ಧಾರವಾಡ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳ ಕಾಮಗಾರಿ ವೀಕ್ಷಣೆ ಮಾಡಿದ ಜಿಲ್ಲಾ ಪಂಚಾಯತ CEO – ಹಲವೆಡೆ ಮಿಂಚಿನ ಸಂಚಾರ ಕಾಮಗಾರಿ ವೀಕ್ಷಣೆ ಪರಿಶೀಲನೆ…..

Suddi Sante Desk
ಧಾರವಾಡ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳ ಕಾಮಗಾರಿ ವೀಕ್ಷಣೆ ಮಾಡಿದ ಜಿಲ್ಲಾ ಪಂಚಾಯತ CEO – ಹಲವೆಡೆ ಮಿಂಚಿನ ಸಂಚಾರ ಕಾಮಗಾರಿ ವೀಕ್ಷಣೆ ಪರಿಶೀಲನೆ…..

ಹೆಬ್ಬಳ್ಳಿ

ಧಾರವಾಡ ಜಿಲ್ಲೆಯ ಹಲವು ಕಡೆಗಳಲ್ಲಿ ನಡೆಯುತ್ತಿರುವ ಶಾಲೆಗಳ ಕಾಮಗಾರಿ ಯನ್ನು ಜಿಲ್ಲಾ ಪಂಚಾಯತ CEOಶ್ರೀಮತಿ ಸ್ವರೂಪ ಟಿ ಕೆ ವೀಕ್ಷಣೆ ಮಾಡಿದರು ಹೌದು ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿಗಳು ಇವರು  ಧಾರವಾಡ ಗ್ರಾಮಿಣ ತಾಲೂಕಿನ ಶಾಲೆಗಳಲ್ಲಿ ನಡೆಯುತ್ತಿರುವ ಕಾಮಗಾರಿ ಗಳನ್ನು ವೀಕ್ಷಣೆ ಮಾಡಿದರು

ವಿವೇಕ ಮತ್ತು ಸಿ ಎಸ್ ಆರ್ ಕೋಲ್ ಇಂಡಿಯಾ ಯೋಜನೆಯಲ್ಲಿ ಸ,ಪ್ರೌಢ ಶಾಲೆ ಮಾರಡಗಿ ಸ,ಮಾ,ಪ್ರಾ ಶಾಲೆ ಶಿವಳ್ಳಿ, ಕೆ,ಪಿ,ಎಸ್ ಕರಡಿಗುಡ್ಡ, ಸ,ಹೆ,ಮ,ಶಾಲೆ ತಡಕೋಡ ಅಗಸನಹಳ್ಳಿ, ದುಬ್ಬನಮರಡಿ,ಸ,ಪ್ರೌಢ ಮತ್ತು ಪ್ರಾಥಮಿಕ ಶಾಲೆ ಮಾದನಭಾವಿ ಸ,ಹಿ,ಪ್ರಾ ಶಾಲೆ ಬೋಗೂರ ಉರ್ದು ವೆಂಕಟಾಪೂರ,

ಸಿದ್ದರಕಾಲನಿ ವೆಂಕಟಾಪೂರ ಮತ್ತು ಸ,ಹಿ,ಪ್ರಾ ಶಾಲೆ ಬೇಲೂರ ಶಾಲೆಗಳಲ್ಲಿ ಮತ್ತು ಧಾರವಾಡ ಶಹರ ದಲ್ಲಿ ಕಮಲಾಪುರ ನಂ 4 ,ಟಿ,ಟಿ,ಆಯ್ ಟಿ,ಸಿ,ಎಮ್,ನವಲೂರ ಛಾವಣಿ ಶ್ರೀರಾಮ ನಗರ,ಕೆಲಗೇರಿ ಮತ್ತು ಗುಲಗಂಜಿಕೊಪ್ಪ ಶಾಲೆಗಳಲ್ಲಿ ನಡೆದಿರುವ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಸಂದರ್ಶನ ಮಾಡಿ, ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ತ್ವರಿತಗತಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣ ಗೊಳಿಸಲು ನಿರ್ದೇಶನ ನೀಡಿದರು.

ಈ ಒಂದು ಸಂದರ್ಭದಲ್ಲಿ ಎಸ್ ಎಸ್ ಕೆಳದಿಮಠ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಧಾರವಾಡ, ಆರ್ ಆರ್ ಸದಲಗಿ ಕ್ಷೇತ್ರ ಶಿಕ್ಷಣಾ ಧಿಕಾರಿಗಳು ಧಾರವಾಡ ಗ್ರಾಮೀಣ ಮತ್ತು ಅಶೋಕ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಧಾರವಾಡ ಶಹರ ಮತ್ತು ಲೋಕೋಪಯೋಗಿ ಇಲಾಖೆಯ ಅಭಿಯಂತರರು ಇದ್ದರು.

ಸುದ್ದಿ ಸಂತೆ ನ್ಯೂಸ್ ಹೆಬ್ಬಳ್ಳಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.