ರಾಮದುರ್ಗ ತಾಲ್ಲೂಕು ಘಟಕದ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಫಲಿತಾಂಶ – ಹಾಲಿ ಅಧ್ಯಕ್ಷ ಈರನಗೌಡ ಪವಾಡಿಗೌಡ್ರ ಪುನರಾಯ್ಕೆ…..ಖಜಾಂಚಿಯಾಗಿ B B ಹರನಟ್ಟಿ ಆಯ್ಕೆ ತಾಲ್ಲೂಕು ಘಟಕದ ಕಂಪ್ಲೀಟ್ ಮಾಹಿತಿ…..

Suddi Sante Desk
ರಾಮದುರ್ಗ ತಾಲ್ಲೂಕು ಘಟಕದ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಫಲಿತಾಂಶ – ಹಾಲಿ ಅಧ್ಯಕ್ಷ ಈರನಗೌಡ ಪವಾಡಿಗೌಡ್ರ ಪುನರಾಯ್ಕೆ…..ಖಜಾಂಚಿಯಾಗಿ B B ಹರನಟ್ಟಿ ಆಯ್ಕೆ ತಾಲ್ಲೂಕು ಘಟಕದ ಕಂಪ್ಲೀಟ್ ಮಾಹಿತಿ…..

ರಾಮದುರ್ಗ

ರಾಮದುರ್ಗ ತಾಲ್ಲೂಕು ಘಟಕದ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಫಲಿತಾಂಶ – ಹಾಲಿ ಅಧ್ಯಕ್ಷ ಈರನಗೌಡ ಪವಾಡಿಗೌಡ್ರ ಪುನರಾಯ್ಕೆ….. ಖಜಾಂಚಿಯಾಗಿ B B ಹರನಟ್ಟಿ ಆಯ್ಕೆ ತಾಲ್ಲೂಕು ಘಟಕದ ಕಂಪ್ಲೀಟ್ ಮಾಹಿತಿ

ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು ಇನ್ನೂ ಇತ್ತ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕು ಘಟಕದ ಫಲಿತಾಂ ಶವೂ ಕೂಡಾ ಪ್ರಕಟಗೊಂಡಿದ್ದು ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಕಂದಾಯ ಇಲಾಖೆಯ ಈರನಗೌಡ ವೈ. ಪವಾಡಿಗೌಡ್ರ 33 ಮತಗಳನ್ನು ಪಡೆದು ಪುನರಾಯ್ಕೆಯಾಗಿದ್ದಾರೆ.

ಇನ್ನೂ ಇವರ ಪ್ರತಿಸ್ಪರ್ಧಿ ಶಿಕ್ಷಣ ಇಲಾಖೆಯ ರಮೇಶ ಬಸಪ್ಪ ಅಣ್ಣಿಗೇರಿ ಕೇವಲ 2 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.ರಾಜ್ಯ ಪರಿಷತ್ ಸದಸ್ಯರಾಗಿ ಆರೋಗ್ಯ ಇಲಾಖೆಯ ಮಂಜುನಾಥ ಶಿ. ಪರಪ್ಪನವರ, ಖಜಾಂಚಿಯಾಗಿ ಪದವಿಪೂರ್ವ ಕಾಲೇಜಿನ ಬಿ.ಬಿ. ಹರನಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ಕಾರ್ಯದರ್ಶಿಯಾಗಿ ಪ್ರೌಢಶಾಲೆಯ ಎಂ.ಎಸ್.ಜಂಗವಾಡ, ಗೌರವಾಧ್ಯಕ್ಷರಾಗಿ ಕೃಷಿ ಇಲಾಖೆಯ ಎ.ಬಿ.ವಾಲಿಕಾರ ಅವರನ್ನು ಇದೇ ಸಂದರ್ಭದಲ್ಲಿ ನೇಮಕ ಮಾಡಲಾಯಿತು.ಜಿ.ವಿ. ಪಾಟೀಲ (ಪಶುಸಂಗೋಪನೆ), ತಿಮ್ಮಣ್ಣ ಲ. ಪಾಟೀಲ, ಲೋಕೇಶ ರಾ. ಚವ್ಹಾಣ (ಕಂದಾಯ ಇಲಾಖೆ), ಸಿದ್ಧಯ್ಯ ರು. ಗುಡಿ (ನೀರಾವರಿ,) ಗಂಗವ್ವ ಮ. ಪಾಟೀಲ, ವಿ. ಎ. ಮುಗಳಿ, ರಮೇಶ ಬ. ಅಣ್ಣಿಗೇರಿ (ಪ್ರಾಥಮಿಕ ಶಾಲೆ,) ಅಶೋಕ ಮ. ಮದಕಟ್ಟಿ(ಬಿಇಓ ಕಛೇರಿ), ಸುನಂದಾ ಎಂ. ವಾಲಿ, ವಸಂತ ಎಲ್. ಚಿನಿವಾಲರ (ಸಮಾಜ ಕಲ್ಯಾಣ)

