ವರ್ಗಾವಣೆ ವಿಚಾರದಲ್ಲಿ ದಿಟ್ಟ ನಿಲುವನ್ನು ತೆಗೆದುಕೊಂಡು ಶಿಕ್ಷಕರಿಗೆ ನೆರವಾದ ಅಧಿಕಾರಿಗಳು – ಶಿಕ್ಷಕರ ಕಷ್ಟಕ್ಕೆ ಸ್ಪಂದಿಸಿದ ಅಧಿಕಾರಿಗಳಿಗೆ ನಾಡಿನ ಶಿಕ್ಷಕರಿಂದ ಮೆಚ್ಚುಗೆಯ ಮಹಾಪೂರ…..

Suddi Sante Desk
ವರ್ಗಾವಣೆ ವಿಚಾರದಲ್ಲಿ ದಿಟ್ಟ ನಿಲುವನ್ನು ತೆಗೆದುಕೊಂಡು ಶಿಕ್ಷಕರಿಗೆ ನೆರವಾದ ಅಧಿಕಾರಿಗಳು – ಶಿಕ್ಷಕರ ಕಷ್ಟಕ್ಕೆ ಸ್ಪಂದಿಸಿದ ಅಧಿಕಾರಿಗಳಿಗೆ ನಾಡಿನ ಶಿಕ್ಷಕರಿಂದ ಮೆಚ್ಚುಗೆಯ ಮಹಾಪೂರ…..

ಬೆಂಗಳೂರು

ವರ್ಗಾವಣೆ ವಿಚಾರ ದಲ್ಲಿ ನಾಡಿನ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆ ಯನ್ನು ಅನುಭ ವಿಸುತ್ತಿದ್ದರು.ವರ್ಗಾವಣೆ ವಿಚಾರವಾಗಿ ಒಂದು ದಿಟ್ಟ ನಿಲುವನ್ನು ಇಲಾಖೆಯ ಹಿರಿಯ ಅಧಿಕಾರಿ ಗಳು ತೆಗೆದುಕೊಂಡು ರಾಜ್ಯದ ಶಿಕ್ಷಕರಿಗೆ ಈಗ ನೆರವಾಗಿದ್ದಾರೆ.

ಹೌದು ಆಯುಕ್ತರಾಗಿರುವ ಆರ್ ವಿಶಾಲ್ ಹಾಗೂ ಪ್ರಸನ್ನ ಕುಮಾರ್ ಗೆ ಹೃತ್ಪೂರ್ವಕ ಧನ್ಯವಾದಗಳು ಪ್ರತಿಯೊಬ್ಬ ಶಿಕ್ಷಕರು ತಮ್ಮ ಸ್ವಂತ ಊರುಗಳಿಗೆ ಕೌನ್ಸಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡು ಬರುವ ಹಾಗೆ ಅನುಕೂಲ ಮಾಡಿದ್ದಾರೆ

ಬರುವಾಗ ಶಿಕ್ಷಕರ ಮುಖದಲ್ಲಿ ಹೊರಡುವಂತಹ ಸಂತೋಷದ ನಗೆಗಡಲು ಹಾಗೆ ಅವರ ಕುಟುಂಬ ದಲ್ಲಿ ಆಗುವಂತಹ ಸಂತೋಷ ನೆಮ್ಮದಿಯ ಉಸಿರು ನಿಜಕ್ಕೂ ಒಂದು ಆನಂದ

.ಅಷ್ಟೇ ಅಲ್ಲ ಎಷ್ಟೋ ಸಂಸಾರಗಳ ಉಳಿವಿಗೆ ಕಾರಣರಾಗಿದ್ದೀರಿ ತಮ್ಮ ಪೋಷಕರನ್ನು ದೂರ ಬಿಟ್ಟು ಅನಾಥರಂತೆ ಬದುಕುತ್ತಿದ್ದ ಶಿಕ್ಷಕರ ಮಕ್ಕಳಿಗೆ ಮತ್ತೆ ಅವರ ಮಡಿಲನ್ನ ಸೇರುವಂತೆ ಮಾಡಿ ಅವರ ಮುಂದಿನ ಸುಂದರ ಬದುಕಿಗೆ ಕಾರಣರಾಗಿದ್ದೀರಿ ಇಂತಹ ವರ್ಗಾವಣೆ ಇತಿಹಾಸ ದಲ್ಲೆ ಒಂದು ಮೈಲಿಗಲ್ಲು ಎಂದು ಹೇಳಬಹುದು

ಇಂತಹ ವರ್ಗಾವಣೆಗೆ ಶಿಕ್ಷಕರ ನೆಮ್ಮದಿಗೆ ಕಾರಣರಾಗಿರುವಂತಹ ಆಯುಕ್ತರಿಗೆ ಎಲ್ಲಾ ಅಧಿಕಾರಿ ವರ್ಗದವರಿಗೆ ಘನ ಸರ್ಕಾರಕ್ಕೆ ವಿಶೇಷವಾಗಿ ತಮ್ಮ ಸ್ವಾರ್ಥವನ್ನು ಬಿಟ್ಟು ಎಲ್ಲಾ ಶಿಕ್ಷಕರ ಪರವಾಗಿ ನಾಯಕತ್ವವಹಿಸಿ ಅಧಿಕಾರಿ ಗಳಿಗೆ ಒತ್ತಡವನ್ನು ಹಾಕಿದವರಿಗೆ ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇನ್ನೂ ಈ ಒಂದು ವರ್ಗಾವಣೆ ಯ ಹೋರಾಟದ ಹಿಂದೆ ಹೋರಾಟಗಳಿಗೆ ಭಾಗವಹಿಸಿ ಹೋರಾಟ ಗಳನ್ನು ಯಶಸ್ವಿಗೊಳಿಸಿದಂತಹ ಎಲ್ಲ ಶಿಕ್ಷಕರಿಗೆ ಹಾಗೂ ಅವರ ಕುಟುಂಬಕ್ಕೆ ರಾಜ್ಯದ ಶಿಕ್ಷಕ ಬಂಧುಗಳು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಗಳನ್ನು ಸಲ್ಲಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.