ಧಾರವಾಡ ಗೆ ಹೋಗಿ ಬರತೇನಿ ಎಂದು ಲೋಕೂರಿನ ಸಂತೋಷ ನಾಪತ್ತೆ – ಸಂತೋಷನನ್ನು ನೋಡಿದರೆ ಪೊಲೀಸರಿಗೆ ಮಾಹಿತಿ ನೀಡಿ ಸಹಾಯ ಮಾಡ್ರರಲ್ಲ…..

Suddi Sante Desk
ಧಾರವಾಡ ಗೆ ಹೋಗಿ ಬರತೇನಿ ಎಂದು ಲೋಕೂರಿನ ಸಂತೋಷ ನಾಪತ್ತೆ – ಸಂತೋಷನನ್ನು ನೋಡಿದರೆ ಪೊಲೀಸರಿಗೆ ಮಾಹಿತಿ ನೀಡಿ ಸಹಾಯ ಮಾಡ್ರರಲ್ಲ…..

ಧಾರವಾಡ

ಧಾರವಾಡ ಲೋಕೂರಿನ ನಿವಾಸಿ 35 ವರ್ಷದ ಸಂತೋಷ ಚನ್ನಪ್ಪ ಅಸುಂಡಿ ಆಗಸ್ಟ್ 1, 2023 ರಂದು ಬೆಳಿಗ್ಗೆ 11 ಗಂಟೆಗೆ ಗರಗ ಗ್ರಾಮದ ಹೋಟೆಲ್‍ನಿಂದ ಧಾರವಾಡಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ಮರಳಿ ಬರದೇ ಕಾಣೆಯಾಗಿದ್ದಾರೆ ಎಂದು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ವ್ಯಕ್ತಿಯ ಎತ್ತರ 5.3 ಫೂಟ್, ಸಾಧಾರಣ ಮೈಕಟ್ಟು, ಸಾದಗೆಂಪು ಮೈ ಬಣ್ಣ, ದುಂಡು ಮುಖ, ನೆಟ್ಟನೆ ಮೂಗು, ತಲೆಯಲ್ಲಿ ಕಪ್ಪು ಕೂದಲು, ಕಪ್ಪು ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಭಾಷೆಯನ್ನು ಮಾತನಾಡುತ್ತಾನೆ.

ಇವರ ಸುಳಿವು ಸಿಕ್ಕವರು ತಮ್ಮ ಠಾಣಾ ವ್ಯಾಪ್ತಿ ಯಲ್ಲಿ ಕಂಡು ಬಂದಲ್ಲಿ ಅಥವಾ ಏನಾದರು ಮಾಹಿತಿ ಲಭ್ಯವಾದಲ್ಲಿ ತಕ್ಷಣ ಗರಗ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಗರಗ ಪೊಲೀಸ್ ಇನ್ಸ್ಪೆಕ್ಟರ್  ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.