ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ವಾಚ್ ಗಾಗಿ ಕೊಲೆ – ಕೊಲೆ ಮಾಡಿ ಚಿಕಿತ್ಸೆ ಪಡೆದುಕೊಳ್ಳಲು ಬಂದವನಿಗೆ ಆಸ್ಪತ್ರೆಯಲ್ಲಿ ಹೆಡೆಮೂರಿ ಕಟ್ಟಿದ ಕೇಶ್ವಾಪೂರ ಪೊಲೀಸರು…..

Suddi Sante Desk
ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ವಾಚ್ ಗಾಗಿ ಕೊಲೆ – ಕೊಲೆ ಮಾಡಿ ಚಿಕಿತ್ಸೆ ಪಡೆದುಕೊಳ್ಳಲು ಬಂದವನಿಗೆ ಆಸ್ಪತ್ರೆಯಲ್ಲಿ ಹೆಡೆಮೂರಿ ಕಟ್ಟಿದ ಕೇಶ್ವಾಪೂರ ಪೊಲೀಸರು…..

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ವಾಚ್ ಗಾಗಿ ಕೊಲೆ  ಕೊಲೆ ಮಾಡಿ ಚಿಕಿತ್ಸೆ ಪಡೆದುಕೊಳ್ಳಲು ಬಂದವ ನಿಗೆ ಆಸ್ಪತ್ರೆಯಲ್ಲಿ ಹೆಡೆಮೂರಿ ಕಟ್ಟಿದ ಕೇಶ್ವಾಪೂರ ಪೊಲೀಸರು

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ವಾಚ್ ಗಾಗಿ ಭೀಕರ ಕೊಲೆಯೊಂದು ನಡೆದಿದೆ.ಹೌದು ಕಳೆದ ಹಲವು ದಿನಗಳಿಂದ ಶಾಂತವಾಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಚಾಕು ಸದ್ದು ಮಾಡಿದೆ.ಸ್ಮಾರ್ಟ್ ವಾಚ್ ಗಾಗಿ ಹುಬ್ಬಳ್ಳಿ ಯಲ್ಲಿ ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಲಾಗಿದೆ.

ಅಸ್ಲಂ ಮಕಾಂದರ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಮಂಜುನಾಥ್ ಜೋನಲ್ಲಿ ಎಂಬಾತನೆ ಹಲ್ಲೆ ನಡೆಸಿದವನಾಗಿದ್ದಾನೆ.ಅಸ್ಲಂ ನ ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ ಇನ್ನೂ ರಕ್ತದ ಮಡಿಲಲ್ಲಿ ಬಿದ್ದ ಅಸ್ಲಂನನ್ನು ಕೂಡಲೇ ಆತನ ಸ್ನೇಹಿತರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ದ್ದಾರೆ ಆದರೆ ಚಿಕಿಸ್ತೆ ಫಲಿಸದೆ ಅಸ್ಲಂ ಕೊನೆಯು ಸಿರೆಳೆದಿದ್ದಾನೆ..

ಇನ್ನೂ ಇತ್ತ ಚಾಕು ಇರಿದು ಎದೆ ನೋವು ಎಂದು ಕೊಂಡು ಕಿಮ್ಸ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದ ಮಂಜು ನನ್ನು ಪೊಲೀಸರು ಆಸ್ಪತ್ರೆ ಯಲ್ಲಿಯೇ ಬಂಧಿಸಿದ್ದಾರೆ.ಮಾಹಿತಿ ತಿಳಿಯುತ್ತಿ ದ್ದಂತೆ ಎಚ್ಚೆತ್ತುಕೊಂಡ ಕೇಶ್ವಾಪೂರ ಠಾಣೆ ಹಾಗೂ ವಿದ್ಯಾನಗರ ಪೊಲೀಸರು ಕೊಲೆ ಮಾಡಿದ ಆರೋಪಿಯನ್ನು ಕೆಲವೆ ನಿಮಿಷದಲ್ಲಿ ಬಂಧಿಸಿದ್ದಾರೆ.

ಆಸ್ಪತ್ರೆಯಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಇನ್ಸ್ಪಕ್ಟರ್ ಶ್ರೀಮಂತ ಹುಣಸಿಕಟ್ಟಿ ಮತ್ತು ಟೀಮ್ ನವರು ಕೊಲೆ ಆರೋಪಿ ಮಂಜುನನ್ನು ಲಾಕ್ ಮಾಡಿದ್ದಾರೆ ನಂತರ ಕೇಶ್ವಾಪೂರ ಪೊಲೀಸರಿಗೆ ಒಪ್ಪಿಸಿದ್ದಾರೆ.ಇನ್ನೂ ಈ ಒಂದು ಸುದ್ದಿಯನ್ನು ತಿಳಿದು ಕಿಮ್ಸ್ ಆಸ್ಪತ್ರೆಗೆ ಎಸಿಪಿ ಬಾಳಪ್ಪ ನಂದಗಾವಿ

ಕೇಶ್ವಪೂರ ಠಾಣೆ ಪಿಐ ಸಾತೆನಳ್ಳಿ, ಪಿ ಎಸ್ ಐ ಸದಾಶಿವ ಕಾನಟ್ಟಿ, ವಿದ್ಯಾ ನಗರ ಠಾಣೆಯ ಪಿ ಎಸ್ ಐ ಶ್ರೀಮಂತ ಹುಣಸಿ ಕಟ್ಟಿ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಇತ್ತ ಈ ಒಂದು ಕುರಿತಂತೆ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.