7ನೇ ವೇತನ ಆಯೋಗದ ಸಭೆಯಲ್ಲಿ ಚರ್ಚೆಯಾಗಿದ್ದೇನು ಗೊತ್ತಾ – ಸಭೆಯಲ್ಲಿ ತಗೆದುಕೊಂಡರು ಕೆಲವೊಂದಿಷ್ಟು ಮಹತ್ವದ ನಿರ್ಧಾರಗಳನ್ನು

Suddi Sante Desk
7ನೇ ವೇತನ ಆಯೋಗದ ಸಭೆಯಲ್ಲಿ ಚರ್ಚೆಯಾಗಿದ್ದೇನು ಗೊತ್ತಾ – ಸಭೆಯಲ್ಲಿ ತಗೆದುಕೊಂಡರು ಕೆಲವೊಂದಿಷ್ಟು ಮಹತ್ವದ ನಿರ್ಧಾರಗಳನ್ನು

ಬೆಂಗಳೂರು

ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರರಣೆಗೆ ಈಗಾಗಲೇ 7ನೇ ವೇತನ ಆಯೋ ಗವನ್ನು ರಚನೆ ಮಾಡಲಾಗಿದೆ.ಇದರ ಬೆನ್ನಲ್ಲೇ ಈ ಕುರಿತಂತೆ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ವನ್ನು ಹೊರಡಿಸಿ ಈ ಒಂದು ಸಮಿತಿಗೆ ನಿವೃತ್ತ ಐಎಎಸ್ ಅಧಿಕಾರಿ ಡಾ ಸುಧಾಕರ್ ರಾವ್ ಅವರೇ ಅಧ್ಯಕ್ಷರು ಹಾಗೇ ಇವರೊಂದಿಗೆ ಇನ್ನೂ ಮೂವರು ಸದಸ್ಯರನ್ನು ಸಮಿತಿಗೆ ನೂತನ ಸದಸ್ಯರೆಂದು ನೇಮಕ ಮಾಡಿ ಈ ಕುರಿತಂತೆ ಯೂ ಕೂಡಾ ರಾಜ್ಯ ಸರ್ಕಾರ ಆದೇಶವನ್ನು ಹೊಸಡಿಸಿದ್ದು ಇದೇಲ್ಲದರ ನಡುವೆ ಸಮಿತಿಗಾಗಿ ಕೆಲಸಲಾಗಿದೆ.

ಈ ಒಂದು ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಅಧ್ಯಕ್ಷರಿಗೆ ಸಾಥ್ ನೀಡಲು ಮೂವರು ಸದಸ್ಯರನ್ನು ಕೂಡಾ ನೇಮಕ ಮಾಡಿ ಆದೇಶ ವನ್ನು ಹೊರಡಿಸಲಾಗಿದ್ದು ಇದರೊಂದಿಗೆ ಸಮಿತಿಗೆ ಸೂಕ್ತವಾದ ಕಚೇರಿಯನ್ನು ಕೂಡಾ ನೀಡಿ ಆದೇಶ ಮಾಡಿದ ಬೆನ್ನಲ್ಲೇ ಈಗ ಮುಂದಿನ ಕಾರ್ಯ ಚಟುವಟಿಕೆಗಳಿಗಾಗಿ ಸಮಿತಿಯ ಅಧ್ಯಕ್ಷರ ನೇತ್ರತ್ವದಲ್ಲಿನ ಟೀಮ್ ಮುಂದಾಗಿದೆ.

