This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ರಾಜ್ಯಕ್ಕೆ ಮಾದರಿಯಾದ ಸರ್ಕಾರಿ ಶಾಲಾ ಮುಖ್ಯಶಿಕ್ಷಕ – ಹೇಳಿದಂತೆ ನಡೆದುಕೊಂಡ ಕಟ್ಟಿಮನಿ ಮಾಸ್ಟರ್ ಕಾರ್ಯಕ್ಕೆ ರಾಜ್ಯವೇ ಫೀದಾ…..

WhatsApp Group Join Now
Telegram Group Join Now

ಕಲಬುರಗಿ

ರಾಜ್ಯಕ್ಕೆ ಮಾದರಿಯಾದ ಸರ್ಕಾರಿ ಶಾಲಾ ಮುಖ್ಯಶಿಕ್ಷಕ – ಹೇಳಿದಂತೆ ನಡೆದುಕೊಂಡ ಕಟ್ಟಿಮನಿ ಮಾಸ್ಟರ್ ಕಾರ್ಯಕ್ಕೆ ರಾಜ್ಯವೇ ಫೀದಾ ಹೌದು ಸಾಮಾನ್ಯವಾಗಿ ಶೈಕ್ಷಣಿಕ ಪ್ರವಾಸ ಅಂದರೆ ಸರ್ಕಾರಿ ಬಸ್ ಇಲ್ಲವೇ ಯಾವುದಾ ದರೂ ಒಂದು ಖಾಸಗಿ ವಾಹನದಲ್ಲಿ ಹೊಗೊ ದನ್ನು ನೋಡಿದ್ದೇವೆ ಕೇಳಿದ್ದೇವೆ

ಆದರೆ ಇಲ್ಲೊಬ್ಬ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರೊಬ್ಬರು ಮಕ್ಕಳನ್ನು ವಿಮಾನ ದಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಎಲ್ಲರ ಗಮನ ಸೆಳೆದಿದ್ದಾರೆ ಹೌದು ಸರ್ಕಾರಿ ಶಾಲಾ ಮಕ್ಕಳು ವರ್ಷಕ್ಕೊಮ್ಮೆ ಬಸ್‌, ಟ್ರ್ಯಾಕ್ಸ್‌, ಟೆಂಪೋದಲ್ಲಿ ಪ್ರವಾಸ ಹೋಗುವುದು ವಾಡಿಕೆ.ಆದರೆ ಗಡಿಭಾಗದ ಸರ್ಕಾರಿ ಶಾಲೆ ಹೆಣ್ಮಕ್ಕಳು ವಿಮಾನದಲ್ಲಿ ಟೂರ್‌ಗೆ ಹೋಗಿ ಬಂದಿದ್ದಾರೆ.

ಮಹಾರಾಷ್ಟ್ರದ ಗಡಿ ಭಾಗದ ಅಕ್ಕಲಕೋಟೆ ತಾಲೂಕಿನ ಮೈಂದರ್ಗಿಯ ಸರ್ಕಾರಿ ಕನ್ನಡ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಮುಖ್ಯ ಶಿಕ್ಷಕ ಮಹಾಂತೇಶ್ವರ ಕಟ್ಟಿಮನಿ ಈ ಬಾರಿ 35 ಮಕ್ಕಳನ್ನು ವಿಮಾನದಲ್ಲಿ ದೆಹಲಿಗೆ ಕರೆದು ಕೊಂಡು ಹೋಗಿದ್ದರು.ಮಕ್ಕಳ ಪಾಲಕರ ಬಳಿ ಒಂದಷ್ಟು ಹಣ ಪಡೆದು ಉಳಿದಿದ್ದನ್ನು ಸ್ವಂತ ಹಣ ಹಾಕಿ ಪ್ರವಾಸ ಖರ್ಚು ನೋಡಿಕೊಂಡಿ ದ್ದಾರೆ.

