14 ಶಿಕ್ಷಕರಿಗೆ ಕಾರಣ ಕೇಳಿ ನೊಟೀಸ್ ನೀಡಿದ DDPI – ಸಾಮೂಹಿಕ ನೊಟೀಸ್ ನೀಡಿದ ಕಾರಣ ಕೇಳಿದರೆ ಶಾಕ್ ಆಗತೀರಾ

Suddi Sante Desk
14 ಶಿಕ್ಷಕರಿಗೆ ಕಾರಣ ಕೇಳಿ ನೊಟೀಸ್ ನೀಡಿದ DDPI – ಸಾಮೂಹಿಕ ನೊಟೀಸ್ ನೀಡಿದ ಕಾರಣ ಕೇಳಿದರೆ ಶಾಕ್ ಆಗತೀರಾ

ದಾವಣಗೆರೆ

ಮಕ್ಕಳೊಂದಿಗೆ ಶೈಕ್ಷಣಿಕ ಪ್ರವಾಸಕ್ಕೆ ಹೋಗ ಬೇಕಾದ ಶಿಕ್ಷಕರೇ ಏಕಾಏಕಿ ಶಾಲೆಗೆ ರಜೆಯನ್ನು ಘೋಷಣೆ ಮಾಡಿ ತಾವು ಅಷ್ಟೇ ಪ್ರವಾಸಕ್ಕೆ ಹೋಗಿರುವ ಆರೋಪವೊಂದು ದಾವಣಗೆರೆ ಯಲ್ಲಿ ಕೇಳಿ ಬಂದಿದೆ.ಹೌದು ಶಾಲೆಗೆ ಬೀಗ ಜಡಿದು ಶಿಕ್ಷಕರು ಮೋಜು ಮಸ್ತಿಗಾಗಿ ಪ್ರವಾಸಕ್ಕೆ ತೆರಳಿದ್ದಾರೆ.ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ ನವೆಂಬರ್ 12ರಂದು ಶನಿವಾರ ಮಕ್ಕಳಿಗೆ ರಜೆ ಘೋಷಿಸಿ ದಾಂಡೇಲಿ ಪ್ರವಾಸಕ್ಕೆ ಹೋಗಿದ್ದಾರೆ.ಶೈಕ್ಷಣಿಕ ಪ್ರವಾಸಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಬೇಕಿದ್ದ ಶಿಕ್ಷಕರು ಮೋಜು ಮಸ್ತಿಗಾಗಿ ತಾವೇ ಪ್ರವಾಸ ಕೈಗೊಂಡಿದ್ದಾರೆ.

ಈ ಶಾಲೆಯಲ್ಲಿ LKG ಯಿಂದ SSLC ವರೆಗೆ 290 ಮಕ್ಕಳು ಕಲಿಯುತ್ತಿದ್ದಾರೆ.ಎಲ್ಲಾ ಮಕ್ಕಳಿಗೆ ಒಂದು ದಿನ ರಜೆಯನ್ನು ನೀಡಿ ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ಎಲ್ಲಾ 14 ಜನ ಶಿಕ್ಷಕರು ಮತ್ತು ಶಿಕ್ಷಕಿಯರು ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಇನ್ನೂ ಪ್ರಮುಖವಾಗಿ ಶಿಕ್ಷಣ ಇಲಾಖೆ ಮೇಲಾಧಿ ಕಾರಿಗಳ ಅನುಮತಿ ಪಡೆಯದೇ ಶಾಲೆಗೆ ಏಕಾಏಕಿ ರಜೆಯನ್ನು ಘೋಷಣೆ ಮಾಡಿ ಪ್ರವಾಸಕ್ಕೆ ಹೋಗಿ ಬಂದಿರುವುದು ಚರ್ಚೆಗೆ ಕಾರಣವಾಗಿದೆ

ಈ ಒಂದು ವಿಚಾರ ಗಮನಕ್ಕೆ ಬರುತ್ತಿದ್ದಂತೆ ಇದನ್ನು  ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸಧ್ಯ 14 ಶಿಕ್ಷಕರಿಗೆ  ಕಾರಣ ಕೇಳಿ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಿದ್ದು ಮುಂದೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.