ಹುಬ್ಬಳ್ಳಿಯಲ್ಲಿ ಬಸ್ ಚಕ್ರಕ್ಕೆ ಸಿಲುಕಿ ಕಾಂಗ್ರೆಸ್ ಕಾರ್ಯಕರ್ತ ಸಾವು – ಪೊಲೀಸರು ಎಲ್ಲದಕ್ಕೂ ಸೈ ಎನ್ನೊದಕ್ಕೆ ಸಾಕ್ಷಿಯಾದ ಹುಬ್ಬಳ್ಳಿಯ ಸಂಚಾರಿ ಪೊಲೀಸರು…..

Suddi Sante Desk
ಹುಬ್ಬಳ್ಳಿಯಲ್ಲಿ ಬಸ್ ಚಕ್ರಕ್ಕೆ ಸಿಲುಕಿ ಕಾಂಗ್ರೆಸ್ ಕಾರ್ಯಕರ್ತ ಸಾವು – ಪೊಲೀಸರು ಎಲ್ಲದಕ್ಕೂ ಸೈ ಎನ್ನೊದಕ್ಕೆ ಸಾಕ್ಷಿಯಾದ ಹುಬ್ಬಳ್ಳಿಯ ಸಂಚಾರಿ ಪೊಲೀಸರು…..

ಹುಬ್ಬಳ್ಳಿ –

ಜಲ ಜನ ಆಂದೋಲನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತನ ಸಾವು. ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯ ಬಳಿ ಬಸ್ ಅಪಘಾತ.ರಸ್ತೆ ಪಕ್ಕದಲ್ಲಿ ನಿಂತಿದ್ದ ಪಾದಚಾರಿ ಗಳ ಮೇಲೆ ಬಸ್ ಹರಿದು ಓರ್ವ ವ್ಯಕ್ತಿ ಸ್ಥಳದಲ್ಲಿ ಸಾವು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ದುರ್ದೈವಿ

ಸಾರಿಗೆ ಬಸ್ ಚಾಲಕ ಪರಾರಿಯಾಗಿದ್ದು ಮೃತ ನನ್ನು ಅಣ್ಣಿಗೇರಿ ಯ ನಿಂಗಪ್ಪ ಎಂದು ಗುರು ತಿಸಲಾಗಿದೆ

ಇನ್ನೂ ಈ ಒಂದು ಸುದ್ದಿ ಯನ್ನು ತಿಳಿದ ಹುಬ್ಬಳ್ಳಿಯ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತ ವ್ಯಕ್ತಿಯ ಶವವನ್ನು ತಾವೇ ಹೊತ್ತು ಹಾಕಿದರು.ಗೂಡ್ಸ್ ವಾಹನದಲ್ಲಿ ತುಂಬಿ ಆಸ್ಪತ್ರೆಗೆ ಶಿಪ್ಟ್ ಮಾಡಿದರು.

ಇದರೊಂದಿಗೆ ಹುಬ್ಬಳ್ಳಿಯ ಸಂಚಾರಿ ಪೊಲೀಸರು ಎಲ್ಲದಕ್ಕೂ ಸೈ ಎನ್ನೊದನ್ನು ತೋರಿಸಿಕೊಟ್ಟರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.