ಶಿಕ್ಷಕಿ ಆತ್ಮಹತ್ಯೆ ಶಾಲೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ರೂಪಾ ಟೀಚರ್…..

Suddi Sante Desk
ಶಿಕ್ಷಕಿ ಆತ್ಮಹತ್ಯೆ ಶಾಲೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ರೂಪಾ ಟೀಚರ್…..

ವಿಜಯನಗರ

ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.ಖಾಸಗಿ ಶಾಲೆ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಹಶಿಕ್ಷಕಿಯೊ ಬ್ಬರು ತನ್ನ ಪತಿ ಹಾಗೂ ಅತ್ತೆ, ಮಾವಂದಿರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಮನ ನೊಂದು ಶಾಲೆಯ ಕೊಠಡಿಯಲ್ಲಿಯೇ ಆತ್ಮ ಹತ್ಯೆಗೆ ಶರಣಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ಖಾಸಗಿ ಶಾಲೆಯಾದ ನ್ಯಾಷನಲ್ ಸ್ಕೂಲ್‌ನಲ್ಲಿ ಈ ದುರ್ಘಟನೆ ನಡೆದಿದೆ.ಬಸಮ್ಮ ಅಲಿಯಾಸ್ ರೂಪ (34) ಮೃತ ಶಿಕ್ಷಕಿ ಆಗಿದ್ದಾರೆ. ಮೃತ ಮಹಿಳೆಯ ಗಂಡ ಅರ್ಜುನ್‌ ಪರಶೆಟ್ಟಿ ಕೂಡ ಖಾಸಗಿ ಶಾಲೆಯ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಆಗಿಂದಾಗ್ಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರಂತೆ ಆದರೆ ಈಗಾಗಲೇ ಹಲವು ಬಾರಿ ವರದಕ್ಷಿಣೆ ಹಣವನ್ನು ತಂದುಕೊಟ್ಟಿದ್ದರೂ ಮನೆಯಲ್ಲಿ ಕಿರುಕುಳ ನೀಡುವುದನ್ನು ಬಿಟ್ಟಿಲ್ಲ.ಈ ಹಿನ್ನೆಲೆಯಲ್ಲಿ ಶಾಲೆಯ ಕೊಠಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ವಿಜಯನಗರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.