ಚನ್ನಬಸಪ್ಪ ಶಿ. ಬಿರಾದಾರ (ಬಿಸಿಎಂ,) ಬಸಪ್ಪ ಕೆ. ಗಡ್ಡೆನ್ನವರ (ಅರಣ್ಯ ಇಲಾಖೆ,) ರಾಯಪ್ಪ ಚಂ. ಅವರಾದಿ, ರವಿ ಅ. ಸತಾರಿ, ಬಿ. ಜಿ. ಉಣಕಲ್ (ಆರೋಗ್ಯ ಇಲಾಖೆ), ಮಕ್ತುಮಸಾಬ ಕ. ಹಂಪಿಹೋಳಿ (ತೋಟಗಾರಿಕೆ), ಸಂತೋಷ ಭಜಂತ್ರಿ (ಉಪಖಜಾನೆ), ಸುರೇಶ ಗಿ. ಮಡಿವಾಳರ (ಭೂಮಾಪನ), ಲಕ್ಕಪ್ಪ ಪ. ದೇವಕ್ಕನವರ (ನ್ಯಾಯಾಂಗ), ಅಶೋಕ ದು. ಹುಣಶಿಕಟ್ಟಿ,

ಶ್ರೀಕಾಂತ ಗುರ್ಲಹೊಸೂರು(ತಾಪಂ), ಮಾಧುರಿ ಮಡಿವಾಳರ (ಸಿಡಿಪಿಓ), ಕಾಶಿಬಾಯಿ ಗು. ಗೊಣ್ಯಾ ಗೋಳ (ಮೀನುಗಾರಿಕೆ), ಶಿವಾನಂದ ಜಿ. ಮಠ (ಎಪಿಎಂಸಿ), ಸಂಜೀವ ಹಮ್ಮನ್ನವರ (ಆಹಾರ), ನಿಂಗಪ್ಪ ದುಂಡಾನಟ್ಟಿ (ಅಬಕಾರಿ), ಶಿವಕುಮಾರ ಅಂಗಡಿ (ಐಟಿಐ), ಶಶಿಕಾಂತ ಅ. ಕಾಂಬಳೆ (ಗುಣನಿಯಂತ್ರಣ) ನಿದೇರ್ಶಕರಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಕಂದಾಯ ಇಲಾಖೆಯ ಎ.ಎಸ್.ತಹಶೀಲ್ದಾರ ಮತ್ತು ಸಹಾಯಕ ಚುನಾವಣಾ ಧಿಕಾರಿಯಾಗಿ ಸಹಕಾರ ಇಲಾಖೆಯ ಎಸ್.ಆರ್. ಹುರಕಡ್ಲಿ ಕಾರ್ಯನಿರ್ವಹಿಸಿದ್ದಾರೆ.ಇನ್ನೂ ನೂತನವಾಗಿ ತಾಲ್ಲೂಕು ಘಟಕದಿಂದ ಆಯ್ಕೆಯಾಗ ನೂತನ ಸದಸ್ಯರಿಗೆ ತಾಲ್ಲೂಕು ಘಟಕದ ಸರ್ವ ಸರ್ಕಾರಿ ನೌಕರರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ರಾಮದುರ್ಗ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.