ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಮುಂದುವರೆದ ರಜತ್ ಅಭಿಯಾನ ಯಾತ್ರೆ – ಬದಲಾವಣೆ ಬಯಸಿ ಮನೆ ಮನೆಗೂ ತೆರಳಿ ಸಮಸ್ಯೆ ಆಲಿಸುತ್ತಿರುವ ಯುವ ನಾಯಕನಿಗೆ ಹೋದಲ್ಲೇಲ್ಲ ಕಂಡು ಬರುತ್ತಿದೆ ಅಭಿಮಾನದ ಹಾರೈಕೆ

Suddi Sante Desk
ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಮುಂದುವರೆದ ರಜತ್ ಅಭಿಯಾನ ಯಾತ್ರೆ –  ಬದಲಾವಣೆ ಬಯಸಿ  ಮನೆ ಮನೆಗೂ ತೆರಳಿ ಸಮಸ್ಯೆ ಆಲಿಸುತ್ತಿರುವ ಯುವ ನಾಯಕನಿಗೆ ಹೋದಲ್ಲೇಲ್ಲ ಕಂಡು ಬರುತ್ತಿದೆ ಅಭಿಮಾನದ ಹಾರೈಕೆ

ಹುಬ್ಬಳ್ಳಿ ಧಾರವಾಡ –

ಜಿಡ್ಡು ಗಟ್ಟಿದ ವ್ಯವಸ್ಥೆ ಬದಲಾವಣೆಯಾಗದ ಪರಸ್ಥಿತಿ 30 ವರ್ಷಗಳಿಂದ ಆಡಳಿತವಿದ್ದರೂ ಈವರೆಗೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿಯಾಗದ ಕ್ಷೇತ್ರ ಇದೇಲ್ಲವನ್ನು ಕಂಡುಕೊಂಡು ಬದಲಾವಣೆ ಬಯಸಿ ಹೊಸ ಕನಸು ಹೊಸದಾದ ಯೋಜನೆ ಹೊಸದಾದ ಪ್ಲಾನ್ ಗಳೊಂದಿಗೆ ಹೊಸತನದೊಂ ದಿಗೆ ಜನರ ಸೇವೆಗೆ ಮುಂದಾಗಿದ್ದಾರೆ ರಜತ್ ಉಳ್ಳಾಗಡ್ಡಿಮಠ.

ಕಳೆದ ಒಂದು ವರ್ಷದಿಂದ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಡುವಿಲ್ಲದೇ ತಿರುಗಾಡುತ್ತಿರುವ ಉತ್ಸಾಹಿ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ಕ್ಷೇತ್ರದಲ್ಲಿ ಹೋದಲ್ಲೇಲ್ಲ ಜನರಿಂದ ಸಾಕಷ್ಟು ಅಭೂತಪೂರ್ಣ ಉತ್ಸಾಹ ಬೆಂಬಲ ಪ್ರೀತಿ ಕಂಡು ಬರುತ್ತಿದೆ.ಕೇವಲ ಚುನಾ ವಣೆಯನ್ನು ಗಮನದಲ್ಲಿಟ್ಟುಕೊಳ್ಳದೇ ಕ್ಷೇತ್ರದ ಲ್ಲಿನ ಜನರ ಸಮಸ್ಯೆ ಸಂಕಷ್ಟಗಳಿಗೆ ಧ್ವನಿಯಾಗು ತ್ತಿರುವ ರಜತ್ ಉಳ್ಳಾಗಡ್ಡಿಮಠ ಅವರಿಗೆ ಸಧ್ಯ ಜನರು ತೋರುತ್ತಿರುವ ಪ್ರೀತಿಯೇ ಬರುವ ಚುನಾವಣೆಯಲ್ಲಿ ಉತ್ತರವಾಗುತ್ತಿದೆ.

ಹೌದು ಇದೇ ಒಂದು ದಾರಿಯಲ್ಲೂ ಕೂಡಾ ರಜತ್ ಉಳ್ಳಾಗಡ್ಡಿಮಠ ಕೂಡಾ ಸಾಗುತ್ತಿದ್ದು ಮನೆ ಮನೆಗೆ ರಜತ್ ಅಭಿಯಾನವನ್ನು ಮಾಡು ತ್ತಿದ್ದು 58ನೇ ಸಾಗರ್ ಕಾಲೋನಿಯಲ್ಲಿ ಈ ಒಂದು ಅಭಿಯಾನ ನಡೆಯಿತು. ಮನೆಮನೆಗೆ ರಜತ್ ಅಭಿಯಾನಕ್ಕೆ ಈ ಒಂದು ವಾರ್ಡ್ ನಲ್ಲೂ ಸಾಕಷ್ಟು ಪ್ರಮಾಣದಲ್ಲಿ ಉತ್ಸಾಹ ಹುಮ್ಮಸ್ಸು ಕಂಡು ಬಂದಿತು.

ಪ್ರತಿ ಮನೆಗಳಿಗೂ ಭೇಟಿ ನೀಡಿ ಅವರ ಸಂಕಷ್ಟ ಗಳನ್ನು ವಿಚಾರಿಸುತ್ತಿರುವ ರಜತ್ ಅವರು ಸುಂದರ ಹುಬ್ಬಳ್ಳಿಯ ಕನಸು ನನಸಾಗುವ ಪ್ರಯತ್ನಕ್ಕೆ ಜನರು ಉತ್ಸಾಹದಿಂದ ಕೈ ಜೋಡಿಸು ತ್ತಿದ್ದಾರೆ.ಈ ಒಂದು ಅಭಿಯಾನದ ಹೆಜ್ಜೆಗಳಿಗೆ ಪಕ್ಷದ ಕಾರ್ಯಕರ್ತರು ಮುಖಂಡರು ಆಪ್ತರು ಸೇರಿದಂತೆ ಹಲವರು ಬೆಂಬಲವನ್ನು ನೀಡುತ್ತಿ ದ್ದಾರೆ ಅಲ್ಲದೇ ಕಾರ್ಪೊರೇಟರ್ ಶ್ರೀಮತಿ ಸುವರ್ಣ ಕಲ್ಲಕುಂಟ್ಲ ಅವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.