ಶರಣು ಅಂಗಡಿ ಗೆ MP ಟಿಕೇಟ್ ನೀಡಿ – ಸಾಮಾಜಿಕ ಜಾಲ ತಾಣಗಳಲ್ಲಿ ಆರಂಭಗೊಂಡ ಅಭಿಯಾನ…..

Suddi Sante Desk
ಶರಣು ಅಂಗಡಿ ಗೆ MP ಟಿಕೇಟ್ ನೀಡಿ – ಸಾಮಾಜಿಕ ಜಾಲ ತಾಣಗಳಲ್ಲಿ ಆರಂಭಗೊಂಡ ಅಭಿಯಾನ…..

ಧಾರವಾಡ

ಬಿಜೆಪಿ ಪಕ್ಷದ ಯುವ ಮುಖಂಡ ಉತ್ಸಾಹಿ ಕಾರ್ಯಕರ್ತರಲ್ಲಿ ಒಬ್ಬರಾಗಿರುವ ಶರಣು ಅಂಗಡಿ ಅವರಿಗೆ ಈ ಬಾರಿ ಲೋಕಸಭಾ ಕ್ಷೇತ್ರದ ಚುನಾವಣಾ ಟಿಕೆಟ್ ನೀಡುವಂತೆ ಒತ್ತಾಯ ಒತ್ತಡ ನಡೆಯುತ್ತಿದ್ದು ಈ ಒಂದು ನಿಟ್ಟಿನಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನ ಆರಂಭಗೊಂಡಿದೆ

ಹೌದು ಯುವನಾಯಕರಾದ ಶರಣು ಎಫ್. ಅಂಗಡಿಯವರಗೆ ಸಮಾಜ ಸೇವೆ ಹಾಗೂ ಜನ ಸೇವೆ ಮಾಡಲು ಪಕ್ಷದ ಬಗ್ಗೆ ಅವರಲ್ಲಿರೋ ಶ್ರದ್ದೆ, ಭಕ್ತಿ, ಕಾಳಜಿ, ಸೇವಾ ಮನೋಭಾವ ಮತ್ತು ಜವಾ ಬ್ದಾರಿಗಳನ್ನು ಗುರುತಿಸಿ ಅವರಿಗೆ ಒಂದು ಉನ್ನತ ಹುದ್ದೆಯನ್ನು ಲೋಕಸಭಾ ಅಭ್ಯರ್ಥಿಯಾಗಿ ಟಿಕೆಟ್ ನೀಡುವ ಮೂಲಕ ಅಪಾರ ಅಭಿಮಾನಿ ಸ್ನೇಹಿತರನ್ನು ಹಾಗೂ ಜನಬೆಂಬಲ ಹೊಂದಿದ ಅವರನ್ನು ಆರಿಸಿ ತರುಲು ಪಕ್ಷದ ವರಿಷ್ಠರು ಮುಖಂಡರುಗಳೆಲ್ಲ ಶ್ರಮಿಸಬೇಕು ಉತ್ಸಾಹಿ ಯುವನಾಯಕರನ್ನು ಬೆಳೆಸಬೇಕೆಂದು ವಿನಂತಿ.

ಹೀಗೆ ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ಪ್ರಮಾಣದ ಆಂದೋಲನವೊಂದು ಅರಂಭ ಗೊಂಡಿದ್ದು ಬೆಂಬಲವನ್ನು ನೀಡುತ್ತಿದ್ದು ಒತ್ತಾಯ ಒತ್ತಡ ಮಾಡುತ್ತಿದ್ದಾರೆ.ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಆಕಾಂಕ್ಷೆ ಯಾಗಿದ್ದು ಈ ಒಂದು ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಕೂಡಾ ನಡೆಯುತ್ತಿವೆ

ಇನ್ನೂ ಪಕ್ಷದ ಸಂಘಟನೆ ಸೇರಿದಂತೆ ಹಲವಾರು ವಿಚಾರ ಗಳಲ್ಲಿ ಶರಣು ಅಂಗಡಿ ಉತ್ಸಾಹ ದಿಂದ ಓಡಾಡಿಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ‌ ಹೀಗಾಗಿ ನಿಷ್ಠಾವಂತ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು ಈಗಾಗಲೇ ಕ್ಷೇತ್ರದಲ್ಲಿ ಉಳಿದುಕೊಂಡು ಪಕ್ಷದ ಸಂಘಟನೆ ಸೇರಿದಂತೆ ಹಲವಾರು ಕೆಲಸ ಕಾರ್ಯಗಳನ್ನು ಮಾಡತಾ ಇದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.