ಸರ್ಕಾರಿ ನೌಕರರ ಸಂಘದಲ್ಲಿ ಅಕ್ರಮ ಆರೋಪ ನೌಕರರಿಂದ Mla,Mlc ಯವರಿಗೆ ಮನವಿ – ನೌಕರರಿಂದ ಮನವಿ ಸೂಕ್ತ ಕ್ರಮಕ್ಕೆ ಒತ್ತಾಯ…..

Suddi Sante Desk
ಸರ್ಕಾರಿ ನೌಕರರ ಸಂಘದಲ್ಲಿ ಅಕ್ರಮ ಆರೋಪ ನೌಕರರಿಂದ Mla,Mlc ಯವರಿಗೆ ಮನವಿ – ನೌಕರರಿಂದ ಮನವಿ ಸೂಕ್ತ ಕ್ರಮಕ್ಕೆ ಒತ್ತಾಯ…..

ಹುಮನಾಬಾದ್

ಸರ್ಕಾರಿ ನೌಕರರ ಸಂಘದ ಹುಮನಾಬಾದ್ ತಾಲ್ಲೂಕು ಘಟಕದ ಚುನಾವಣೆಯಲ್ಲಿ ಅಕ್ರಮವಾಗಿ ನಡೆದಿದೆ ಎಂದು ಆರೋಪಿಸಿ ಸರ್ಕಾರಿ ನೌಕರರು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ ಸಿದ್ದೇಶ್ವರ ಮಾತನಾಡಿ ಸರ್ಕಾರಿ ನೌಕರರ ಚುನಾವಣೆ ಸಂಪೂರ್ಣ ಅಕ್ರಮದಿಂದ ನಡೆದಿದೆ.

ಚುನಾವಣಾಧಿಕಾರಿಗಳು ದಿ. 11ರಿಂದ 18 ವರೆಗೆ ಯಾವುದೇ ನಾಮಪತ್ರ ಸ್ವೀಕರಿಸದೆ ಕಚೇರಿ ಬಂದ್ ಮಾಡಿದ್ದರು ಇದರಿಂದ ಅನೇಕ ಸರ್ಕಾರಿ ನೌಕರರು ನಾಮಪತ್ರ ಸಲ್ಲಿಕೆಯಿಂದ ವಂಚಿತರಾಗಿದ್ದರು ಆದರೆ ಈಚೆಗೆ ಸಹ ಚುನಾವಣಾ ಅಧಿಕಾರಿ ಮಾರುತಿ ಪೂಜಾರಿ ಅವರು ಏಕಾಏಕಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿ ಪ್ರಮಾಣ ಪತ್ರ ವಿತರಿಸಿ ಸಂಪೂರ್ಣ ಕಾನೂನು ಉಲ್ಲಂಘನೆ ಮಾಡಿದ್ದಾರೆ ಈ ಬಗ್ಗೆ ಈಗಾಗಲೇ ನ್ಯಾಯಾಲಯ ಮೊರೆ ಹೋಗಲಾಗಿದೆ ಎಂದರು.‌

ಶರದಕುಮಾರ ನಾರಾಯಣ ಪೇಟಕರ್ ಮಾತನಾಡಿ ‘ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗಶೆಟ್ಟಿ ಡುಮಣಿ ಅವರು ಸರ್ಕಾರಿ ನೌಕರರ ಹೆಸರಿನಲ್ಲಿ ಅಕ್ರಮ ಮತದಾ ರರ ಪಟ್ಟಿ ತಯಾರಿಸಿಕೊಂಡಿದ್ದಾರೆ. ತಮಗೆ ಬೇಕಾದವ ರಿಂದ ನಾಮಪತ್ರ ಸಲ್ಲಿಕೆ ಮಾಡಿಕೊಂಡು ವಾಮ ಮಾರ್ಗದಿಂದ ಏಕಾಏಕಿ ಅಭ್ಯರ್ಥಿಗಳ ಆಯ್ಕೆ ಮಾಡಿ ಘೋಷಣೆ ಮಾಡಿಕೊಂಡಿದ್ದಾರೆ. ಈ ಅನ್ಯಾಯ ಸರಿಪಡಿ ಸಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರೆಡ್ಡಿ ಮಾಲಿಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗರಾಜ ಅರಸ್, ಪಿಡಿಒ ಮಲ್ಲಿಕಾರ್ಜುನ, ಪಶು ವೈದ್ಯಾಧಿಕಾರಿ ಡಾ. ಶಾಂತಕುಮಾರ ಸಿದ್ಧೇಶ್ವರ, ಮುರುಘೇಂದ್ರ ಸಜ್ಜನಶಟ್ಟಿ, ವೀರಣ್ಣ ಪಂಚಾಳ,ಶಿವರಾಜ ಮೇತ್ರೆ, ಲೋಕೇಶ ರೆಡ್ಡಿ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಮನಾಬಾದ್……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.