ನನ್ನ ಹುಟ್ಟು ಹಬ್ಬಕ್ಕೆ ಯಾರು ಬ್ಯಾನರ್ ಹೋರ್ಡಿಂಗ್ಸ್,ಕಟ್ ಔಟ್ ಹಾಕಿ ಅನಾವಶ್ಯಕ ಖರ್ಚು ಮಾಡಬೇಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂದೇಶ – ನಿಮ್ಮ ಪ್ರೀತಿ ವಿಶ್ವಾಸವೇ ನನಗೆ ಶುಭಾಶಯಗಳ ಆರ್ಶೀರ್ವಾದ ಎಂಬ ಸಂದೇಶದೊಂದಿಗೆ ದೇಶಕ್ಕೆ ಮಾದರಿಯಾದ ಕೇಂದ್ರ ಸಚಿವರು

Suddi Sante Desk
ನನ್ನ ಹುಟ್ಟು ಹಬ್ಬಕ್ಕೆ ಯಾರು ಬ್ಯಾನರ್ ಹೋರ್ಡಿಂಗ್ಸ್,ಕಟ್ ಔಟ್ ಹಾಕಿ ಅನಾವಶ್ಯಕ ಖರ್ಚು ಮಾಡಬೇಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂದೇಶ –  ನಿಮ್ಮ ಪ್ರೀತಿ ವಿಶ್ವಾಸವೇ ನನಗೆ ಶುಭಾಶಯಗಳ ಆರ್ಶೀರ್ವಾದ ಎಂಬ ಸಂದೇಶದೊಂದಿಗೆ ದೇಶಕ್ಕೆ ಮಾದರಿಯಾದ ಕೇಂದ್ರ ಸಚಿವರು

ಹುಬ್ಬಳ್ಳಿ

ಸಾಮಾನ್ಯವಾಗಿ ಯಾರಾದರೂ ಹುಟ್ಟು ಹಬ್ಬ ಬಂತು ಎಂದರೆ ಸಾಕು ಕೇಕ್ ಕತ್ತರಿಸಿ ಹತ್ತಾರು ಕಡೆಗಳಲ್ಲಿ ಬೇರೆ ಬೇರೆ ವೇದಿಕೆಯ ಕಾರ್ಯಕ್ರಮ ಗಳನ್ನು ಮಾಡುತ್ತಾ ಅದ್ದೂರಿಯಾಗಿ ಸಭೆ ಸಮಾ ರಂಭವನ್ನು ಮಾಡುತ್ತಾರೆ ಇನ್ನೂ ರಾಜಕೀಯ ನಾಯಕರ ಹುಟ್ಟು ಹಬ್ಬಗಳೆಂದರೆ ಸಾಕು ಎಲ್ಲೇಂ ದರಲ್ಲಿ ಬ್ಯಾನರ್ ಬಂಟಿಗ್ಸ್ ಕಟೌಟ್ಹೋರ್ಡಿಂಗ್ಸ್ ಹಾಕಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅವರ ಪೊಟೊ ಕೆಳಗಡೆ ಒಂದಿಷ್ಟು ಶುಭಾಶಯ ಕೋರುವವರ ಪೊಟೊಗಳನ್ನು ಹಾಕಿ ಅದ್ದೂರಿ ಯಾಗಿ ಆಚರಣೆ ಮಾಡೊದನ್ನು ನೋಡಿದ್ದೇವೆ ಕೇಳಿದ್ದೇವೆ

ಇದು ಇತ್ತೀಚಿಗಂತೂ ಹೆಚ್ಚಾಗಿದ್ದು ನಾ ಹೆಚ್ಚು ನೀ ಹೆಚ್ಚು ಎಂಬಂತೆ ಬ್ಯಾನರ್ ಹಾಕುವುದರಲ್ಲೂ ಸ್ಪರ್ಧೆಯ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ತಮ್ಮ ಹುಟ್ಟು ಹಬ್ಬಕ್ಕೆ ಪಕ್ಷದ ಕಾರ್ಯಕರ್ತರಿಗೆ ಮುಖಂಡರಿಗೆ ಆಪ್ತರಿಗೆ ಅಭಿ ಮಾನಿಗಳಿಗೆ ವಿಶೇಷವಾದ ಸಂದೇಶವನ್ನು ನೀಡಿ ದ್ದಾರೆ.

ನವಂಬರ್ 27 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಹುಟ್ಟು ಹಬ್ಬ ಹೀಗಾಗಿ ನಾನು ಈ ಬಾರಿಯ ಹುಟ್ಟು ಹಬ್ದದ ದಿನದಂದು ಆಚರಣೆ ಮಾಡಿಕೊಳ್ಳೊದಿಲ್ಲ ಹೀಗಾಗಿ ಯಾರು ಕೂಡಾ ಬ್ಯಾನರ್ ಬಂಟಿಂಗ್ಸ್ ಹಾಕಬೇಡಿ ಅನಾವಶ್ಯಕ ವಾಗಿ ಖರ್ಚನ್ನು ಮಾಡಬೇಡಿ ನಿಮ್ಮ ಪ್ರೀತಿಯ ಶುಭಾಶಯಗಳೇ ನನಗೆ ಆಶೀರ್ವಾದ ಎಂದಿ ದ್ದಾರೆ.ಇದರೊಂದಿಗೆ ಪಕ್ಷದ ಕಾರ್ಯಕರ್ತರಿಗೆ ಮುಖಂಡರಿಗೆ ಆಪ್ತರಿಗೆ ಅಭಿಮಾನಿಗಳಿಗೆ ಈ ಮೂಲಕ ವಿಶೇಷವಾದ ಸಂದೇಶವನ್ನು ನೀಡಿ ದೇಶದ ರಾಜಕೀಯ ನಾಯಕರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ಮಾದರಿಯಾಗಿ ಪ್ರೇರಣೆಯಾಗಿದ್ದಾರೆ.

ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.