ರಾಜ್ಯ ಸರ್ಕಾರಿ ನೌಕರರ ವೇತನ 40% ಹೆಚ್ಚಳ – CM ಜೊತೆಯಲ್ಲಿ 7ನೇ ವೇತನ ಆಯೋಗದ ಸಮಿತಿಯ ಸಭೆಯಲ್ಲಿ ಚರ್ಚೆ…..

Suddi Sante Desk
ರಾಜ್ಯ ಸರ್ಕಾರಿ ನೌಕರರ ವೇತನ 40% ಹೆಚ್ಚಳ – CM ಜೊತೆಯಲ್ಲಿ 7ನೇ ವೇತನ ಆಯೋಗದ ಸಮಿತಿಯ ಸಭೆಯಲ್ಲಿ ಚರ್ಚೆ…..

ಬೆಂಗಳೂರು

ಏಳನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.ಬೆಂಗಳೂರಿನ ಸಿಎಮ್ ನಿವಾಸದಲ್ಲಿ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಭೇಟಿಯಾಗಿ ಚರ್ಚೆ ಮಾಡಿದರು.

ಮೂಲಗಳ ಪ್ರಕಾರ ಆಯೋಗವು ನವೆಂಬರ್ ಅಂತ್ಯಕ್ಕೆ ತನ್ನ ವರದಿ ಸಲ್ಲಿಸಲಿದೆ.ವರದಿಯ ಶಿಫಾರಸುಗಳು ಜಾರಿಯಾದರೆ ರಾಜ್ಯ ಸರ್ಕಾರಿ ನೌಕರರ ವೇತನವು ಶೇ.38ರಿಂದ 40% ಹೆಚ್ಚಳ ವಾಗುವ ಸಾಧ್ಯತೆ ಇದೆ.

 

ಈ ಸಮಿತಿಯು ಮೇ 19 ರಂದೇ ವರದಿಯನ್ನು ಸಲ್ಲಿಸಬೇಕಿತ್ತು ಆದರೆ ಚುನಾವಣೆ ಇದ್ದುದರಿಂದ ಮತ್ತೆ 6 ತಿಂಗಳ ಕಾಲಾವಕಾಶವನ್ನು ವಿಸ್ತರಿಸಲಾ ಗಿತ್ತು.ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂ ದರಾಜು ನಸೀರ್ ಅಹ್ಮದ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.