ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆ – ಶಿಕ್ಷಕರನ್ನು ಹೊರಗೆ ನಿಲ್ಲಿಸಿ ಪ್ರತಿಭಟನೆ…..

Suddi Sante Desk
ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆ – ಶಿಕ್ಷಕರನ್ನು ಹೊರಗೆ ನಿಲ್ಲಿಸಿ ಪ್ರತಿಭಟನೆ…..

ಲಿಂಗಸುಗೂರು

ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣ ವಿಳಂಬ ಧೋರಣೆ ವಿರೋಧಿಸಿ ಮಕ್ಕಳ ಸಮೇತ ಪಾಲಕರು ಪ್ರತಿಭಟನೆ ನಡೆಸಿದ ಘಟನೆ (ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಮಾವಿನಭಾವಿ ಗ್ರಾಮದಲ್ಲಿ ನಡೆದಿದೆ.ಪ್ರತಿಭಟನೆ ನಡೆಸಿ ಶಾಲಾ ಮುಖ್ಯದ್ವಾರ ಬಂದ್ ಮಾಡಿ ಶಿಕ್ಷಕರನ್ನು ಹೊರಗಡೆ ನಿಲ್ಲಿಸಿದ್ದು ಕಂಡು ಬಂದಿತು

ಆಡಳಿತ ವ್ಯವಸ್ಥೆ ವಿರುದ್ಧ ಧಿಕ್ಕಾರ ಕೂಗಿದರು.ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಡಿ 2020-21ರಲ್ಲಿ ₹ 54ಲಕ್ಷ ವೆಚ್ಚದಲ್ಲಿ 5 ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು ಆದರೆ ಕೇವಲ ಮೂರು ಕೊಠಡಿಗಳನ್ನು ನಿರ್ಮಿಸಲಾಗಿದೆ. ಉಳಿದೆರಡು ಕೊಠಡಿಗಳ ಕಾಮಗಾರಿಯನ್ನೂ ಆರಂಭಿಸಿಲ್ಲ ಎಂದು ಪಾಲಕ ರುದ್ರಗೌಡ ಮಾವಿನಭಾವಿ ಆರೋಪಿಸಿದರು.

ಕೊಠಡಿಗಳು ಇಲ್ಲದ ಕಾರಣ ವಿದ್ಯಾರ್ಥಿಗಳ ಕಲಿಕೆ ತೊಂದರೆಯಾಗುತ್ತಿದೆ. ಆದರೆ, ಮಕ್ಕಳ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಕಂಡು ಬಂದಿತು.

ಸುದ್ದಿ ಸಂತೆ ನ್ಯೂಸ್ ರಾಯಚೂರು……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.