ಅಂಜಪೀರ್ ಖಾದ್ರಿಗೆ ಶಿಗ್ಗಾವಿ ಗೆಲುವಿನ ಗಿಫ್ಟ್ ನೀಡಿದ ರಾಜ್ಯ ಸರ್ಕಾರ – ಹೆಸ್ಕಾಂ ಅಧ್ಯಕ್ಷರಾಗಿ ನೇಮಕ…..ಶುಕ್ರವಾರ ವಹಿಸಿಕೊಳ್ಳಲಿದ್ದಾರೆ ಅಧಿಕಾರ…..

Suddi Sante Desk
ಅಂಜಪೀರ್ ಖಾದ್ರಿಗೆ ಶಿಗ್ಗಾವಿ ಗೆಲುವಿನ ಗಿಫ್ಟ್ ನೀಡಿದ ರಾಜ್ಯ ಸರ್ಕಾರ – ಹೆಸ್ಕಾಂ ಅಧ್ಯಕ್ಷರಾಗಿ ನೇಮಕ…..ಶುಕ್ರವಾರ ವಹಿಸಿಕೊಳ್ಳಲಿದ್ದಾರೆ ಅಧಿಕಾರ…..

ಹಾವೇರಿ

ಅಂಜಪೀರ್ ಖಾದ್ರಿಗೆ ಶಿಗ್ಗಾವಿ ಗೆಲುವಿನ ಗಿಫ್ಟ್ ನೀಡಿದ ರಾಜ್ಯ ಸರ್ಕಾರ – ಹೆಸ್ಕಾಂ ಅಧ್ಯಕ್ಷರಾಗಿ ನೇಮಕ….. ಶುಕ್ರವಾರ ವಹಿಸಿಕೊಳ್ಳಲಿದ್ದಾರೆ ಅಧಿಕಾರ…..

ಹೌದು ಶಿಗ್ಗಾವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಬಂಡಾಯವೆದ್ದು ನಂತರ ವರಿಷ್ಠರ ಸೂಚನೆಯಂತೆ ಕಣದಿಂದ ಹಿಂದೆ ಸರಿದು ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಿದ್ದ ಅಂಜಪೀರ್ ಖಾದ್ರಿಗೆ ರಾಜ್ಯ ಸರ್ಕಾರ ಭರ್ಜರಿ ಗಿಪ್ಟ್ ನೀಡಿದೆ.ಟಿಕೆಟ್‌ಗಾಗಿ ಪಟ್ಟು ಹಿಡಿದು ನಂತರ ಹಿಂದೆ ಸರಿದು ಯಾಸಿರ್ ಅಹ್ಮದ್ ಖಾನ್ ಪಠಾಣ್‌‌ ಗೆಲುವಿಗೆ ಕಾರಣರಾಗಿದ್ದಾರೆ ಖಾದ್ರಿ ಫಲಿತಾಂಶ ಬಂದು ಎರಡೇ ದಿನಗಳಲ್ಲಿ ಇದೀಗ ಶಿಗ್ಗಾವಿ ಗೆಲುವಿನ ಬಳಿಕ ಅಜ್ಜಂಪೀರ್ ಖಾದ್ರಿಗೆ ಸರ್ಕಾರಿ ಗಿಫ್ಟ್ ನೀಡಿದೆ.

ಶಿಗ್ಗಾವಿ ಉಪ ಚುನಾವಣೆ ಕಾಂಗ್ರೆಸ್ ಗೆಲುವಿನ ಹಿನ್ನೆಲೆಯಲ್ಲಿ ಟಿಕೆಟ್ ತ್ಯಾಗ ಮಾಡಿದ್ದ ಅಜ್ಜಂಪೀರ್ ಖಾದ್ರಿಗೆ ರಾಜ್ಯ ಸರ್ಕಾರ ಗೆಲುವಿನ ಗಿಫ್ಟ್ ನೀಡಿದೆ. ಅಜ್ಜಂಪೀರ್ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷ ಗಾದಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂಧನ ಇಲಾಖೆಯ ಅಧೀನ ಕಾರ್ಯದರ್ಶಿ ವಿನೋದ್ ಕುಮಾರ್ ಸರ್ಕಾರದ ಪರವಾಗಿ‌ ಈ ಒಂದು ಆದೇಶವನ್ನು ಹೊರಡಿಸಿದ್ದಾರೆ.ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಪಠಾಣ್‌ರನ್ನು ಗೆಲ್ಲಿಸಿಕೊಂಡು ಬರೋ ಟಾಸ್ಕ್ ನೀಡಿದ್ದ ಕಾಂಗ್ರೆಸ್ ಹೈಕಮಾಂಡ್, ಇದೀಗ ಖಾದ್ರಿಗೆ ಗಿಫ್ಟ್ ನೀಡಿದೆ.

ಬಿಜೆಪಿ ಭದ್ರಕೋಟೆಯಾಗಿದ್ದ ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಸೋಲಿನ ರುಚಿ ತೋರಿಸಿದೆ.ಸತತ ಆರು ಚುನಾವಣೆಗಳ ನಂತರ ಗೆದ್ದು ಬೀಗಿರೋ ಕಾಂಗ್ರೆಸ್ ಇದೀಗ ಖಾದ್ರಿಗೆ ಗಿಫ್ಟ್ ನೀಡಿದೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಯಾಸಿರ್ ಖಾನ್ ಪಠಾಣ್ ಅವರಿಗೆ ಟಿಕೆಟ್ ನೀಡಿದ ಬಳಿಕ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ ಅವರು ಭಂಡಾಯದ ಭಾವುಟ ನೆಟ್ಟಿದ್ದರು. ಈ ಹಿನ್ನೆಲೆಯಲ್ಲಿ ಭರತ್ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು.

