಆಡಿಟ್ ನಡೆಸಿತ್ತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.