ಇನ್ಸ್ಪೆಕ್ಟರ್, ಎಸಿಪಿ ಕೊಲೆ ಬೆದರಿಕೆ ಹಾಕಿದ ಪೊಲೀಸ್ ಪೇದೆ – ಅಮಾನತು ಮಾಡುವ ಬೆದರಿಕೆಗೆ ಕೊಲೆ ಬೆದರಿಕೆ…..

Suddi Sante Desk
ಇನ್ಸ್ಪೆಕ್ಟರ್, ಎಸಿಪಿ ಕೊಲೆ ಬೆದರಿಕೆ ಹಾಕಿದ ಪೊಲೀಸ್ ಪೇದೆ – ಅಮಾನತು ಮಾಡುವ ಬೆದರಿಕೆಗೆ ಕೊಲೆ ಬೆದರಿಕೆ…..

ಬೆಂಗಳೂರು

ಪೊಲೀಸ್ ಪೇದೆಯೊಬ್ಬರು ಮೇಲಾಧಿಕಾರಿಗಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಎಸಿಪಿಗೆ ಬೆದರಿಕೆ ಹಾಕಿದ್ದಾರೆ..

ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆ ಅಮಾನತಿಗೆ ಶಿಫಾರಸು ಮಾಡಲಾಗಿತ್ತು ಇದರಿಂದರಿಂದ ಕೆರಳಿದೆ ಪೇದೆ ಬೆದರಿಕೆ ಹಾಕಿ ದ್ದಾರೆ ಬಾಣಸವಾಡಿ ಠಾಣೆ ಇನ್ಸ್ ಪೆಕ್ಟರ್ ಹಾಗೂ ಎಸಿಪಿಗೆ ಪೇದೆ ರೇಣುಕಾ ನಾಯಕ್ ಬೆದರಿಕೆ ಹಾಕಿದ್ದಾನೆ.

ಇತ್ತೀಚೆಗೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾಗಿತ್ತು ರೌಡಿ ಶೀಟರ್ ಕಾರ್ತಿಕೇಯನ್ ಹತ್ಯೆ ನಡೆದಿತ್ತು.ಈ ಕೃತ್ಯದಲ್ಲಿ ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಪೊಲೀಸ್​ ಪೇದೆಗಳಾದ ಸಂತೋಷ್, ಪುಟ್ಟಸ್ವಾಮಿ,ವಿನೋದ್​ ಅವರನ್ನು ಪೂರ್ವ ವಿಭಾಗದ ಡಿಸಿಪಿ ಕುಲದೀಪ್​ ಕುಮಾರ್ ಆರ್​. ಜೈನ್​ ಅಮಾನತುಗೊಳಿಸಿದ್ದರು.

ಜೊತೆಗೆ ರೇಣುಕಾ‌ನಾಯಕ್ ಅವರ ಅಮಾನ. ತಿಗೂ ಶಿಫಾರಸು ಮಾಡಲಾಗಿತ್ತು ಹೀಗಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.