ಹೌದು ಸಧ್ಯ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಸಾಲು ಸಾಲಾಗಿ ಚುನಾವಣೆಗಳು ಬರಲಿದ್ದು ಇದನ್ನ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಕೂಡಾ ನಿಗದಿತ ಅವಧಿಯಲ್ಲಿ ಯೇ ಕೂಡಲೇ ಸಮಿತಿಗೆ ವರದಿಯನ್ನು ನೀಡು ವಂತೆ ಸೂಚನೆಯನ್ನು ನೀಡಿದ್ದು ಹೀಗಾಗಿ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿ ಸಿದ್ದು ಸಮಿತಿಯ ಅಧ್ಯಕ್ಷರ ನೇತ್ರತ್ವದಲ್ಲಿ ಸಮಿತಿಯ ಮೂವರು ಸದಸ್ಯರು ಸಭೆಯನ್ನು ಮಾಡಿದರು.

ಪ್ರಮುಖವಾಗಿ 44 ಜನ ಸಿಬ್ಬಂದಿಗಳ ನೇಮಕ ವಿಚಾರ ಕುರಿತಂತೆ ಸಭೆಯಲ್ಲಿ ಗಂಭೀರವಾಗಿ ಚರ್ಚೆಯಾಯಿತು ಯಾರನ್ನು ಯಾವ ಯಾವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕು ಈ ಕುರಿತಂತೆ ಸುಧೀರ್ಘವಾಗಿ ಚರ್ಚೆಯನ್ನು ಮಾಡಿ ಎರಡು ದಿನಗಳಲ್ಲಿ ಅಂತಿಮ ಮಾಡುವ ತೀರ್ಮಾ ನವನ್ನು ಕೈಗೊಳ್ಳಲಾಯಿತು.

ಹಾಗೇ ಕಚೇರಿ ವಿಚಾರ ಕುರಿತಂತೆ ಸಧ್ಯ ಒದಗಿಸಿರುವ ಕಟ್ಟಡದ ವ್ಯವಸ್ಥೆ ಹಾಗೇ ಇನ್ನೂ ಏನೇನು ಅವಶ್ಯಕತೆ ಇವೆ ಇವೇಲ್ಲಾ ವಿಚಾರಗಳ ಕುರಿತಂತೆಯೂ ಕೂಡಾ ಚರ್ಚೆಯನ್ನು ಮಾಡಿ ಶೀಘ್ರದಲ್ಲೇ ವರದಿ ತಯಾರಿಕೆಯನ್ನು ಆರಂಭ ಮಾಡಿ ಚುನಾವಣೆ ಯನ್ನು ಗಮನದಲ್ಲಿಟ್ಟು ಕೊಂಡು ರಾಜ್ಯ ಸರ್ಕಾರಿ ನೌಕರರಿಗೆ ಅನು ಕೂಲವಾಗುವ ನಿಟ್ಟಿನಲ್ಲಿ ಸಮಿತಿ ವರದಿಯನ್ನು ಕಾಲ ಮೀತಿಯೊಳ ಗಾಗಿಯೇ ಸಿದ್ದ ಮಾಡುವ ತೀರ್ಮಾನವನ್ನು ಕೂಡಾ ತಗೆದುಕೊಳ್ಳಲಾಯಿತು

ಇದರೊಂದಿಗೆ ಇನ್ನೂ ಕೆಲವೊಂದಿಷ್ಟು ಪ್ರಮುಖ ವಿಚಾರಗಳ ಕುರಿತಂತೆಯೂ ಕೂಡಾ ಈ ಒಂದು ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಯಿತು. ಒಟ್ಟಾರೆ 7ನೇ ವೇತನ ಆಯೋಗದ ಸಭೆಯಿಂ ದಾಗಿ ಕಾರ್ಯ ಚಟುವಟಿಕೆಗಳು ಮತ್ತಷ್ಟು ಚುರು ಕುಗೊಂಡಿದ್ದು ಶೀಘ್ರದಲ್ಲಿಯೇ ಈ ಒಂದು ಸಮಿತಿಯಿಂದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ರಾಜ್ಯದ ಸರ್ಕಾರಿ ನೌಕರರಿಗೆ ಅನುಕೂಲವಾಗಲಿ ಎಂಬೊದು ನಮ್ಮ ಆಶಯವಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.