*ಹುಬ್ಬಳ್ಳಿ ಸಮೀಪ ಹೊತ್ತಿ ಉರಿದ ಖಾಸಗಿ ಬಸ್ತಪ್ಪಿದ ಭಾರಿ ದುರಂತ

Suddi Sante Desk
*ಹುಬ್ಬಳ್ಳಿ ಸಮೀಪ ಹೊತ್ತಿ ಉರಿದ ಖಾಸಗಿ ಬಸ್ತಪ್ಪಿದ ಭಾರಿ ದುರಂತ

ಹುಬ್ಬಳ್ಳಿ

ಖಾಸಗಿ ಬಸ್ ವೊಂದು ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ. ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಈ ಒಂದು ಘಟನೆ ನಡೆದಿದ್ದು ಇದರೊಂದಿಗೆ ತಪ್ಪಿದೆ ಭಾರಿ ದುರಂತವೊಂದು

ಹುಬ್ಬಳ್ಳಿ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಸುಕಿನ ಜಾವ ಈ ಒಂದು  ಘಟನೆ ನಡೆದಿದೆ. ಮುಂಬೈನಿಂದ ಮಂಗಳೂರಿನಿಂದ ಕಡೆಗೆ ಚಲಿಸುತ್ತಿದ್ದ ಸುಖವಿಹಾರಿ ಖಾಸಗಿ ಬಸ್

ಕೆಎ 51/ 6293 ನಂಬರ್‌ನ ರೇಶ್ಮಾ ಟ್ರಾವೆಲ್ಸ್‌ಗೆ ಸೇರಿದ ಬಸ್.ಟೈರ್ ಸ್ಫೋಟಗೊಂಡು ಏಕಾಏಕಿ ಬಸ್‌ಗೆ ವ್ಯಾಪಿಸಿದ ಬೆಂಕಿ.ಇದು ಕಾಣಿಸಿಕೊಳ್ಳುತ್ತಿ ದ್ದಂತೆ ಪ್ರಯಾಣಿಕರನ್ನು ಬಸ್‌ನಿಂದ ಕೆಳಗೆ ಇಳಿಸಿದ್ದಾರೆ ಬಸ್ ಚಾಲಕರು.

ಘಟನೆಯಲ್ಲಿ ಸಂಪೂರ್ಣವಾಗಿ ಸುಟ್ಟು ಕರುಕಲಾಗಿದೆ ಬಸ್ ಸಧ್ಯ ಈ ಒಂದು ವಿಚಾರ ಕುರಿತು ದೂರನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.

 

ವೆಂಕಟೇಶ್ ಜೊತೆಗೆ ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.