This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಾಗಿ ಪ್ರಥಮ ಹಂತದ ತರಭೇತಿ ಬಹಿಷ್ಕಾರ – ಕೊನೆಗೂ ಧ್ವನಿ ಎತ್ತಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

WhatsApp Group Join Now
Telegram Group Join Now

ಬೆಂಗಳೂರು –

ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಿ ನಿಷ್ಠಾ 3.0 ತರಬೇತಿಯನ್ನು ಬಹಿಷ್ಕರಿ ಸುವ ಕುರಿತು

ಹೌದು 2017 ರ ತಿದ್ದುಪಡಿ ಮಾಡಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ ದಿಂದ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯ ಆಗಿದ್ದು ಈಗಾಗಲೇ ಹಲವು ಬಾರಿ ಕ.ರಾ.ಪ್ರಾ.ಶಾ.ಶಿ‌.ಸಂಘವು ಮನವಿ ಹಾಗೂ ಹಲವು ರೀತಿಯ ಹಕ್ಕೊತ್ತಾಯಗಳನ್ನು ಮಾಡಿರುತ್ತದೆ.ಅಷ್ಟೇ ಅಲ್ಲದೇ ಜೂನ್ 2021ರಲ್ಲಿ ನಮ್ಮ ಸಂಘವು ತಮ್ಮಲ್ಲಿ ಈ ಬಗ್ಗೆ ಪುನಃ ಮನವಿ ನೀಡಿ ಮೂರು ತಿಂಗಳ ಕಾಲಮಿತಿಯೊಳಗೆ ಪರಿಹರಿ ಸಲು ವಿನಂತಿಸಿಲಾಗಿತ್ತು.ಸಮಸ್ಯೆಗೆ ಪರಿಹಾರ ಸಿಗದೇ ಇದ್ದಲ್ಲಿ, ಸಂಘಟನೆಯ ಮುಂದಿನ ನಡೆಯ ಬಗ್ಗೆಯೂ ಕೂಡಾ ಅದರಲ್ಲಿ ಸೂಚಿಸಿರುತ್ತದೆ.

ಸಂಘಟನೆ ಮನವಿ ಸಲ್ಲಿಸಿ ನಾಲ್ಕು ತಿಂಗಳಾದರೂ ಈ ವಿಷಯದಲ್ಲಿ ಯಾವುದೇ ಬದಲಾವಣೆಗಳಾಗಲಿ ಸಮಸ್ಯೆಗೆ ಪರಿಹಾರವಾಗಲಿ ದೊರಕಿಲ್ಲ.ಹಾಗಾಗಿ ರಾಜ್ಯಾದ್ಯಂತ ಶಿಕ್ಷಕರೆಲ್ಲರೂ ಈ ಬಗ್ಗೆ ಮುಂದಿನ ನಡೆಯ ಬಗ್ಗೆ ಒತ್ತಡ ಹಾಕುತ್ತಿದ್ದು,ನಮ್ಮ ಸಂಘಟನೆ ಯು,ಪದವೀಧರ ಶಿಕ್ಷಕರ ಸಮಸ್ಯೆಯ ಪರಿಹಾರ ಕ್ಕಾಗಿ ಹಾಗೂ ಸೇವಾನಿರತ ಪದವೀಧರ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವವರೆಗೂ ನಿಷ್ಠಾ 3.0 ತರಬೇತಿಯಲ್ಲಿ ಲಾಗಿನ್ ಆಗದೇ ತರಬೇತಿಯನ್ನು ಬಹಿಷ್ಕರಿಸಲು ತೀರ್ಮಾನಿಸಿದೆ.

ಇಲಾಖೆಯಿಂದ ಈ ಬಗ್ಗೆ ಅತೀ ಶೀಘ್ರದಲ್ಲಿ ಪರಿಹಾರ ದೊರಕದೇ ಹೋದಲ್ಲಿ ಹಂತ ಹಂತವಾಗಿ ಹೋರಾಟಗಳನ್ನು ರೂಪಿಸುವ ನಿಲುವನ್ನು ಸಂಘಟನೆ ನಿರ್ಧರಿಸಿದೆ.ಈ ಹೋರಾಟಗಳಿಗೆ ಸಂಘಟನೆಯು ಜವಾಬ್ದಾರಿಯಾಗಿರದೆ ಇಲಾಖೆಯ ಅಧಿಕಾರಿಗಳಿಂದ ಸೇವಾನಿರತ ಪದವೀಧರ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ದೊರಕದೇ ಇರುವುದೇ ಕಾರಣವಾಗಿರುತ್ತದೆ ಎಂದು ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಸಂಘದ ಸರ್ವ ಸದಸ್ಯರ ಪರವಾಗಿ ಹೇಳಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk