7ನೇ ವೇತನಕ್ಕೆ ಅಧ್ಯಕ್ಷರ ನೇಮಕ ಮುಂದೇನು…..ಮುಂದಿನ ಕಾರ್ಯ ಚಟುವಟಿಕೆ ರೂಪರೇಷೆಗಳ ಕುರಿತಂತೆ ಒಂದು ವಿಶೇಷ ಅವಲೋಕನ…..

Suddi Sante Desk
7ನೇ ವೇತನಕ್ಕೆ ಅಧ್ಯಕ್ಷರ ನೇಮಕ ಮುಂದೇನು…..ಮುಂದಿನ ಕಾರ್ಯ ಚಟುವಟಿಕೆ ರೂಪರೇಷೆಗಳ ಕುರಿತಂತೆ ಒಂದು ವಿಶೇಷ ಅವಲೋಕನ…..

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರಿಗೆ ಈಗಾಗಲೇ 6ನೇ ವೇತನ ಆಯೋಗದ ಅವಧಿ ಮುಗಿದಿದ್ದು ಹೀಗಾಗಿ ಸಧ್ಯ 7ನೇ ವೇತನ ಪರಿಷ್ಕ್ರರಣೆಗಾಗಿ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲಾ ಗಿದ್ದು ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ಅವರನ್ನು ನೇಮಕ ಮಾಡಲಾಗಿದ್ದು ಈ ಕುರಿತಂತೆ ಸ್ವತಃ ಮುಖ್ಯಮಂತ್ರಿ ಹೇಳಿ ಘೋಷಣೆ ಮಾಡಿದ್ದು ಹೀಗಾಗಿ ಸಮಸ್ತ ರಾಜ್ಯದ ಸರ್ಕಾರಿ ನೌಕರರು ಸಂತಸಗೊಂಡಿದ್ದು ಇದು ಒಂದು ವಿಚಾರವಾದರೆ ಇನ್ನೂ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ

ಹೌದು ಅಧ್ಯಕ್ಷರ ನೇಮಕದ ನಂತರ ರಾಜ್ಯ ಸರ್ಕಾರ ಈ ಕುರಿತಂತೆ ಅಧಿಕೃತವಾಗಿ ಆದೇಶ ವನ್ನು ಮಾಡಬೇಕು ಆದೇಶದ ಬಳಿಕ ಅವರಿ ಗೊಂದು ಈ ಕುರಿತಂತೆ ಕಾರ್ಯ ಚಟುವಟಿಕೆಗ ಳನ್ನು ಮಾಡಲು  ಕಚೇರಿ ಕೆಲ ಸಿಬ್ಬಂದಿಗಳನ್ನು ನೀಡಿದ ಮೇಲೆ ಅವರು ಅಧಿಕೃತವಾಗಿ 7ನೇ ವೇತನ ಆಯೋಗ ರಚನೆ ಕುರಿತಂತೆ ಕಾರ್ಯ ವನ್ನು ಆರಂಭ ಮಾಡುತ್ತಾರೆ

ಹೀಗಾಗಿ ಈಗಷ್ಟೇ ನೇಮಕ ಮಾಡಿ ಹೇಳಿದ್ದು ಸರ್ಕಾರದಿಂದ ಆದೇಶ ಬರಬೇಕು ನಂತರ ವೇತನ ಆಯೋಗದ ಕಾರ್ಯ ವೇಗವನ್ನು ಪಡೆದುಕೊಳ್ಳಲಿದ್ದು ಇದನ್ನು ಸಮಸ್ತ ರಾಜ್ಯದ ಸರ್ಕಾರಿ ನೌಕರರು ಕೂಡಾ ಒಪ್ಪಿಕೊಳ್ಳುತ್ತಾರೆ ಹೀಗಾಗಿ ಶೀಘ್ರದಲ್ಲೇ ರಾಜ್ಯ ಸರ್ಕಾರ ಆದೇಶ ವನ್ನು ಹೊರಡಿಸಿ ಅಧ್ಯಕ್ಷರಿಗೆ ಮುಂದಿನ ಕಾರ್ಯಕ್ಕೆ ಅನುಕೂಲ ಮಾಡಿಕೊಡಲಿ ಎಂಬೊದು ಸಮಸ್ತ  ಸರ್ಕಾರಿ ನೌಕರರ ಆಶಯವಾಗಿದ್ದು

ಇನ್ನೂ ಇದರ ನಡುವೆ ಈಗಾಗಲೇ ನೂತನ ಅಧ್ಯಕ್ಷರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರಕ್ಕೆ ನೌಕರರ ಮಾಹಿತಿ ಯನ್ನು ಕೇಳುವ ನಿಟ್ಟಿನಲ್ಲಿ ಪತ್ರವನ್ನು ಬರೆದಿದ್ದು ಮುಂದೇ ಏನೇನಾಗುತ್ತವೆ ಎಂಬೊದನ್ನು ಕಾದು ನೋಡಬೇಕಿದೆ.

ಚಕ್ರವರ್ತಿ ಜೊತೆ ರವಿ ಗೌಡರ ಸುದ್ದಿ ಸಂತೆ ನ್ನೂಸ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.