ಈ ಬಾರಿಯೂ ಶಾಲೆಗಳಿಗೆ ದಸರಾ ರಜೆ ಕಡಿತ – ರಜೆ ಕಡಿತಕ್ಕೆ ರಾಜ್ಯಾಧ್ಯಂತ ಆಕ್ರೋಶ ಶಿಕ್ಷಕರಿಗೆ ನಿರಂತರ ಕರ್ತವ್ಯ ಮಾಡುವಂತಾಗಿದೆ…..

Suddi Sante Desk
ಈ ಬಾರಿಯೂ ಶಾಲೆಗಳಿಗೆ ದಸರಾ ರಜೆ ಕಡಿತ – ರಜೆ ಕಡಿತಕ್ಕೆ ರಾಜ್ಯಾಧ್ಯಂತ ಆಕ್ರೋಶ ಶಿಕ್ಷಕರಿಗೆ ನಿರಂತರ ಕರ್ತವ್ಯ ಮಾಡುವಂತಾಗಿದೆ…..

ಬೆಂಗಳೂರು

ರಾಜ್ಯದ ಶಾಲೆಗಳಿಗೆ ಈ ಬಾರಿಯೂ ದಸರಾ ರಜೆ ಯನ್ನು ಕಡಿತವನ್ನು ಮಾಡಲಾಗಿದೆ ಹೌದು ರಾಜ್ಯ ಸರ್ಕಾರವು ರಾಜ್ಯದ ಶಾಲೆಗಳಿಗೆ ಈ ಬಾರಿಯೂ ದಸರಾ ರಜೆಯನ್ನು ಕಡಿತಗೊಳಿಸಲಾಗಿದ್ದು ಶಿಕ್ಷಕ ರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.ರಾಜ್ಯದಲ್ಲಿ ಅ.2 ರಿಂದ ಅ.29ರವರೆಗೆ ನೀಡಲಾಗುತ್ತಿದ್ದ ದಸರಾ ರಜೆಗಳನ್ನು ಕೊರೊನಾ ಹಿನ್ನೆಲೆಯಲ್ಲಿ ಈ ಹಿಂದೆ ಕಡಿತಗೊಳಿಸಲಾಗಿತ್ತು.

ಲಾಕ್ ಡೌನ್ ನಲ್ಲಿ ನಡೆಯದ ತರಗತಿಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾ ಗಿತ್ತು.ಈಗ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದ್ದರೂ ಸರ್ಕಾರ ಹಿಂದಿನ ಅದೇ ಕಡಿತ ನೀತಿ ಅನುಸ ರಿಸುತ್ತಿದೆ.ಸಾಮಾನ್ಯ ಶಾಲೆಗಳಿಗೆ ಆ.8 ರಿಂದ 24 ಕ್ಕೆ ಸೀಮಿತಗೊಂಡಿದ್ದು ವಿಶೇಷ ಶಾಲೆ ಮಕ್ಕಳಿಗೆ ದಸರಾ ರಜೆಯನ್ನು ರದ್ದುಗೊಳಿಸಿದೆ.ಈ ಮೂಲಕ ಇಲಾಖೆಯ ವಿವಿಧ ಕರ್ತವ್ಯಕ್ಕೆ ನಿಯೋಜನೆಗೊ ಳ್ಳುವ ಶಿಕ್ಷಕರಿಗೆ ನಿರಂತರ ಕರ್ತವ್ಯ ಮಾಡುವಂ ತಾಗಿದೆ.

ಇನ್ನೂ ಸಧ್ಯ ಯಾವುದೇ ರೀತಿಯ ಏನೇ ಸಮಸ್ಯೆ ಇರದಿದ್ದರೂ ಕೂಡಾ ಮತ್ತೆ ಶಾಲೆಗಳಿಗೆ ರಜೆ ಯನ್ನು ಕಡಿತ ಗೊಳಿಸಿ ಶಿಕ್ಷಕರು ನಿರಂತರವಾಗಿ ಕರ್ತವ್ಯ ವನ್ನು ಮಾಡುವಂತಾಗಿದ್ದು ರಾಜ್ಯದ ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದ್ದು ಇತ್ತ ಈ ಒಂದು ವಿಚಾರ ಕುರಿತು ರಾಜ್ಯದ ಶಿಕ್ಷಕರ ಸಂಘಟನೆಯ ನಾಯಕರು ಏನು ಮಾಡತಾರೆ ಎಂಬೊಂದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.