ಆದ್ರೆ ಕೊನೇ ಹಂತದಲ್ಲಿ ಖಾದ್ರಿ ಅವರ ಮನವೊಲಿಸು ವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿತ್ತು. ಮಾತ್ರವಲ್ಲ ಇಡೀ ಚುನಾವಣೆಯಲ್ಲಿ ಖಾದ್ರಿ ಅವರು ಪಠಾಣ್ ಜೊತೆಗೆ ನಿಂತು ಚುನಾವಣೆ ಎದುರಿಸಿ ಗೆಲುವಿನ ನಗೆ ಬೀರಿದರು ಇದನ್ನೇಲ್ಲವನ್ನು ತಿಳಿದ ಪಕ್ಷದ ವರಿಷ್ಠರು ಸಧ್ಯ ಖಾದ್ರಿಯವರಿಗೆ ಸಧ್ಯ ಗೆಲುವಿನ ಕೊಡುಗೆ ನೀಡಿ ದ್ದಾರೆ.ಶಿಗ್ಗಾವಿ ಕ್ಷೇತ್ರದಲ್ಲಿ ಪಠಾಣ್ ಗೆಲುವು ಸರಳ ವಾಗಿರಲಿಲ್ಲ ಏನೇಲ್ಲಾ ಕಸರತ್ತು ಮಾಡಿದರು ರಾಜ್ಯ ಸರ್ಕಾರದ ಸಚಿವರು ಠಿಕಾಣೆ ಹೂಡಿದ್ದರು ಕೂಡಾ ಖಾದ್ರಿಯವರ ನಿರಂತರ ಸುತ್ತಾಟ ತಂತ್ರಗಾರಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಇದೇ ಪ್ರಮುಖ ಕಾರಣವಾಗಿದೆ.

ಎರಡನೇ ಅತೀ ಹೆಚ್ಚು ಮತ ಹೊಂದಿರುವ ಮುಸ್ಲಿಂ ಸಮುದಾಯದವರ ವಿಶ್ವಾಸ ಗಳಿಸುವಲ್ಲಿ ಮತ್ತು ಇನ್ನೂಳಿದ ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತಗೆದುಕೊಂಡು ಮತ ಸೆಳೆಯಲು ಖಾದ್ರಿಯವರು ತಂತ್ರಗಾರಿಕೆಯನ್ನು ಏಣೆದರು ಹೀಗಾಗಿ ಗೆಲುವು ಸುಲಭವಾಯಿತು ಅಲ್ಲದೇ ಕೊಟ್ಟ ಮಾತಿನಂತೆ ಖಾದ್ರಿಯವರು ಕ್ಷೇತ್ರದಲ್ಲಿ ಇದ್ದುಕೊಂಡು ಸುತ್ತಾಟ ಮೇಲಿಂದ ಮೇಲೆ ಸಭೆ ಅಬ್ಬರದ ಪ್ರಚಾರ ಹೀಗೆ ಮಾಡುವ ಮೂಲಕ ಅಹಿಂದ ಮತಗಳನ್ನು ಸೆಳೆ ಯುವಲ್ಲಿ ಯಶಸ್ವಿಯಾಗಿ ಪಕ್ಷವು ಕೊಟ್ಟ ಟಾಸ್ಕ್ ನಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಏನೇ ಆಗಲಿ ಖಾದ್ರಿ ಯವರು ತಮ್ಮ ವರ್ಚಸ್ಸನ್ನು ಕ್ಷೇತ್ರದಲ್ಲಿ ಚುನಾವಣೆಯ ಫಲಿತಾಂಶದ ಮೂಲಕ ತೋರಿಸಿಕೊಟ್ಟಿದ್ದು ಪಕ್ಷದ ರಾಜ್ಯದ ಮುಖಂಡರಿಗೆ ಈ ಒಂದು ಗೆಲುವಿನ ಮೂಲಕ ಶಿಗ್ಗಾವಿಯಲ್ಲಿ ಖಾದ್ರಿ ಶಕ್ತಿ ಏನು ಎಂಬೊದನ್ನು ತೋರಿಸಿಕೊಟ್ಟಿದ್ದಾರೆ ಈ ಒಂದು ಗೆಲುವಿಗೆ ಕಾರಣರಾದ ಇವರಿಗೆ ಹೆಸ್ಕಾಂ ಹುದ್ದೆಯನ್ನು ನೀಡಿದರೆ ಸಾಲದು ಕೊಟ್ಟ ಮಾತನ್ನು ಖಾದ್ರಿಯವರು ಉಳಿಸಿಕೊಂಡಿದ್ದು ಅತ್ತ ರಾಜ್ಯ ಸರ್ಕಾರವು ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಿದೆ ಈ ಒಂದು ನಿರೀಕ್ಷೆಯಲ್ಲಿ ಖಾದ್ರಿ ಯವರ ಅಭಿಮಾನಿಗಳಿದ್ದಾರೆ.

ಇನ್ನೂ ಹೆಸ್ಕಾಂ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರವನ್ನು ವಹಿಸಿಕೊಳ್ಳಲಿದ್ದು ಈ ಒಂದು ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಪಕ್ಷದ ಮುಖಂಡರು ಆಪ್ತರು ಅಭಿಮಾನಿಗಳು ಪಾಲ್ಗೊಳ್ಳು ವಂತೆ ಕಾಂಗ್ರೇಸ್ ಪಕ್ಷದ ಯುವ ಮುಖಂಡ ಮಹಮ್ಮದ್ ರಫೀಕ್ ಚಿಕ್ಕುಂಬಿ ಕರೆ ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹಾವೇರಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.