ಧಾರವಾಡದಲ್ಲಿ ಭೀಕರ ಅಪಘಾತ ಇಬ್ಬರು ಸಾವು – ಕೋಟೂರ ಗ್ರಾಮದ ಗಂಗಾಧರ,ನಾಗರಾಜ ಸ್ಥಳದಲ್ಲೇ ಸಾವು…..

Suddi Sante Desk
ಧಾರವಾಡದಲ್ಲಿ ಭೀಕರ ಅಪಘಾತ ಇಬ್ಬರು ಸಾವು – ಕೋಟೂರ ಗ್ರಾಮದ ಗಂಗಾಧರ,ನಾಗರಾಜ ಸ್ಥಳದಲ್ಲೇ ಸಾವು…..

ಧಾರವಾಡ

ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ ದಲ್ಲಿ ನಡೆದಿದೆ.ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ.

ಇನ್ನೂ ಈ ಒಂದು ಅಪಘಾತದಲ್ಲಿ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು ಧಾರವಾಡ ತಾಲೂಕಿನ ತೇಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಈ ಒಂದು ಘಟನೆ ನಡೆದಿದೆ.

ಗಂಗಾಧರ (೨೨) ಹಾಗೂ ನಾಗರಾಜ್(೨೨) ಸಾವನ್ನಪ್ಪಿದ ಬೈಕ್ ಸವಾರರಾಗಿದ್ದು ಇಬ್ಬರು ಧಾರವಾಡ ತಾಲೂಕಿನ ಕೋಟೂರು ಗ್ರಾಮದ ವರಾಗಿದ್ದಾರೆ.ವಾಹನ‌ ಡಿಕ್ಕಿಯ ನಂತರ ಹೆದ್ದಾರಿ ಮೇಲೆಯೇ ಜೀವ ಬಿಟ್ಟಿದ್ದಾರೆ ಈ ಇಬ್ಬರು ಗೆಳೆಯರು.

ಇನ್ನೂ ಈ ಒಂದು ಅಪಘಾತದ ಸುದ್ದಿ ಯನ್ನು ತಿಳಿದ ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ‌.

ಅನಿಲಕುಮಾರ ಉಳವನ್ನವರ ಸುದ್ದಿ ಸಂತೆ ನ್ಯೂಸ್ ಗರಗ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.