ಅಂದ ಹಾಗೆ ಕಟ್ಟಿಮನಿ ಅವರು ಮಕ್ಕಳನ್ನು ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿರೋದು ಐದನೇ ಬಾರಿ.ಈ ಹಿಂದೆ ಯಾವ್ಯಾವ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೋ ಅಲ್ಲಿನ ಮಕ್ಕಳಿಗೂ ವಿಮಾನ ದಲ್ಲೇ ಪ್ರವಾಸ ಮಾಡಿಸಿದ್ದಾರೆ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಜೇವೂರ್‌ ಹಾಗೂ ಗೌಡಗಾಂವ್‌ ಸರ್ಕಾರಿ ಕನ್ನಡ ಶಾಲೆ ಮಕ್ಕಳಿಗೆ ಬೆಂಗಳೂರು,ನಾಗಣಸೂರು ಹಾಗೂ ಈಗ ಮೈಂದರ್ಗಿ ಕನ್ನಡ ಶಾಲೆ ಮಕ್ಕಳಿಗೆ ವಿಮಾನ ದಲ್ಲಿ ದೆಹಲಿಗೆ ಕರೆದುಕೊಂಡು ಹೋಗಿ ಪ್ರವಾಸ ಮಾಡಿಸಿದ್ದಾರೆ.

ಈ ಬಾರಿ 35 ವಿದ್ಯಾ ರ್ಥಿನಿಯರು ತಲಾ ಏಳು ಸಾವಿರ ರೂ.ಪಾವತಿಸಿ ದೆಹಲಿ-ಮುಂಬೈ ಮಹಾನಗರಗಳ ಪ್ರವಾಸ ಕೈಗೊಂಡು ಖುಷಿ ಪಟ್ಟಿದ್ದಾರೆ.ಮೈಂದರ್ಗಿ ಟು ದೆಹಲಿ ಯ ಈ ಒಂದು ಪ್ರವಾಸ ರಾಜ್ಯದ ಗಮನ ಸೆಳೆದಿದೆ. ಡಿ.28ರಂದು ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ರೈಲಿನ ಮೂಲಕ ಮುಂಬೈಗೆ ತೆರಳಿದ್ದರು.

2 ದಿನ ಮುಂಬೈನಲ್ಲಿ ಗೇಟ್‌ವೇ ಆಫ್‌ ಇಂಡಿಯಾ,ಮ್ಯೂಸಿಯಂ ಹಾಗೂ ಉದ್ಯಾನವ ನಗಳನ್ನು ವೀಕ್ಷಿಸಿದ್ದಾರೆ.ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ತೆರಳಿ ಕೆಂಪುಕೋಟೆ, ರಾಜ ಘಾಟ್‌, ಸಂಸತ್‌ ಭವನ ವೀಕ್ಷಣೆ ಮಾಡಿದ್ದಾರೆ. ವಾಪಸ್‌ ರೈಲಿನ ಮೂಲಕ ಮೈಂದರ್ಗಿ ಸೇರಿ ದ್ದಾರೆ.

ಈ 7ದಿನದ ಪ್ರವಾಸಕ್ಕೆ ಒಟ್ಟು 4.50 ಲಕ್ಷ ರೂ. ಖರ್ಚಾಗಿದೆ. ಕಟ್ಟಿಮನಿ ಅವರೇ 2ಲಕ್ಷ ರೂ. ನೀಡಿರುವುದು ಶ್ಲಾಘನೀಯ. ವಿಮಾನದ ಟಿಕೆಟ್‌ 6000 ರೂ., ರೈಲ್ವೆ ಟಿಕೆಟ್‌ 1200 ರೂ., ಊಟ-ವಸತಿ ಮತ್ತು ಇತರೆ ಖರ್ಚು ಸೇರಿ ಪ್ರತಿ ದಿನವೂ 40 ಸಾವಿರ ರೂ.ಗಳಷ್ಟು ಖರ್ಚಾಗಿದೆ.

ಸುದ್ದಿ ಸಂತೆ ನ್ಯೂಸ್ ಕಲಬುರಗಿ…..


Google News

 

 

WhatsApp Group Join Now
Telegram Group Join Now
Suddi Sante Desk