ಧಾರವಾಡ –
ಕರ್ನಾಟಕ ಶಿಕ್ಷಕರ ಪರಿಷತ್ತಿನ ವತಿಯಿಂದ ಇಂದು ಧಾರವಾಡದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾದ್ಯಕ್ಷರಾದ ಸಿ ಎಸ್ ಷಡಕ್ಷರಿ ಅವರಿಗೆ ಸತ್ಕರಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿಕ್ಷಕರ ಸಮಸ್ಯೆ ಗಳು ತುಂಬಾ ಜಟಿಲವಾದ ಸಮಸ್ಯೆಗಳಿವೆ
ಅದರಲ್ಲೂ ವರ್ಗಾವಣೆ ಸಮಸ್ಯೆ ನಿಜಕ್ಕೂ ತುಂಬಾ ಬೇಸರ ತರಿಸಿದೆ ಅದರಲ್ಲೂ ಬಹುದೂರದಲ್ಲಿ ಮಾನಸಿಕವಾಗಿ ನೆಮ್ಮದಿ ಇಲ್ಲದೇ ಹೊರಜಿಲ್ಲೆಗಳ ಶಿಕ್ಷಕರನ್ನು ಅವರ ಸ್ವಂತ ಜಿಲ್ಲೆಗೆ ವರ್ಗಾವಣೆಯಾಗಿ ಹೋಗಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡೋಣ.ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರ ಜೊತೆ ಮಾತನಾಡಿ ಶಿಕ್ಷಕರ ವರ್ಗಾವಣೆ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ
ನೀವುಗಳು ಎಲ್ಲರಿಗೂ ಒಟ್ಟಾಗಿ ಬೆಂಗಳೂರಿಗೆ ಬನ್ನಿ ನಿಮ್ಮ ಜೊತೆ ನಾನಿರುವೆ ಎಂದರು ಅಲ್ಲದೇ ಎನ್ ಪಿ ಎಸ್ ಸಮಸ್ಯೆಯನ್ನು ಸಹ ಹೋಗಲಾಡಿಸಲು ಸಹ ನಾನು ಹೋರಾಟಕ್ಕೆ ಬದ್ದನಾಗಿರುವೆ ಮುಂದಿನ ವರ್ಷದಿಂದ ವೇತನ ಆಯೋಗ ರಚನೆ ಸೇರಿದಂತೆ ನೌಕರರ ವಿವಿಧ ಬೇಕು ಬೇಡಿಕೆಗಳನ್ನು ಈಡೇರಿ ಸಲು ಕಂಕಣಭದ್ದನಾಗಿರುವೆ ಎಂದರು.
ನೌಕರರ ಕ್ಯಾಶಲೆಸ್ ಚಿಕಿತ್ಸೆಗೆ ಈಗಾಗಲೇ ಸರಕಾರ ಒಪ್ಪಿಗೆ ನೀಡಿದೆ ನೌಕರರು ಸಹಕರಿಸಬೇಕು ಎಂದರು ಸಂಘಟನೆಗಳು ಯಾವುದೇ ಇರಲಿ ಶಿಕ್ಷಕರ ಪರವಾಗಿ ಪ್ರಾಮಾಣಿಕವಾಗಿ ಸೇವೆ ಮಾಡಬೇಕು ಎಂದರು ಅಧ್ಯಕ್ಷತೆಯನ್ನು ಶಿಕ್ಷಕರ ಪರಿಷತ್ತಿನ ರಾಜ್ಯಾದ್ಯಕ್ಷರಾದ ಗುರು ತಿಗಡಿ ವಹಿಸಿದ್ದರು
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರಾದ ಎಸ್ ವಾಯ್ ಸೊರಟಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಶಿಕ್ಷಕರ ಪರಿಷತ್ತಿನ ರಾಜ್ಯ ಕೋಶಾದ್ಯಕ್ಷ ರಾದ ಶಂಕರ ಘಟ್ಟಿ ರಾಜ್ಯ ಸಂಘಟನೆಯ ಕಾರ್ಯ ದರ್ಶಿ ಎಲ್ ಐ ಲಕ್ಕಮ್ಮನವರ ಗುರು ಪೋಳ ನಾರಾಯಣ ಭಜಂತ್ರಿ,ಕಾಶಪ್ಪ ದೊಡವಾಡ, ಗಂಗವ್ವ ಕೋಟಿಗೌಡರ ಅರ್ಜುನ ದೊಡಮನಿ, ಚಂದ್ರಶೇಖರ ತಿಗಡಿ ಭಾರತಿ ಸಾಧನಿ ಆರ್ ಬಿ ಮುಂಗೋಡಿ ಅಯ್ಯಪ್ಪ ಮೊಕಾಶಿ ಆರ್ ಎಂ ಕಮ್ಮಾರ ಎ ಎಚ್ ನದಾಫ ಜವಳಿ ಹೊಲ್ತಿಕೋಟಿ, ಶಕುಂತಲಾ ಅರಮನಿ, ಸೇರಿದಂತೆ ಇತರರು ಇದ್ದರು,